September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ಶ್ರೀ ಧ. ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರುಗಿತು, ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬಿ ಸೋಮಶೇಖರ ಶೆಟ್ಟಿ ಯವರು ಅನೇಕ ಉದಾಹರಣೆ, ಕಥೆಗಳ ಮೂಲಕ ದುಶ್ಚಟಗಳಿಗೆ ಬಲಿ ಬೀಳದಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಣವೆಂದರೆ ಅಂಕ,ಸರ್ಟಿಫಿಕೇಟ್ ಮಾತ್ರವಲ್ಲ. ಅದು ವ್ಯಕ್ತಿಯ ನಡವಳಿಕೆಯಿಂದ ವ್ಯಕ್ತವಾಗಬೇಕು.


ಶಿಸ್ತು, ಶಿಕ್ಷಣದ ಅವಿಭಾಜ್ಯ ಅಂಗ . ಮನುಷ್ಯನ ಯಶಸ್ಸು ಆತನ ಆತ್ಮವಿಶ್ವಾಸವನ್ನು ಅವಲಂಬಿಸಿದೆ. ಎಲ್ಲಕ್ಕಿಂತ ಕಠಿಣವಾದದ್ದು ಸ್ವಯಂ ಬದಲಾವಣೆ. ಕ್ಷಣಿಕ ಸುಖಕಾಗಿ ಶಾಶ್ವತ ಸುಖವನ್ನು ನಾಶ ಮಾಡಿಕೊಳ್ಳಬೇಡಿ.ಉತ್ತಮ ಜೀವನ ಕೌಶಲ್ಯ ಹಾಗೂ ಜೀವನ ಮೌಲ್ಯಗಳನ್ನು ರೂಡಿಸಿಕೊಳ್ಳುವಂತೆ ವಿವರಿಸಿ ತಿಳಿಸಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥೆ ಯಾಗಿರುವ ಶ್ರೀಮತಿ ಮೇರಿಸ್ಮಿತ ವಹಿಸಿದ್ದರು. ಎಲೆಕ್ಟ್ರಾನಿಕ್ & ಕಮ್ಯುನಿಕೇಶನ್ ವಿಭಾಗದ ನಿಖಿತ್ ಡಿ ಆರ್ ನಿರೂಪಿಸಿ ನೆರವೇರಿಸಿದರು.

Related posts

ಮನೋಜವಂ ಮಾರುತ ತುಲ್ಯವೇಗಂ; ಅಳದಂಗಡಿಯಲ್ಲಿ ಹನುಮ ನಾಮ ಸ್ಮರಣೆ ಹನುಮೋತ್ಸವ-2025, : ಹನುಮ ಯಾಗಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ

Suddi Udaya

ಜು.19: ಡಾಕ್ಯುಮೆಂಟರಿ ಪ್ರದರ್ಶನ ಮತ್ತು ಕುದ್ಕ ಬಚ್ಚಿರೆ ಪುಸ್ತಕ ಬಿಡುಗಡೆ

Suddi Udaya

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ

Suddi Udaya

ಬೆಳ್ತಂಗಡಿ: ಖಾಸಗಿ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ” ಗಣಪತಿ ಎನ್ನ ಪಾಲಿಸೋ..” ಭಕ್ತಿಗೀತೆ ಬಿಡುಗಡೆ

Suddi Udaya
error: Content is protected !!