ಪುದುವೆಟ್ಟು : ಮಿಯ್ಯಾರು ಕ್ರೀಡಾಂಗಣದಲ್ಲಿ ನಡೆದ ಜೈ ಭೀಮ್ ವಾಲಿಬಾಲ್ ಲೀಗ್ ಅಸೋಸಿಯೇಷನ್ ಇವರ ವತಿಯಿಂದ ಜೆವಿಎಲ್ ಸೀಸನ್-05 ಜೆವಿಲ್ ಟ್ರೋಫಿ -2025 ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಕಾರ್ಯಕ್ರಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿದರು.


ವೇದಿಕೆಯಲ್ಲಿ ತನ್ನ ಆಟೋರಿಕ್ಷಾದಲ್ಲಿ ಬಿಟ್ಟು ಹೋದ ಸುಮಾರು 9ಲಕ್ಷ ಬೆಳೆಬಾಳುವ ಬಂಗಾರವನ್ನು ವಾರಸುದಾರರಿಗೆ ಹಿಂದುರಿಗಿಸಿದ ಸುರೇಶ್ ಮೇರ್ಲಾ ಇವರನ್ನು ರಕ್ಷಿತ್ ಶಿವರಾಂ ಹಾಗೂ ಆತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯ ಶ್ರೀಧರ ಕಳೆಂಜ, ಜೈ ಭೀಮ್ ವಾಲಿಬಾಲ್ ಲೀಗ್ ಅಸೋಸಿಯೇಷನ್ ಅಧ್ಯಕ್ಷ ಸೇಸಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಡಯಾನಾ, ಕಾರ್ಯದರ್ಶಿ ಸಿಂಧೂ ಡೆನ್ನಿಸ್, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಸಂತೋಷ್ ಕೆ.ಸಿ, ಪಂಚಾಯತ್ ರಾಜ್ ಸಂಘಟನೆಯ ಗ್ರಾಮೀಣ ಅಧ್ಯಕ್ಷ ರೋಯಿ ಜೋಸೆಫ್, ಮಿಯ್ಯಾರು ವನದುರ್ಗಾ ದೇವಸ್ಥಾನದ ಅಧ್ಯಕ್ಷ ಬೊಮ್ಮಣ್ಣ ಗೌಡ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಪಿಲಿಕಲ, ಶಾಜಿ ಮ್ಯಾಥ್ಯೂ ಸಿಜು ಕೆಸಿ , ಕಮಲ್ ದಾಸ್, ಡೆನ್ನಿಸ್, ಡೆಸಿನ ಡೆನ್ನಿಸ್, ಪ್ರದೀಪ್ ಆಭಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.











