22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಊರವರಿಂದ ಶ್ರಮದಾನ

ಬಳ್ಳಮಂಜ ಮಹತೋಭಾರ ಶ್ರೀ ಅನಂತೇ ಶ್ವರ ಸ್ವಾಮಿ ದೇವಸ್ಥಾನದ ಈಶ್ವರ ಗರ್ಭ ಗುಡಿ ಹಾಗೂ ತೀರ್ಥ ಮಂಟಪದ ನವೀಕರಣದ ಪ್ರಯುಕ್ತ ಹಳೆ ಗರ್ಭ ಗುಡಿಯ ನೆಲಸಮ ಮಾಡುವ ಕಾಯಕ ಪಂಚಾಂಗ ನಿರ್ಮಾಣ ಅಂಗಣವನ್ನು ಅಗೆದು ಕಾಂಕ್ರೀಟ್ ಹಾಕುವುದು ಹಾಗೂ ಹತ್ತು ಹಲವು ಕೆಲಸಗಳನ್ನು ಗ್ರಾಮದ ಸುಮಾರು 200 ಹಿಂದೂ ಭಾಂದವರು ಒಟ್ಟು ಸೇರಿ ಶ್ರಮದಾನ ಮಾಡಿದರು.

ಈ ವೇಳೆ ಶ್ರಮದಾನದಿಂದ ದೇವಾಲಯಕ್ಕೆ ಅಂದಾಜು ಸುಮಾರು 4 ಲಕ್ಷಗಳಷ್ಟು ಉಳಿತಾಯವಾಗಿರುತ್ತದೆ ಎಂದು ಅನುವಂಶಿಯ ಆಡಳಿತ ಮೊಕ್ತೇಸರರು ತಿಳಿಸಿದ್ದು ಈ ರೀತಿಯ ಸಹಕಾರ ಊರಿನ ಭಕ್ತಾದಿಗಳಿಂದ ದೊರಕಿದರೆ ದೇವಾಲಯಗಳ ಅಭಿವೃದ್ಧಿಗೆ ಮುನ್ನುಗಲು ಆಡಳಿತದವರಿಗೆ ಧೈರ್ಯ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟು ಸೇರಿದ ಎಲ್ಲಾ ಕರಸೇವಕರನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಸ್ವಚ್ಛತೆ ಚಪ್ಪರ ಹಾಕುವುದು ಇತ್ಯಾದಿ ಬ್ರಹ್ಮ ಕಲಶದ ಪೂರ್ವ ಭಾವಿ ಕೆಲಸಗಳು ನಡೆಯಲಿದೆ . ಮಾ.29ರಿಂದ ಎ.6 ರವರೆಗೆ ನಡೆಯುವ ಶ್ರೀ ದೇವರ ಬ್ರಹ್ಮಕಲಶ ಇತ್ಯಾದಿಗಳಿಗೆ ಎಲ್ಲರ ಸಹಕಾರವನ್ನು ಕೋರಿದರು.

Related posts

ಗರ್ಡಾಡಿಯಲ್ಲಿ ಮದಿರಾ ಗ್ರ್ಯಾಂಡ್ ಬಾರ್ ಆಂಡ್ ರೆಸ್ಟೋರೆಂಟ್ ಉದ್ಘಾಟನೆ

Suddi Udaya

ಮೇ 4: ವಿದ್ಯುತ್ ನಿಲುಗಡೆ

Suddi Udaya

ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ.12 ಡಿವಿಡೆಂಡ್ ಘೋಷಣೆ

Suddi Udaya

ವೇಣೂರು: ಚಂದಯ್ಯ ದೇವಾಡಿಗ ನಿಧನ

Suddi Udaya

ಓಡೀಲು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

Suddi Udaya
error: Content is protected !!