
ಬೆಳ್ತಂಗಡಿ: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ತಾರಕೇಸರಿ ಇವರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆ ಬೆಳಾಲು ಇಲ್ಲಿನ 1996 ಸಾಲಿನ ಶಿಷ್ಯ ವೃಂದದಿಂದ ಬೀಳ್ಕೊಡುಗೆ- ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಕ ಮಹೇಶ್ ಬೆಳಾಲು, ಉಷಾ, ಕವಿತಾ, ಜಯಶ್ರೀ ಮೋಹನ್ ಗೌಡ, ಸೀತಾರಾಮ ಬೆಳಾಲು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಶಿಧರ ಶಿಲ್ಪಿ ಬೆಳಾಲು, ಸೋಮಶೇಖರ ಮಾಚಾರ್, ನಿವೃತ್ತ ಯೋಧ ರಮೇಶ್ ಕಾಡಂಡ ಮೊದಲಾದ ಶಿಷ್ಯಂದಿರು ಉಪಸ್ಥಿತರಿದ್ದರು.











