28 C
ಪುತ್ತೂರು, ಬೆಳ್ತಂಗಡಿ
August 5, 2026
ತಾಲೂಕು ಸುದ್ದಿಧಾರ್ಮಿಕ

ಶಿಶಿಲ: ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮಸಮಿತಿ – ವಾರ್ಷಿಕ ಮಹಾಸಭೆ ಹಾಗೂ ಸತ್ಯನಾರಾಯಣ ಪೂಜೆ

ಶಿಶಿಲ: ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮಸಮಿತಿ ಶಿಶಿಲ ಇದರ ಅಂಗವಾಗಿ ವಾರ್ಷಿಕ ಮಹಾಸಭೆ ಹಾಗೂ ಸತ್ಯನಾರಾಯಣ ಪೂಜೆ ಶಿಶಿಲ ಗ್ರಾಮದ ಪಡ್ಪು ಕೊರಗಪ್ಪ ಗೌಡ ಮನೆಯಲ್ಲಿ ಏ.3ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನಡ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಮೋಹನ್ ಗೌಡ ನೆರವೇರಿಸಿದರು.
ಅಧ್ಯಕ್ಷತೆಯನ್ನು ಶಿಶಿಲ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮಸಮಿತಿ ಇದರ ಅಧ್ಯಕ್ಷ ಕುಶಾಲಪ್ಪ ಗೌಡ ಬದ್ರಿಜಾಲು ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಬೆಳ್ತಂಗಡಿ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ಬೆಳ್ತಂಗಡಿ ಯುವ ವೇದಿಕೆ ಕೋಶಾಧಿಕಾರಿ ರಂಜಿತ್ ಕಳೆಂಜ, ಶಿಶಿಲ ಗ್ರಾಮ ಗೌಡರಾದ ರಮೇಶ್ ಗೌಡ ಸತ್ತಿಕಲ್ಲು, ಶಿಶಿಲ ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆ ಉಮಾವತಿ ಗೌಡ ವಟ್ಲ, ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಅನಿತಾ, ಪ್ರತೀಕ್. ಸ್ನೇಹ, ಅಂಕಿತಾ, ಸ್ವಸ್ತಿಕ್, ಅನುಪ್, ಧನ್ಯಶ್ರೀ, ಲಾವಣ್ಯ ಮುಚ್ಚಿರಡ್ಕ ಇವರನ್ನು ಸನ್ಮಾನಿಸಲಾಯಿತು. ತೆಂಗಿನ ಗೆರಟೆಯಲ್ಲಿ ಕರಕುಶಲ ವಸ್ತುಗಳ ವಿಭಿನ್ನ ರಿತೀಯಲ್ಲಿ ಮಾಡಿರುವ ಅಶೋಕ ಹೊಸಕಟ್ಟ, ಶಿಶಿಲ ಗ್ರಾಮದಲ್ಲಿ ಗದ್ದೆ ನಾಟಿಮಾಡುವ ಮನೆತನದ ಗಣೇಶ್ ಕೆಳಗಿನ ವಟ್ಲ ಹಾಗೂ ಧರ್ಣಪ್ಪ ದೇವಸ ಹಾಗೂ ನಾಟಿ ವೈದ್ಯರಾದ ಗಿರಿಜ ಜಿನ್ನಪ್ಪ ಗೌಡ, ಕಾರ್ಯಕ್ರಮಕ್ಕೆ ಸ್ಥಳ ಒದಗಿಸಿ ಸಹಕರಿಸಿದ ಕೊರಗಪ್ಪ ಗೌಡ ಪಡ್ಪು ಇವರನ್ನು ಸನ್ಮಾನಿಸಲಾಯಿತು.

ಜಯಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಭವ್ಯಶ್ರೀ ಶಾಲೆಗುಡ್ಡೆ ಸ್ವಾಗತಿಸಿದರು.
ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಭುವನ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಮೋನಿಕ ಗುತ್ತು ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ಅಡ್ಡಹಳ್ಳ ವಂದಿಸಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ ಉಪಸ್ಥಿತರಿದ್ದರು.
ಬೆಳಗ್ಗೆ ಪಡ್ಪು ಮನೆಯವರಿಂದ ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.

Related posts

ಅಳದಂಗಡಿ ಆಮಂತ್ರಣ ಸೇವಾ ಪ್ರತಿಷ್ಠಾನದ ನೂತನ ಕಚೇರಿ ಉದ್ಘಾಟನೆ : ಪತ್ರಕರ್ತರಿಗೆ, ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಾಧಕರಿಗೆ ಸನ್ಮಾನ – ಯಕ್ಷಗಾನ ಕಲಿಕಾ ತರಗತಿಗೆ ಚಾಲನೆ ಹಾಗೂ ಅಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ವತಿಯಿಂದ ‘ಕವಿಗೋಷ್ಠಿ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಯವರಿಗೆ ರಾಜ್ಯಪಾಲರಿಂದ ‘ಕರ್ನಾಟಕ ಪರಿವರ್ತನೆಯ ರೂವಾರಿ’ ಪ್ರಶಸ್ತಿ ಪ್ರದಾನ

Suddi Udaya

ಬೆಳ್ತಂಗಡಿ ಅಬಕಾರಿ ನಿರೀಕ್ಷಕ ನವೀನ್ ಕುಮಾರ್ ವರ್ಗಾವಣೆ: ನೂತನ ಅಬಕಾರಿ ನಿರೀಕ್ಷಕರಾಗಿ ಸೌಮ್ಯಲತಾ ಎನ್. ನೇಮಕ

Suddi Udaya

ಮಡಂತ್ಯಾರು ನೇಸರ ಸಂಜೀವಿನಿ ಒಕ್ಕೂಟದ ಮಸಾಲಾ ಉತ್ಪನ್ನಗಳ ತರಬೇತಿ ಕಾರ್ಯಾಗಾರ

Suddi Udaya

ಮಡವು ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ನಿಂದ ಮಚ್ಚಿನ ಸ.ಪ್ರೌ. ಶಾಲೆಗೆ 200 ತಟ್ಟೆ ಹಾಗೂ 2 ತಟ್ಟೆ ಇಡುವ ಸ್ಟಾಂಡ್ ಕೊಡುಗೆ

Suddi Udaya

ಮಿತ್ತಬಾಗಿಲು: ನೇತ್ರಾವತಿ ನದಿಯ ಕೊಪ್ಪದ ಗಂಡಿ ಸೇತುವೆ ಮುಳುಗಡೆ

Suddi Udaya
error: Content is protected !!