26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಚಾರ್ಮಾಡಿ ಪ್ರದೇಶದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆಗಳು

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಹೊಸಮಠ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದ ಕಾರ್ಮಿಕರೊಬ್ಬರಿಗೆ ಮೂರು ಚಿರತೆಗಳು ಎದುರಾದ ಘಟನೆ ಮಾ.10 ರಂದು ಮುಂಜಾನೆ 4 ಗಂಟೆ ವೇಳೆಗೆ ನಡೆದಿದೆ. ಚಿರತೆಯನ್ನು ಕಂಡ ವ್ಯಕ್ತಿ ಭಯ ಭೀತರಾಗಿ ತಕ್ಷಣವೇ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿ ಚಿರತೆಗಳನ್ನು ಕಾಡಿಗೆ ಅಟ್ಟಲಾಗಿದೆ.

ಕೊಂಚ ಬಿಡುವು ನೀಡಿ ಮತ್ತೆ ಕಾಣಿಸಿದ ಚಿರತೆ:
ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳ ಮಧ್ಯೆದವರೆಗೆ ಬೆಳ್ತಂಗಡಿ ಪಟ್ಟಣ, ಕಲ್ಮಂಜ, ಮುಂಡಾಜೆ, ನಡ, ಕಳಿಯ, ವೇಣೂರು, ಅಂಡಿಂಜೆ, ಸುಲ್ಕೇರಿ, ತಣ್ಣೀರುಪಂತ, ಮಚ್ಚಿನ ಸಹಿತ ನಾನಾ ಗ್ರಾಮಗಳಲ್ಲಿ ಚಿರತೆಗಳು ಸಂಚಾರ ನಡೆಸಿ ಜನರಲ್ಲಿ ಭಯದ ಭೀತಿಯ ವತಾವರಣ ನಿರ್ಮಿಸಿದ್ದವು. ನಡ ಗ್ರಾಮದ ಕನ್ಯಾಡಿ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಮುಂಡಾಜೆಯ ಸೀಟು ಮೂರು ಮಾರ್ಗದ ಬಳಿ ಶಾಲಾ ಬಾಲಕನೋರ್ವನಿಗೆ ಚಿರತೆ ಎದುರಾದ ಘಟನೆಯು ನಡೆದಿತ್ತು. ಅನೇಕ ಗ್ರಾಮಗಳಲ್ಲಿ ಮುಂಜಾನೆ ಟ್ಯಾಪಿಂಗ್ ನಡೆಸುವ ವ್ಯಕ್ತಿಗಳಿಗೆ ಪದೇ ಪದೇ ಚಿರತೆಗಳು ಎದುರಾಗಿದ್ದವು.

ಕಳೆದ 20 ದಿನಗಳಿಂದ ಚಿರತೆಗಳ ಓಡಾಟದ ವರದಿ ಪ್ರಕಟವಾಗಿರಲಿಲ್ಲ ಆದರೆ ಇದೀಗ ಚಿರತೆಗಳು ಮತ್ತೆ ಕಾಣಿಸಿಕೊಂಡಿವೆ. ಒಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಚಿರತೆವಿರುವುದು ಸ್ಪಷ್ಟಗೊಂಡಿದೆ. ಬೆಳ್ತಂಗಡಿ ನಗರಕ್ಕೂ ಚಿರತೆ ಲಗ್ಗೆ ಇಟ್ಟಿದ್ದವು, ನಡ ಗ್ರಾಮದಲ್ಲಿ ಚಿರತೆಯೊಂದು ಬೋನ್‌ನಲ್ಲಿ ಸೆರೆಯಾಗಿತ್ತು.

Related posts

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಶುಲ್ಕ ಪಾವತಿಸದೆ ಇದ್ದಲ್ಲಿ ನೀರಿನ ಜೋಡಣೆ ಕಟ್

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸಹಾಯಧನ ವಿತರಣೆ

Suddi Udaya

ಸಕಾಲದಲ್ಲಿ ತಾಲೂಕಿನ ಶಿಕ್ಷಕರ ವೇತನ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಿ -ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಯೋಗೇಶ ಹೆಚ್ ಆರ್

Suddi Udaya

ನಿಡ್ಲೆ–ಕಾಟ್ಲಾದಲ್ಲಿ ಏರ್‌ಟೆಲ್ ಟವರ್ ಸಮಸ್ಯೆ: 2–3 ವರ್ಷಗಳಿಂದ ಸಂಕಷ್ಟದಲ್ಲಿರುವ ಗ್ರಾಮಸ್ಥರು

Suddi Udaya

ಜ್ವರದಿಂದ ಬಳಲಿ ಗಂಡಿಬಾಗಿಲಿನ ಯುವತಿ ಸಾವು

Suddi Udaya

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಹತ್ಯಡ್ಕ ಪರಿಸರದಲ್ಲಿ ಮರಗಳ ಮಾರಣ ಹೋಮ-ಸಚಿವರಿಗೆ ದೂರು

Suddi Udaya
error: Content is protected !!