ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವಾರ್ಷಿಕ ಮಹಾ ಸಭೆಯು ಫೆ. 24 ರಂದು ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಸಂಘದ ನಿರ್ದೇಶಕರುಗಳಾದ ವಿಶ್ವನಾಥ ಪೂಜಾರಿ ಗುಂಡೂರಿ, ಜಯ ಕುಮಾರ್ ನಡ, ನಾರಾಯಣ ಉಚ್ಚುರು, ರವೀಂದ್ರ ಬಿ. ಅಮೀನ್, ಗುರುರಾಜ್ ಗುರಿಪಳ್ಳ, ಚಂದ್ರಶೇಖರ್ ಇಂದಬೆಟ್ಟು, ಸಂತೋಷ್ ಕೆ. ಸಿ, ಸುನಿಲ್ ಕನ್ಯಾಡಿ, ರೂಪೇಶ್ ಕೆ. ಧರ್ಮಸ್ಥಳ, ಪ್ರಮೋದ್ ಕುಮಾರ್, ಕರುಣಾಕರ ಬೆಳ್ತಂಗಡಿ, ಉಷಾ ಕಿರಣ್, ವಿನೋದಿನಿ ರಾಮಪ್ಪ, ನಮಿತಾ ತೋಟತ್ತಾಡಿ, ರಾಜಶ್ರೀ ರಮನ್, ಕಮಲಾಕ್ಷ ಬೆಳ್ತಂಗಡಿ, ಹರಿದಾಸ್ ಕೇದೆ, ಗುಣಕರ ಅಗ್ನಡಿ ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷರು, ಮಾಜಿ ನಿರ್ದೇಶಕರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಂಘದ ಅಭಿವೃದ್ಧಿ, ಕಾರ್ಯ ಚಟುವಟಿಕೆಗಳ ಬಗ್ಗೆ ಸಲಹೆ ಸೂಚನೆ ನೀಡಿದರು.
ಸಂಘದ ನಿರ್ದೇಶಕ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ. ಕೆ. ಪ್ರಸಾದ್ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಚ್. ಕುಕ್ಕೇಡಿ ವರದಿ ವಾಚಿಸಿ , ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಕೊಕ್ರಾಡಿ ಲೆಕ್ಕ ಪತ್ರ ಮಂಡಿಸಿದರು.ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು ವಂದಿಸಿದರು.











