ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರು ಡಾ| ಡಿ ವಿರೇಂದ್ರ ಹೆಗ್ಗಡೆ ರವರು ಸಂಸದರ ನಿಧಿಯಿಂದ ಮಂಜೂರು ಮಾಡಿದ ರೂ . 1,45,000 ಮೌಲ್ಯದ ಸ್ಮಾರ್ಟ್ ಟಿವಿ ಯನ್ನು ಇಂದು ಬಿಡುಗಡೆ ಮಾಡಲಾಯಿತು.

ಮುಖ್ಯ ಶಿಕ್ಷಕರು ಶ್ರೀಮತಿ ಮಂಜುಳಾ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ತಾವು ನೀಡಿದ ಈ ಕೊಡುಗೆಯು ಶೈಕ್ಷಣಿಕ ಅಭಿವೃದ್ಧಿಗೆ ಬಹಳ ಸಹಕರಿಯಾಗಿದೆ ತಮ್ಮ ಈ ಸಮಾಜಮುಖಿ ಕಾರ್ಯಕ್ಕೆ ಶಿಕ್ಷಣ ಮೇಲಿನ ಕಾಳಜಿಗೆ ನಾವು ಸದಾ ಋಣಿಯಾಗಿದ್ದೇವೆ.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಎಇ.ಎಮ್.ಸಿ ಅಧ್ಯಕ್ಷ ಅನಿಲ ಕುಮಾರ್, ಕೃಷಿ ಮೇಲ್ವಿಚಾರಕ ಕೃಷ್ಣ ಗೌಡ, ಪಾರೆಂಕಿ ಸಿ ಒಕ್ಕೂಟ ಅಧ್ಯಕ್ಷ ಹರೀಶ, ಶಾಲಾ ಮುಖ್ಯ ಶಿಕ್ಷಕರು ಶ್ರೀಮತಿ ಮಂಜುಳಾ, ಶ್ರೀಮತಿ ಶ್ರದ್ದಾ, ವಿದ್ಯಾ,ಸೇವಾಪ್ರತಿನಿಧಿ ಶ್ರೀಮತಿ ನಂದಿನಿ, ಹಾಗೂ ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಇಕ್ಬಾಲ್, ವಿದ್ಯಾರ್ಥಿ ಪಾಲಕರು ವಿಜಯಶ್ರೀ, ಶಶಿಕಲಾ, ಶಾಂತ, ಸುಜಾತ, ಚೈತ್ರ, ಸಂದ್ಯಾ, ಶಕುಂತಲಾ, ಸುಶೀಲ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











