July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಯುದ್ದ ಖಂಡಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ‌ ಪ್ರತಿಭಟನೆ

ಬೆಳ್ತಂಗಡಿ: ಇಡೀ ಜಗತ್ತಿನ‌ ತೈಲ ಉತ್ಪಾದನೆ, ವಿತರಣೆಯ ಸಂಪೂರ್ಣ ಹಿಡಿತ ತನ್ನ ಹಸ್ತ ಬರಲು ಅಮೇರಿಕ ನಡೆಸುವ ಈ ಅಕ್ರಮ ಯುದ್ದಗಳ ತಡೆಯಲು ಭಾರತ ಮುಂದಾಗಬೇಕೆಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಯಾಧವ ಶೆಟ್ಟಿ ಅಗ್ರಹಿಸಿದರು.

ಅವರು ಇಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟಿಯು , ಎಐಕೆಎಸ್, ಡಿ.ವೈಎಪ್‌.ಐ., ಜೆ.ಎಂ.ಎಸ್, ಡಿ.ಎಚ್.ಎಸ್. ಆದಿವಾಸಿ ಮೊದಲಾದ ಸಂಘಟನೆಗಳು ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುವ ಯುದ್ದ ಖಂಡಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿ ಮಾತಾಡುತ್ತಿದ್ದರು.

ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್ ಮಾತಾಡುತ್ತಾ ಒಂದು ದೇಶ ಮತ್ತೊಂದು ದೇಶದ ಸಾರ್ವಭೌಮತೆಯ ಮೇಲೆ‌ ದಾಳಿ ನಡೆಸುವುದು ಅಮೇರಿಕಾದ ಸರ್ವಾದಿಕಾರಿ ನಡೆಯಾಗಿದೆ ಎಂದರು.‌

ಅಮೇರಿಕಾದ ಸರ್ವಾಧಿಕಾರಿ ನಡೆಯನ್ನು ಬೆಂಬಲಿಸುವುದು ಎಂದರೆ ಅದರ ಗುಲಾಮಗಿರಿಗೆ ಬಲಿಯಾದಂತೆ ಆಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರಿತುಕೊಂಡು ದೇಶದ ಸ್ವಾಬಿಮಾನದ ಗೌರವ ಉಳಿಸಬೇಕಿದೆ ಎಂದರು.

ಶ್ಯಾಮರಾಜ್ ಸ್ವಾಗತಿಸಿ, ಡಿ.ಎಚ್.ಎಸ್. ರಾಜ್ಯ ನಾಯಕಿ ಈಶ್ವರಿ ವಂದಿಸಿದರು. ಅಜಿ.ಎಂ.ಜೋಸ್, ಹಿರಿಯ ಮುಖಂಡರಾದ ಲಕ್ಷ್ಮಣ ಗೌಡ, ಜಯಶ್ರಿ, ಪುಷ್ಪ, ಮಹಿಳಾ ಮುಖಂಡರಾದ ಕಿರಣಪ್ರಭಾ , ಕುಮಾರಿ, ಡಿ.ವೈ.ಎಪ್.ಐ ಮುಖಂಡರಾದ ಅಭಿಷೇಕ್, ಆದಿವಾಸಿ ಸಂಘಟನೆಯ ಪ್ರವೀಣ್ ಎಂಕೆ. ಕಟ್ಟಡ ಸಂಘದ ಲೋಕೇಶ್, ಅಶ್ವಿತ, ಅಪ್ಸ, ಮೊದಲಾದವರು ಇದ್ದರು. ಕೊನೆಗೆ ತಹಶಿಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಆಗ್ರಹ ಪತ್ರ ನೀಡಲಾಯ್ತು.

Related posts

ಕೊಯ್ಯೂರು- ಗೇರುಕಟ್ಟೆ ಮೂಲಕ ಬೆಳ್ತಂಗಡಿಗೆ ಬಸ್ಸು ಸೌಕರ್ಯಕ್ಕೆ ಮನವಿ

Suddi Udaya

ಮಡಂತ್ಯಾರು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಜಯ ಕೆ., ಕಾರ್ಯದರ್ಶಿಯಾಗಿ ಜಯರಾಮ್ ಆಚಾರ್ಯ

Suddi Udaya

ಆಮಂತ್ರಣ ವೇದಿಕೆ ತಾಲೂಕು ಪದಗ್ರಹಣ ಮತ್ತು ಮುದ್ದು ಮಕ್ಕಳ ಫೋಟೋ ಸ್ಪರ್ಧೆ ಬಹುಮಾನ ವಿತರಣೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ, ಧಾರ್ಮಿಕ ಸಭೆ

Suddi Udaya

ರಿಕ್ಷಾದಲ್ಲಿ ಬಿಟ್ಟು ಹೋದ ಬ್ಯಾಗ್ ನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ನಾಗರಾಜ್ ಮರಕಡ

Suddi Udaya

ಧರ್ಮಸ್ಥಳ ಲಕ್ಷ ದೀಪೋತ್ಸವದ ಪ್ರಯುಕ್ತ 12ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!