25.5 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಈಸ್ಟರ್ ಹಬ್ಬ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಈಸ್ಟರ್ ಹಬ್ಬವು ವಿಜೃಂಭಣೆಯಿಂದ ಆಚರಿಸಲಾಯಿತು.

ಏ.5ರಂದು ಯೇಸು ಕ್ರಿಸ್ತನ ಪುನರುದ್ಧನಾದ ಹಬ್ಬವಾದ ಈಸ್ಟರ್ ಹಬ್ಬವು ಬೆಳ್ತಂಗಡಿ ಧರ್ಮಪ್ರಾಂತ್ಯದ ಎಲ್ಲ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಧರ್ಮಪ್ರಾಂತ್ಯದ ಕಥಿಡ್ರಲ್ ದೇವಾಲಯದಲ್ಲಿ ಜೇಮ್ಸ್ ಪತ್ತೇರಿಲ್ ರವರ ಕಾರ್ಮಿಕತ್ವದಲ್ಲಿ ಪೂಜಾ ವಿಧಾನಗಳನ್ನು ನಡೆಸಲಾಯಿತು. ಹಬ್ಬದ ಸಂದೇಶದಲ್ಲಿ
ಜೀವನ ಸಂಸ್ಕೃತಿ ಕಡೆ ಸಮಾಜ ತಿರುಗುವಂತೆ ಸಮಾಜದಲ್ಲಿ ಬದಲಾವಣೆಗೆ ಕರೆ ನೀಡುವ ಆಳವಾದ ಸಂದೇಶವನ್ನು ನೀಡಿದರು.
ಪುಣ್ಯ ಸ್ಮರಣಾರ್ಹರಾದ ಪೋಪ್ ಜಾನ್ ಪಾಲ್ ದ್ವಿತೀಯರಿಂದ ಪ್ರಸಿದ್ಧವಾದ ‘ಮರಣ ಸಂಸ್ಕೃತಿ’ಯ ಬೆಳವಣಿಗೆಯ ಬಗ್ಗೆ ಗಮನ ಹರಿಸಿದರು. ವೈಯಕ್ತಿಕ ಆನಂದ, ಉಪಯೋಗ ಮತ್ತು ತೀವ್ರ ವೈಯಕ್ತಿಕತೆಯನ್ನು ಮನುಷ್ಯನ ಗೌರವದ ಮೇಲೆ ಆದ್ಯತೆ ನೀಡುವ ಆಧುನಿಕ ಸಮಾಜ ‘ಮರಣ ಸಂಸ್ಕೃತಿ’ ಕಡೆ ತಳ್ಳುತ್ತಿದೆ ಎಂದು ಎಚ್ಚರಿಸಿದರು.

“ದೇವರು ಮತ್ತು ಸತ್ಯದ ಭಾವನೆ ಕಳೆದುಕೊಂಡಾಗ, ಮನುಷ್ಯ ಜೀವನದ ಮೌಲ್ಯ ವ್ಯಾಪಾರಕ್ಕೆ ಒಳಗಾಗುತ್ತದೆ” ಎಂದು ಬಿಷಪ್ ಈ ಸಾಮಾಜಿಕ ಸಂಕಷ್ಟಗಳ ಆಧ್ಯಾತ್ಮಿಕ ಮೂಲಗಳನ್ನು ಗುರುತಿಸಲು ಭಕ್ತರನ್ನು ಕರೆ ನೀಡಿದರು.

ಮರಣ ಸಂಸ್ಕೃತಿಯಿಂದ ದೂರವಾಗಿ, ಪ್ರೀತಿ, ಹಂಚಿಕೆ ಮತ್ತು ಸಹಾನುಭೂತಿಯಿಂದ ವ್ಯಾಪ್ತವಾದ ಸಮುದಾಯವನ್ನು ನಿರ್ಮಿಸೋಣ” ಎಂದರು.
ಧರ್ಮಪ್ರಾಂತ್ಯದ ವಿಕಾರ್ ಜನರಾಲ್ ವಂದನೀಯ ಫಾ ಮಾಣಿ, ವಂದನೀಯ ಫಾ ಕುರಿಯಾಕೋಸ್, ವಂದನೀಯ ಫಾ. ಥಾಮಸ್ ಮೊದಲಾದ ಧರ್ಮಗುರುಗಳು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಭಗಿನಿಯರು ವಿಶ್ವಾಸಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

Related posts

ಶಿಶಿಲ: ದೇನೋಡಿ ಪರಿಸರದ ತೋಟಗಳಿಗೆ ನುಗ್ಗಿದ ಕಾಡನೆಗಳ ಹಿಂಡು

Suddi Udaya

ಕಳೆಂಜ: ಕಾಯರ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ

Suddi Udaya

ಅಳದಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಹಾಗೂ ಸೇವಾ ಸಿಂಧು ಕೇಂದ್ರದ ಉದ್ಘಾಟನೆ

Suddi Udaya

ಅ.13-19 : ವಾಣಿ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಸರ್ವಿಸ್ ರಸ್ತೆಯ ಬದಲಿಗೆ ಡ್ಯೂಯೆಲ್ ಕಾರೇಜ್ ನೊಂದಿಗೆ ರಸ್ತೆಯನ್ನು ಅಗಲಗೊಳಿಸಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಿಗೆ ಬೆಳ್ತಂಗಡಿ ವರ್ತಕರ ಸಂಘದಿಂದ ಮನವಿ

Suddi Udaya
error: Content is protected !!