ಅರಸಿನಮಕ್ಕಿ: ಗಣೇಶ್ ಕ್ಲಿನಿಕಲ್ ಲ್ಯಾಬೋರೇಡರಿ & ಪಾಲಿಕ್ಲಿನಿಕ್ ಕಂಪ್ಯೂಟರೈಸ್ಡ್ ರಕ್ತ ಪರೀಕ್ಷಾ ಕೇಂದ್ರ ಮಾ.6 ರಂದು ಶುಭಾರಂಭಗೊಂಡಿತು.

ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಕೊಕ್ಕಡ ರಮಣ ಕ್ಲಿನಿಕ್ ನ ಡಾ. ಶ್ರೀಹರಿ, ಕಟ್ಟಡ ಮಾಲಕ ಗಣೇಶ್ ಭಿಡೆ, ಪ್ರಭಂಜನ್ ಭಿಡೆ, ನಿವೃತ್ತ ಪೋಸ್ಟ್ ಮಾಸ್ಟರ್ ವಿಶ್ವನಾಥ್ ಶೆಂಡ್ಯೆ, ರಕ್ತ ಪರೀಕ್ಷಾ ಕೇಂದ್ರದ ಮಾಲಕ ಶಿತಿಕಂಠ ಭಟ್, ಉಜಿರೆ ಮತ್ತು ಸಂಸ್ಥೆಯ ಟೆಕ್ನಿಷಿಯನ್ ಗಳಾದ ವಿದ್ಯಾಶ್ರೀ, ಸಿಬಂಧಿಗಳಾದ ಪ್ರಿವಿತಾ, ಜ್ಯೋತಿ, ಮೋಹನ್ ಉಪಸ್ಥಿತರಿದ್ದರು.
ಶುಭಾರಂಭಕ್ಕೆ ಆಗಮಿಸಿದ ಎಲ್ಲರಿಗೂ ಮಾಲಕರು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.











