ನಾವೂರು: ಫೆಬ್ರವರಿ 22ರಂದು ಶಿಲಾನ್ಯಾಸಗೊಂಡು ರಾತ್ರಿ ಹಗಲೆನ್ನದೇ ದುಡಿದ ಭಕ್ತರ ಪರಿಶ್ರಮದಿಂದ ಕೇವಲ 15 ದಿನದೊಳಗೆ ಗೋಡೆ ಕೆಲಸ ಸಂಪೂರ್ಣಗೊಂಡಿದೆ ಈಗಾಗಲೇ ಮರದ ಕೆತ್ತನೆಯ ಕೆಲಸ ಪ್ರಗತಿಯಲ್ಲಿದ್ದು ಮೇ ಅಂತ್ಯದೊಳಗೆ ಸಂಪೂರ್ಣಗೊಳ್ಳಲಿದೆ. ದುರ್ಗಾದೇವಿ ಅಮ್ಮನ ಮೂರ್ತಿ ಮತ್ತು ಗಣಪತಿ ದೇವರ ಮೂರ್ತಿ ಕೆತ್ತನೆ ಕೆಲಸಕ್ಕೆ ವೀಲ್ಯ ನೀಡಲಾಗಿದ್ದು ನಿಗದಿ ಪಡಿಸಿದ ದಿನದೊಳಗೆ ಎಲ್ಲಾ ಕೆಲಸಗಳು ಸಂಪೂರ್ಣವಾಗಲಿದೆ ಎಂದು ಇಲ್ಲಿಯ ಮುಖ್ಯಸ್ಥ ರಕ್ಷಿತ್ ಅಜಿಲ ತಿಳಿಸಿದರು






