July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುವರ್ಣ ಸಾಂಸ್ಕೃತಿಕ ವೈಭವ: ಜೋಡು ಜೀಟಿಗೆ ನಾಟಕ ಸಾವಿರಾರು ಜನರಿಂದ ವೀಕ್ಷಣೆ : ಸಾಂಸ್ಕೃತಿಕ ರಾಯಭಾರಿ ಸಂಪತ್ ಬಿ ಸುವರ್ಣರವರಿಗೆ ವ್ಯಾಪಕ ಮೆಚ್ಚುಗೆ

ಬೆಳ್ತಂಗಡಿ:ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜರಗಿದ 16ನೆ ವರ್ಷದ ಸುವರ್ಣ ಸಾಂಸ್ಕೃತಿಕ ವೈಭವ ಹೊಸ ಇತಿಹಾಸ ಸೃಷ್ಟಿಸಿ ದಾಖಲೆ ಬರೆದಿದೆ. ಕಳೆದ 15 ವರ್ಷಗಳಲ್ಲಿ ಸುವರ್ಣ ಆರ್ಕೇಡ್ ಆವರಣದಲ್ಲಿ ಜರಗುತ್ತಿದ್ದ ಕಾರ್ಯಕ್ರಮ ಅಪಾರ ಜನಪ್ರಿಯತೆ ಪಡೆಯುತ್ತ ಜನಸಂದಣಿ ಹೆಚ್ಚಳವಾಗಿ ಕಲಾಭಿಮಾನಿಗಳ ವ್ಯವಸ್ಥಿತ ವೀಕ್ಷಣೆಗೋಸ್ಕಾರ ಮಾರಿಗುಡಿ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿತ್ತು .

ಕುತ್ಯಾರು ಶ್ರೀ ಸೋಮನಾಥಶ್ವರ ದೇವರ ರಥೋತ್ಸವದ ಸಂದರ್ಭದಲ್ಲಿ ಜರಗಬೇಕಿದ್ದ ನಾಟಕ ತಾಂತ್ರಿಕ ಅಡಚಣೆ ಉಂಟಾಗಿ ಮರುದಿನಕ್ಕೆ ಮುಂದೂಡಲಾಗಿತ್ತು, ನಿಗದಿತ ಸಮಯಕ್ಕೆ ಸರಿಯಾಗಿ ನಾಟಕ ಪ್ರಾರಂಭಗೊಂಡು ಅಚ್ಚುಕಟ್ಟಾದ ವ್ಯವಸ್ಥೆ ಮೂಲಕ ಸಹಸ್ರಾರು ಸಂಖ್ಯೆಯ ಕಲಾಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಲು ಬಂದ ಜನರಿಂದಾಗಿ ಮಾರಿಗುಡಿ ಮೈದಾನ ಹೌಸ್ ಫುಲ್ ಎನಿಸಿತು. ಸಂಪತ್ ಸುವರ್ಣರವರ ಕಲ್ಪನೆಯ ಸುವರ್ಣ ರಂಗ ಸಮ್ಮಾನ 2026, ಭಾಷಣಗಳಿರದ ಸಭಾ ಕಾರ್ಯಕ್ರಮ ರಹಿತ ನಿರ್ವಹಣೆ, ತುಳುನಾಡ ಸಂಸ್ಕೃತಿ ಪ್ರತಿಬಿಂಬಿಸುವ ನಾಟಕ, ಶಿಸ್ತು ಬದ್ಧ ವ್ಯವಸ್ಥಿತ ದಕ್ಷ ಸಂಘಟನೆ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Related posts

ನ.15: ಉಜಿರೆಯ ಶ್ರೀ ಧ.ಮ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಹಳೇ ನಾಣ್ಯಗಳು ಹಾಗೂ ಪುರಾತನ ವಸ್ತುಗಳ ಪ್ರದರ್ಶನ

Suddi Udaya

ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸಯನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಮನೋಜ್ ಗಡಿಯಾರ್ ಅವರಿಗೆ ಪಿ.ಎಚ್.ಡಿ. ಪದವಿ

Suddi Udaya

ಕನ್ಯಾಡಿ ಯಕ್ಷಭಾರತಿಯಿಂದ ಮೋಹನ ಬೈಪಾಡಿತ್ತಾಯ ಉಜಿರೆ ಅವರಿಗೆ ಗುರುವಂದನೆ

Suddi Udaya

ಚಾರ್ಮಾಡಿ ಹೊಸಮಠ ಪ್ರದೇಶದಲ್ಲಿ ಹಿಂದೂ ಮಲಯಾಳಿ ಕೇರಳ ಓಣಂ ಆಚರಣೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ, ಓಣಂ ವಿಶೇಷ ಪೋಕಳಂ ಭೋಜನ ಕೂಟ

Suddi Udaya

ಭಾರೀ ಮಳೆಗೆ ತೆಕ್ಕಾರು ಜುಮ್ಮಾ ಮಸೀದಿಯ ಆವರಣದ ತಡೆಗೋಡೆ ಕುಸಿತ

Suddi Udaya

ಹೆರಿಗೆ ನಂತರ ವಿಪರೀತ ರಕ್ತಸ್ರಾವ: ಲಾಯಿಲ ಗಾಂಧಿ ನಗರದ ಮಹಿಳೆ ಸಾವು

Suddi Udaya
error: Content is protected !!