July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಬಳ್ಳಮಂಜ ಬ್ರಹ್ಮಕಲಶ: ಈಶ್ವರ ದೇವರ ಲಿಂಗ ಪುನ:ಪ್ರತಿಷ್ಠೆ ಅಷ್ಟಬಂಧ ಪ್ರತಿಷ್ಠೆ-ಗರುಡ ಪ್ರದಕ್ಷಿಣೆ

ಬೆಳ್ತಗಂಡಿ: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭ್ರಣೆಯಿಂದ ನಡೆಯುತ್ತಿದೆ. ಇಂದು ಅನಂತೇಶ್ವರ ದೇವರಿಗೆ ವಿಶೇಷ ಶಾಂತಿ ಹೋಮ, ವಿಶೇಷ ಪ್ರಾಯಶ್ಚಿತ ಹೋಮ ಪ್ರಾಸಾದ ಪೂಜೆ, ರತ್ನನ್ಯಾಸ ನೂತನ ಪ್ರಾಸಾದದ ಶಿಖರ ಪ್ರತಿಷ್ಠೆ, ಪೂರ್ವಾಹ್ನ ಗಂಟೆ ೯-೨೫ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಈಶ್ವರ ದೇವರ ಲಿಂಗ ಪುನಃಪ್ರತಿಷ್ಠೆ ಅಷ್ಟಬಂಧ ಪ್ರತಿಷ್ಠೆ, ಜೀವ ಕುಂಭಾಭಿಷೇಕ, ನಿದ್ರಾ ಕಲಶಾಭಿಷೇಕ, ಪ್ರತಿಷ್ಠಾಂಗಪ್ರಾಣನ್ಯಾಸಾದಿ ಪ್ರಕ್ರಿಯೆ, ಪ್ರತಿಷ್ಠಾಪೂಜೆ, ಈಶ್ವರ ದೇವರ ನಿತ್ಯನೈಮಿತಿಕ ವಿಧಿಗಳ ಪ್ರತಿಜ್ಞಾ ಸ್ವೀಕಾರ, ಮಹಾಪೂಜೆ ನಡೆಯಿತು. ಈಶ್ವರ ದೇವರ ಲಿಂಗ ಪ್ರತಿಷ್ಠೆ ಸಂದರ್ಭ ಗರುಡು ಪ್ರದಕ್ಷಿಣೆ ಹಾಕಿತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನೂತನ ಧ್ವಜಸ್ತಂಭದ ನಂದಿವಾಹನಾಧಿವಾಸ, ನೂತನ ಧ್ವಜಸ್ತಂಭಾಧಿವಾಸ, ನೂತನ ಬ್ರಹ್ಮರಥದಲ್ಲಿ ವಾಸ್ತುಪ್ರಕ್ರಿಯೆ, ಏಕೋತ್ತರಶತ ರಥ ಕಲಶಾಧಿವಾಸ, ನೂತನ ರಥಾಧಿವಾಸ, ಅಧಿವಾಸ ಹೋಮಗಳು ಸಂಜೆ ನಡೆಯಲಿದೆ.

Related posts

ಕಾಂಗ್ರೇಸ್ ಸರ್ಕಾರದಿಂದ ಕಾನೂನುವ್ಯವಸ್ಥೆಯ ಅಪಹಾಸ್ಯ :ಬೆಳ್ತಂಗಡಿ ಬಿಜೆಪಿ ಮಂಡಲ ಆಕ್ರೋಶ

Suddi Udaya

ಉರುವಾಲುನಲ್ಲಿ ಗುಡ್ಡ ಕುಸಿತ : ಮನೆ ಹಾಗೂ ಕೃಷಿಗೆ ಹಾನಿ

Suddi Udaya

ಮೊಗ್ರು: ನೈಮಾರ್, ಪರಾರಿ, ದoಬೆತ್ತಿಮಾರು ಪರಿಸರದಲ್ಲಿ ತೋಟಕ್ಕೆ ನುಗ್ಗಿದ್ದ ನೀರು: ಅಪಾರ ಕೃಷಿ ಹಾನಿ

Suddi Udaya

ವಾಣಿ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಮೇ 21: ವಿದ್ಯುತ್ ನಿಲುಗಡೆ

Suddi Udaya

ಕನ್ಯಾಡಿ ಸ.ಉ. ಹಿ. ಪ್ರಾ ಶಾಲೆಯಲ್ಲಿ ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶ್ರಮದಾನ

Suddi Udaya
error: Content is protected !!