22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಬಳ್ಳಮಂಜ ಬ್ರಹ್ಮಕಲಶ: ಈಶ್ವರ ದೇವರ ಲಿಂಗ ಪುನ:ಪ್ರತಿಷ್ಠೆ ಅಷ್ಟಬಂಧ ಪ್ರತಿಷ್ಠೆ-ಗರುಡ ಪ್ರದಕ್ಷಿಣೆ

ಬೆಳ್ತಗಂಡಿ: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭ್ರಣೆಯಿಂದ ನಡೆಯುತ್ತಿದೆ. ಇಂದು ಅನಂತೇಶ್ವರ ದೇವರಿಗೆ ವಿಶೇಷ ಶಾಂತಿ ಹೋಮ, ವಿಶೇಷ ಪ್ರಾಯಶ್ಚಿತ ಹೋಮ ಪ್ರಾಸಾದ ಪೂಜೆ, ರತ್ನನ್ಯಾಸ ನೂತನ ಪ್ರಾಸಾದದ ಶಿಖರ ಪ್ರತಿಷ್ಠೆ, ಪೂರ್ವಾಹ್ನ ಗಂಟೆ ೯-೨೫ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಈಶ್ವರ ದೇವರ ಲಿಂಗ ಪುನಃಪ್ರತಿಷ್ಠೆ ಅಷ್ಟಬಂಧ ಪ್ರತಿಷ್ಠೆ, ಜೀವ ಕುಂಭಾಭಿಷೇಕ, ನಿದ್ರಾ ಕಲಶಾಭಿಷೇಕ, ಪ್ರತಿಷ್ಠಾಂಗಪ್ರಾಣನ್ಯಾಸಾದಿ ಪ್ರಕ್ರಿಯೆ, ಪ್ರತಿಷ್ಠಾಪೂಜೆ, ಈಶ್ವರ ದೇವರ ನಿತ್ಯನೈಮಿತಿಕ ವಿಧಿಗಳ ಪ್ರತಿಜ್ಞಾ ಸ್ವೀಕಾರ, ಮಹಾಪೂಜೆ ನಡೆಯಿತು. ಈಶ್ವರ ದೇವರ ಲಿಂಗ ಪ್ರತಿಷ್ಠೆ ಸಂದರ್ಭ ಗರುಡು ಪ್ರದಕ್ಷಿಣೆ ಹಾಕಿತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನೂತನ ಧ್ವಜಸ್ತಂಭದ ನಂದಿವಾಹನಾಧಿವಾಸ, ನೂತನ ಧ್ವಜಸ್ತಂಭಾಧಿವಾಸ, ನೂತನ ಬ್ರಹ್ಮರಥದಲ್ಲಿ ವಾಸ್ತುಪ್ರಕ್ರಿಯೆ, ಏಕೋತ್ತರಶತ ರಥ ಕಲಶಾಧಿವಾಸ, ನೂತನ ರಥಾಧಿವಾಸ, ಅಧಿವಾಸ ಹೋಮಗಳು ಸಂಜೆ ನಡೆಯಲಿದೆ.

Related posts

ಪಡಂಗಡಿ ಸ್ವಾತಂತ್ರ್ಯ ಹೋರಾಟಗಾರ ದಿ. ಭೋಜರಾಜ ಹೆಗ್ಡೆಯವರ ಸೊಸೆ ವನಿತಾ ಹೃದಯಾಘಾತದಿಂದ ನಿಧನ

Suddi Udaya

ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಕಳೆಂಜ: ಹೂದೋಟ ನಿರ್ಮಾಣ, ಸ್ವಚ್ಛತಾ ಆಂದೋಲನ

Suddi Udaya

ಶ್ರೀ ಗೆಜ್ಜೆಗಿರಿ ಕ್ಷೇತ್ರ ಆಡಳಿತ ಸಮಿತಿ ಸಭೆ

Suddi Udaya

ಶಿಶಿಲ ಪೇಟೆಯಲ್ಲಿ ಒಂಟಿ ಸಲಗ ಸಂಚಾರ

Suddi Udaya

ಕನ್ಯಾಡಿ ಸೇವಾಭಾರತಿ ನೇತೃತ್ವದಲ್ಲಿ ಮಹಿಳೆಯರಿಗಾಗಿ ಒಂದು ತಿಂಗಳ ಉಚಿತ ಟೈಲರಿಂಗ್ ತರಬೇತಿ ಶಿಬಿರ ಉದ್ಘಾಟನೆ

Suddi Udaya
error: Content is protected !!