28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಚಾರ್ಮಾಡಿ ಪ್ರದೇಶದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆಗಳು

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಹೊಸಮಠ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದ ಕಾರ್ಮಿಕರೊಬ್ಬರಿಗೆ ಮೂರು ಚಿರತೆಗಳು ಎದುರಾದ ಘಟನೆ ಮಾ.10 ರಂದು ಮುಂಜಾನೆ 4 ಗಂಟೆ ವೇಳೆಗೆ ನಡೆದಿದೆ. ಚಿರತೆಯನ್ನು ಕಂಡ ವ್ಯಕ್ತಿ ಭಯ ಭೀತರಾಗಿ ತಕ್ಷಣವೇ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿ ಚಿರತೆಗಳನ್ನು ಕಾಡಿಗೆ ಅಟ್ಟಲಾಗಿದೆ.

ಕೊಂಚ ಬಿಡುವು ನೀಡಿ ಮತ್ತೆ ಕಾಣಿಸಿದ ಚಿರತೆ:
ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳ ಮಧ್ಯೆದವರೆಗೆ ಬೆಳ್ತಂಗಡಿ ಪಟ್ಟಣ, ಕಲ್ಮಂಜ, ಮುಂಡಾಜೆ, ನಡ, ಕಳಿಯ, ವೇಣೂರು, ಅಂಡಿಂಜೆ, ಸುಲ್ಕೇರಿ, ತಣ್ಣೀರುಪಂತ, ಮಚ್ಚಿನ ಸಹಿತ ನಾನಾ ಗ್ರಾಮಗಳಲ್ಲಿ ಚಿರತೆಗಳು ಸಂಚಾರ ನಡೆಸಿ ಜನರಲ್ಲಿ ಭಯದ ಭೀತಿಯ ವತಾವರಣ ನಿರ್ಮಿಸಿದ್ದವು. ನಡ ಗ್ರಾಮದ ಕನ್ಯಾಡಿ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಮುಂಡಾಜೆಯ ಸೀಟು ಮೂರು ಮಾರ್ಗದ ಬಳಿ ಶಾಲಾ ಬಾಲಕನೋರ್ವನಿಗೆ ಚಿರತೆ ಎದುರಾದ ಘಟನೆಯು ನಡೆದಿತ್ತು. ಅನೇಕ ಗ್ರಾಮಗಳಲ್ಲಿ ಮುಂಜಾನೆ ಟ್ಯಾಪಿಂಗ್ ನಡೆಸುವ ವ್ಯಕ್ತಿಗಳಿಗೆ ಪದೇ ಪದೇ ಚಿರತೆಗಳು ಎದುರಾಗಿದ್ದವು.

ಕಳೆದ 20 ದಿನಗಳಿಂದ ಚಿರತೆಗಳ ಓಡಾಟದ ವರದಿ ಪ್ರಕಟವಾಗಿರಲಿಲ್ಲ ಆದರೆ ಇದೀಗ ಚಿರತೆಗಳು ಮತ್ತೆ ಕಾಣಿಸಿಕೊಂಡಿವೆ. ಒಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಚಿರತೆವಿರುವುದು ಸ್ಪಷ್ಟಗೊಂಡಿದೆ. ಬೆಳ್ತಂಗಡಿ ನಗರಕ್ಕೂ ಚಿರತೆ ಲಗ್ಗೆ ಇಟ್ಟಿದ್ದವು, ನಡ ಗ್ರಾಮದಲ್ಲಿ ಚಿರತೆಯೊಂದು ಬೋನ್‌ನಲ್ಲಿ ಸೆರೆಯಾಗಿತ್ತು.

Related posts

ಮರೋಡಿ: ಯುವಕನ ಧ್ವನಿ ಪೆಟ್ಟಿಗೆಯ ಶಸ್ತ್ರಚಿಕಿತ್ಸೆಗೆ ಯುವವಾಹಿನಿ ವೇಣೂರು ಘಟಕ ಹಾಗೂ ಯುವವಾಹಿನಿ ಮರೋಡಿ ಸಂಚಲನಾ ಸಮಿತಿ ಸದಸ್ಯರಿಂದ ಆರ್ಥಿಕ ನೆರವು

Suddi Udaya

ಶಿಬಾಜೆ: ಭಂಡಿಹೊಳೆಯಲ್ಲಿ ಅರಸಿನಮಕ್ಕಿ ಶಿಶಿಲ ಶೌರ್ಯ ಘಟಕದಿಂದ ರಸ್ತೆ ದುರಸ್ತಿ

Suddi Udaya

ಅ ಭಾ ಸಾ ಪ ಬೆಳ್ತಂಗಡಿ ತಾ| ಸಮಿತಿ ಪ್ರಥಮ ಅಧಿವೇಶನ “ತೆಂಕಣದಲ್ಲಿ ನುಡಿದಿಬ್ಬಣ “

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯ ಸಂಭ್ರಮದ ವಾರ್ಷಿಕೋತ್ಸವ

Suddi Udaya

ಉಡುಪಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಜೀಯವರನ್ನು ಸ್ವಾಗತಿಸಿದ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್

Suddi Udaya

ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಹಾಗೂ ಟ್ರಸ್ಟಿಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಆರೋಪ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Suddi Udaya
error: Content is protected !!