ಬೆಳ್ತಂಗಡಿ : ನೂತನವಾಗಿ ಸ್ಥಾಪನೆಗೊಂಡ ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಫದ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಫೆ.9ರಂದು ಉಜಿರೆಯ ಶಾರದಾ ಮಂಟಪದಲ್ಲಿ ಜರಗಿತು.

ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘಟನೆಯ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ನೂತನ ಮಹಿಳಾ ಘಟಕದ ಘಟಕದ ಅಧ್ಯಕ್ಷರಾಗಿ ಅಶ್ವಿನಿ ಎ.ಹೆಬ್ಬಾರ್, ಉಪಾಧ್ಯಕ್ಷರಾಗಿ ಪ್ರಜ್ಞಾ ಹೆಬ್ಬಾರ್, ಕಾರ್ಯದರ್ಶಿಯಾಗಿ ಡಾ.ದೀಪಾಲಿ ಎಸ್.ಡೋಂಗ್ರೆ, ಜತೆ ಕಾರ್ಯದರ್ಶಿಯಾಗಿ ಉಷಾಕಿರಣ ಆಠವಳೆ, ಕೋಶಾಧಿಕಾರಿಯಾಗಿ ಡಾ. ಸುಷ್ಮಾ ಡೋಂಗ್ರೆ ಆಯ್ಕೆಯಾದರು.
ಮುಂಡಾಜೆ ವಲಯದ ಸದಸ್ಯರಾಗಿ ಉಷಾ ಫಡಕೆ, ಪೂರ್ಣಾ ಗೋಖಲೆ, ವಿದ್ಯಾ ಚಿಪಳೂಣಕರ್, ಉಜಿರೆ-ಬೆಳ್ತಂಗಡಿ ವಲಯದ ಸದಸ್ಯರಾಗಿ ಗೀತಾ ಬೆಂಡೆ,ಅಂಜಲಿ ಫಡಕೆ,ರಶ್ಮಿ ಪಟವರ್ಧನ್,ಶಿಶಿಲ- ಹೊಸಮಠ ವಲಯದ ಸದಸ್ಯರಾಗಿ ಪಂಚಮಿ ಗೋಗಟೆ,ವಿದ್ಯಾ ಗೋಗಟೆ, ಆಶಾ ಹೆಬ್ಬಾರ್,ಪುಷ್ಪಾ ಹೆಬ್ಬಾರ್, ಸೂಳಬೆಟ್ಟು- ಫಂಡಿಜೆ ವಲಯದಿಂದ ಚೈತ್ರಾ ನಾತು,ದಿವ್ಯಾ ಅಭ್ಯಂಕರ್ ಆಯ್ಕೆಯಾದರು.
ಸದಸ್ಯರಾಗಿ ಸುಷ್ಮಾ ಭಿಡೆ, ಲತಾ ಭಟ್ ಅರೆಕಲ್ಲು ಹಾಗೂ ಪ್ರಜ್ಞಾ ಮೆಹಂದಳೆ ಆಯ್ಕೆಯಾದರು.











