30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

ಬೆಳ್ತಂಗಡಿ: ಭಾರತೀಯ ಪ್ರತಿಷ್ಠಿತ ಸಂಸ್ಥೆಗಳಾದ ಎನ್‌ಐಟಿ ಹಾಗೂ ಐಐಐಟಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಜೆಇಇ (ಮೇನ್ಸ್)- 2026 ಪರೀಕ್ಷೆಯಲ್ಲಿ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಶೇ.99.6465 ಪರ್ಸೆಂಟೈಲ್  ಪಡೆಯುವ ಮೂಲಕ ದ.ಕ.ಜಿಲ್ಲೆಗೆ ಹಾಗೂ ಬೆಳ್ತಂಗಡಿ ತಾಲೂಕಿಗೆ ಅದ್ವಿತೀಯ ಸಾಧನೆ ತೋರಿದ್ದಾರೆ.

ಚಿನ್ಮಯ್ ಜಿ.ಕೆ. ಭೌತಶಾಸ್ತ್ರದಲ್ಲಿ ಶೇ.99.5167, ರಸಾಯನಶಾಸ್ತ್ರದಲ್ಲಿ 99.4710, ಗಣಿತದಲ್ಲಿ ಶೇ.99.1618 ಪರ್ಸೆಂಟೈಲ್ ಪಡೆಯುವ ಮೂಲಕ ಒಟ್ಟು ಶೇ.99.6465 ಫಲಿತಾಂಶದೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ.

ಉಳಿದಂತೆ ವೈಯಕ್ತಿಕ ವಿಷಯದಲ್ಲಿ ನಾಲ್ವರು ವಿದ್ಯಾರ್ಥಿಗಳು ಶೇ.99 ಗಿಂತಲೂ ಅಧಿಕ ಪರ್ಸೆಂಟೈಲ್ ಪಡೆದಿದ್ದು, ಭೌತಶಾಸ್ತ್ರದಲ್ಲಿ ಮನೀಶ್ ಡಿ. ಶೇ.99.6054 ಹಾಗೂ ಪ್ರತೀಕ್ ವಿ.ಎಸ್. ಶೇ.99.5473 ಪರ್ಸೆಂಟೈಲ್ ಪಡೆದಿದ್ದು, ರಸಾಯನಶಾಸ್ತ್ರದಲ್ಲಿ ತನುಶ್ರೀ ಶೇ.99.5115 ಪರ್ಸೆಂಟೈಲ್ ಪ್ರತೀಕ್ ವಿ.ಎಸ್. ಶೇ.99.1198 ಪರ್ಸೆಂಟೈಲ್, ಪ್ರಥಮ್ ಗೋಖಲೆ ಗಣಿತದಲ್ಲಿ 98.9986 ಪರ್ಸೆಂಟೈಲ್ ದಾಖಲಿಸಿ

ಉಳಿದಂತೆ ಪ್ರತಿಕ್ ವಿ.ಎಸ್. ಶೇ.98.8882, ಮನೀಶ್ ಡಿ. ಶೇ.97.5254, ಪ್ರಥಮ್ ಆರ್.ಗೋಖಲೆ ಶೇ.98.2818, ತನುಶ್ರೀ 97.6893 ಫಲಿತಾಂಶ ಪಡೆಯುವ ಮೂಲಕ ಕಾಲೇಜಿಂದ ಪ್ರಥಮ ಬಾರಿಗೆ ಜೆಇಇ ಪರೀಕ್ಷೆಗೆ ಹಾಜರಾದ 35 ವಿದ್ಯಾರ್ಥಿಗಳ ಪೈಕಿ ಐವರು ಈ ಸಾಧನೆ ಮಾಡಿರುವುದು ಕಾಲೇಜಿಗೆ ಹೆಮ್ಮೆ ತಂದಿದೆ.

ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಮತ್ತು ಉಪನ್ಯಾಸಕರ ಪರಿಶ್ರಮಕ್ಕೆ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ, ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಮಂಡಗಳಲೆ, ಪ್ರಾಂಶುಪಾಲರಾದ ಹರೀಶ್ ಕೆ.ಆರ್., ಪ್ರಶಂಸಿದ್ದಾರೆ.

Related posts

ಹೊಸದಿಲ್ಲಿಯಲ್ಲಿ ನಡೆಯಲಿರುವ ಲಿಂಗತ್ವಧಾರಿತ ದೌರ್ಜನ್ಯ ವಿರೋಧಿ ‘ನವ ಚೇತನಾ 4.0’ ಅಭಿಯಾನದ ಉದ್ಘಾಟನಾ ಸಮಾರಂಭಕ್ಕೆ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಹೊಸಂಗಡಿಯ ಎಲ್.ಸಿ.ಆರ್.ಪಿ. ಸೌಮ್ಯ

Suddi Udaya

ದ.ಕ ಲೋಕಸಭಾ ಕ್ಷೇತ್ರ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

Suddi Udaya

ಜ.24- 30: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎ.14 ರವರೆಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಹಬ್ಬ

Suddi Udaya

ಭಾರತೀಯ ರಿಸರ್ವ್ ಬ್ಯಾಂಕಿನಿಂದ ಸೇವಾಭಾರತಿಗೆ ಅಂಬ್ಯುಲೆನ್ಸ್ ಕೊಡುಗೆ

Suddi Udaya

ವೇಣೂರು ಪದ್ಮಾಂಬ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya
error: Content is protected !!