ಗುರುವಾಯನಕೆರೆ: ನಮ್ಮ ಮನೆ ಹವ್ಯಕ ಭವನದಲ್ಲಿ ಮಾ.04 ರಂದು ಜರುಗಲಿರುವ ಆರಾಧನಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಮಹಾಸ್ವಾಮಿಗಳವರು ಬಿಡುಗಡೆಗೊಳಿಸಿ ಆಶೀರ್ವಾದ ಮಂತ್ರಾಕ್ಷತೆ ನೀಡಿದರು.

ಈ ಸಂದರ್ಭದಲ್ಲಿ ಮಹಾಮಂಡಲ ಮಾತೃ ಪ್ರಧಾನೆಯರಾದ ಶ್ರೀಮತಿ ದೇವಿಕಾ ಶಾಸ್ತ್ರಿ ,ಮಹಾಮಂಡಲ ಸೇವಾ ಪ್ರಧಾನರಾದ ಶ್ರೀ ಕೃಷ್ಣಮೂರ್ತಿ ಮಾಡಾವು, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅರವಿಂದ, ದರ್ಬೆ ಪ್ರಧಾನ ಕಾರ್ಯದರ್ಶಿ ಮಹೇಶ ಭಟ್ ಕುದುಪುಲ, ನಮ್ಮಮನೆ ಕ್ರಿಯಾ ಸಮಿತಿ ಅಧ್ಯಕ್ಷ ಪರಮೇಶ್ವರ ಭಟ್ ವೇಣೂರು, ಉಪಾಧ್ಯಕ್ಷ ಕೇಶವ ಭಟ್ ಅತ್ತಾಜೆ , ಕಾರ್ಯದರ್ಶಿ ವೆಂಕಪ್ಪಯ್ಯ ಕುಕ್ಕುಜೆ, ಸದಸ್ಯರಾದ ಗೋವಿಂದ ಭಟ್ ಮದ್ದಡ್ಕ, ಉಜಿರೆ ವಲಯ ಅಧ್ಯಕ್ಷ ವಿದ್ಯಾಕುಮಾರ ಕಾಂಚೋಡು, ರೋಹಿಣಿ ಸುಬ್ಬರತ್ನಂ, ಕೈಲಾರು ರಾಜಗೋಪಾಲ್ ಭಟ್ ಉಪ್ಪಿನಂಗಡಿ ಉಪಸ್ಥಿತರಿದ್ದರು.











