25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುವರ್ಣ ಸಾಂಸ್ಕೃತಿಕ ವೈಭವ: ಜೋಡು ಜೀಟಿಗೆ ನಾಟಕ ಸಾವಿರಾರು ಜನರಿಂದ ವೀಕ್ಷಣೆ : ಸಾಂಸ್ಕೃತಿಕ ರಾಯಭಾರಿ ಸಂಪತ್ ಬಿ ಸುವರ್ಣರವರಿಗೆ ವ್ಯಾಪಕ ಮೆಚ್ಚುಗೆ

ಬೆಳ್ತಂಗಡಿ:ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜರಗಿದ 16ನೆ ವರ್ಷದ ಸುವರ್ಣ ಸಾಂಸ್ಕೃತಿಕ ವೈಭವ ಹೊಸ ಇತಿಹಾಸ ಸೃಷ್ಟಿಸಿ ದಾಖಲೆ ಬರೆದಿದೆ. ಕಳೆದ 15 ವರ್ಷಗಳಲ್ಲಿ ಸುವರ್ಣ ಆರ್ಕೇಡ್ ಆವರಣದಲ್ಲಿ ಜರಗುತ್ತಿದ್ದ ಕಾರ್ಯಕ್ರಮ ಅಪಾರ ಜನಪ್ರಿಯತೆ ಪಡೆಯುತ್ತ ಜನಸಂದಣಿ ಹೆಚ್ಚಳವಾಗಿ ಕಲಾಭಿಮಾನಿಗಳ ವ್ಯವಸ್ಥಿತ ವೀಕ್ಷಣೆಗೋಸ್ಕಾರ ಮಾರಿಗುಡಿ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿತ್ತು .

ಕುತ್ಯಾರು ಶ್ರೀ ಸೋಮನಾಥಶ್ವರ ದೇವರ ರಥೋತ್ಸವದ ಸಂದರ್ಭದಲ್ಲಿ ಜರಗಬೇಕಿದ್ದ ನಾಟಕ ತಾಂತ್ರಿಕ ಅಡಚಣೆ ಉಂಟಾಗಿ ಮರುದಿನಕ್ಕೆ ಮುಂದೂಡಲಾಗಿತ್ತು, ನಿಗದಿತ ಸಮಯಕ್ಕೆ ಸರಿಯಾಗಿ ನಾಟಕ ಪ್ರಾರಂಭಗೊಂಡು ಅಚ್ಚುಕಟ್ಟಾದ ವ್ಯವಸ್ಥೆ ಮೂಲಕ ಸಹಸ್ರಾರು ಸಂಖ್ಯೆಯ ಕಲಾಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಲು ಬಂದ ಜನರಿಂದಾಗಿ ಮಾರಿಗುಡಿ ಮೈದಾನ ಹೌಸ್ ಫುಲ್ ಎನಿಸಿತು. ಸಂಪತ್ ಸುವರ್ಣರವರ ಕಲ್ಪನೆಯ ಸುವರ್ಣ ರಂಗ ಸಮ್ಮಾನ 2026, ಭಾಷಣಗಳಿರದ ಸಭಾ ಕಾರ್ಯಕ್ರಮ ರಹಿತ ನಿರ್ವಹಣೆ, ತುಳುನಾಡ ಸಂಸ್ಕೃತಿ ಪ್ರತಿಬಿಂಬಿಸುವ ನಾಟಕ, ಶಿಸ್ತು ಬದ್ಧ ವ್ಯವಸ್ಥಿತ ದಕ್ಷ ಸಂಘಟನೆ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಉರುವಾಲು ಗ್ರಾಮದ ಬನಾರಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ

Suddi Udaya

ಕಲ್ಮಂಜ ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ರಚನೆ

Suddi Udaya

ಅಳದಂಗಡಿ ದೈಲ ಮರಿಯಣ್ ಡಿಸೋಜ ನಿವಾಸಕ್ಕೆ ಸ್ಪೀಕರ್ ಯು ಟಿ ಖಾದರ್ ಭೇಟಿ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ಪ್ರೇರಣಾ ತರಗತಿ

Suddi Udaya

ಎಕ್ಸೆಲ್ ನಿಂದ ಗುರುವಾಯನಕೆರೆ ಸರ್ಕಾರಿ ಶಾಲೆಗೆ ಪೀಠೋಪರಣಗಳ ಖರೀದಿಗೆ ಲಕ್ಷ ಮೊತ್ತದ ಚೆಕ್ ಹಸ್ತಾಂತರ

Suddi Udaya

ಪೆರಿಂಜೆ ಇಂದಿರಾಗಾಂಧಿ ವಸತಿ ಶಾಲಾ ವಿದ್ಯಾರ್ಥಿ ಕುಶಿತ್ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ

Suddi Udaya
error: Content is protected !!