ಬೆಳ್ತಂಗಡಿ: ಶ್ರೀ ಕ್ಷೇತ್ರ ಉಜಿರೆಯ ವಿಜಯಗೋಪುರ ಲೋಕಾರ್ಪಣೆ ಮತ್ತು ಬ್ರಹ್ಮರಥ ಹಾಗೂ ಪುಷ್ಪರಥ ಸಮರ್ಪಣೆ ಮತ್ತು ಅಷ್ಟಬಂಧ ಪುನಃ ಪ್ರತಿಷ್ಠಾ ಸಂದರ್ಭದಲ್ಲಿ ಶ್ರೀಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಬೆಳಾಲು ನಿರ್ಮಾಣದಲ್ಲಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಹಾಗೂ ಉಜಿರೆ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯರ ಶುಭ ಆಶೀರ್ವಾದದಿಂದ ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಅರ್ಪಿಸುವ ವಿ. ಹರೀಶ್ ನೆರಿಯ ಸಾಹಿತ್ಯದಲ್ಲಿ ಶಶಿಧರ್ ಬೆಳಾಲು ಗಾಯನದಲ್ಲಿ ಹಾಗೂ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳ ಇವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ “ಜಗದೋದ್ದಾರ ಶ್ರೀ ಜನಾರ್ದನ” ಆಲ್ಬಮ್ ಹಾಡಿನ ಪೋಸ್ಟರನ್ನು ಖ್ಯಾತ ಗಾಯಕ ಶಶಿಧರ್ ಕೋಟೆಯವರು ಉಜಿರೆ ಬ್ರಹ್ಮಕಲಶೋತ್ಸವದ ಭವ್ಯ ವೇದಿಕೆಯಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಜಿರೆ ವರ್ತಕ ರ ಸಂಘದ ಅಧ್ಯಕ್ಷರಾದ ಪ್ರಸಾದ್ ಬಿ. ಎಸ್ ಹಾಗೂ ಪದಾಧಿಕಾರಿಗಳು, ಸಾಹಿತ್ಯವನ್ನು ರಚಿಸಿದ ವಿ. ಹರೀಶ್ ನೆರಿಯ, ಗಾಯಕ ಶಶಿಧರ್ ಬೆಳಾಲು, ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳದ ಸಂಘಟಕಿ ಬೇಬಿ ಉಮೇಶ್ ಮತ್ತು ಭಕ್ತಿ ಹೆಜ್ಜೆ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.












