July 23, 2026
Uncategorized

ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಈಸ್ಟರ್ ಹಬ್ಬ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಈಸ್ಟರ್ ಹಬ್ಬವು ವಿಜೃಂಭಣೆಯಿಂದ ಆಚರಿಸಲಾಯಿತು.

ಏ.5ರಂದು ಯೇಸು ಕ್ರಿಸ್ತನ ಪುನರುದ್ಧನಾದ ಹಬ್ಬವಾದ ಈಸ್ಟರ್ ಹಬ್ಬವು ಬೆಳ್ತಂಗಡಿ ಧರ್ಮಪ್ರಾಂತ್ಯದ ಎಲ್ಲ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಧರ್ಮಪ್ರಾಂತ್ಯದ ಕಥಿಡ್ರಲ್ ದೇವಾಲಯದಲ್ಲಿ ಜೇಮ್ಸ್ ಪತ್ತೇರಿಲ್ ರವರ ಕಾರ್ಮಿಕತ್ವದಲ್ಲಿ ಪೂಜಾ ವಿಧಾನಗಳನ್ನು ನಡೆಸಲಾಯಿತು. ಹಬ್ಬದ ಸಂದೇಶದಲ್ಲಿ
ಜೀವನ ಸಂಸ್ಕೃತಿ ಕಡೆ ಸಮಾಜ ತಿರುಗುವಂತೆ ಸಮಾಜದಲ್ಲಿ ಬದಲಾವಣೆಗೆ ಕರೆ ನೀಡುವ ಆಳವಾದ ಸಂದೇಶವನ್ನು ನೀಡಿದರು.
ಪುಣ್ಯ ಸ್ಮರಣಾರ್ಹರಾದ ಪೋಪ್ ಜಾನ್ ಪಾಲ್ ದ್ವಿತೀಯರಿಂದ ಪ್ರಸಿದ್ಧವಾದ ‘ಮರಣ ಸಂಸ್ಕೃತಿ’ಯ ಬೆಳವಣಿಗೆಯ ಬಗ್ಗೆ ಗಮನ ಹರಿಸಿದರು. ವೈಯಕ್ತಿಕ ಆನಂದ, ಉಪಯೋಗ ಮತ್ತು ತೀವ್ರ ವೈಯಕ್ತಿಕತೆಯನ್ನು ಮನುಷ್ಯನ ಗೌರವದ ಮೇಲೆ ಆದ್ಯತೆ ನೀಡುವ ಆಧುನಿಕ ಸಮಾಜ ‘ಮರಣ ಸಂಸ್ಕೃತಿ’ ಕಡೆ ತಳ್ಳುತ್ತಿದೆ ಎಂದು ಎಚ್ಚರಿಸಿದರು.

“ದೇವರು ಮತ್ತು ಸತ್ಯದ ಭಾವನೆ ಕಳೆದುಕೊಂಡಾಗ, ಮನುಷ್ಯ ಜೀವನದ ಮೌಲ್ಯ ವ್ಯಾಪಾರಕ್ಕೆ ಒಳಗಾಗುತ್ತದೆ” ಎಂದು ಬಿಷಪ್ ಈ ಸಾಮಾಜಿಕ ಸಂಕಷ್ಟಗಳ ಆಧ್ಯಾತ್ಮಿಕ ಮೂಲಗಳನ್ನು ಗುರುತಿಸಲು ಭಕ್ತರನ್ನು ಕರೆ ನೀಡಿದರು.

ಮರಣ ಸಂಸ್ಕೃತಿಯಿಂದ ದೂರವಾಗಿ, ಪ್ರೀತಿ, ಹಂಚಿಕೆ ಮತ್ತು ಸಹಾನುಭೂತಿಯಿಂದ ವ್ಯಾಪ್ತವಾದ ಸಮುದಾಯವನ್ನು ನಿರ್ಮಿಸೋಣ” ಎಂದರು.
ಧರ್ಮಪ್ರಾಂತ್ಯದ ವಿಕಾರ್ ಜನರಾಲ್ ವಂದನೀಯ ಫಾ ಮಾಣಿ, ವಂದನೀಯ ಫಾ ಕುರಿಯಾಕೋಸ್, ವಂದನೀಯ ಫಾ. ಥಾಮಸ್ ಮೊದಲಾದ ಧರ್ಮಗುರುಗಳು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಭಗಿನಿಯರು ವಿಶ್ವಾಸಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

Related posts

ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಆಲಿಕುಂಞಿ ನಾಮಪತ್ರ ಸಲ್ಲಿಕೆ

Suddi Udaya

ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಿವಿಧ ಸಮಿತಿಗಳ ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya

ಸುಯ೯ ಸದಾಶಿವ ರುದ್ರ ದೇವಸ್ಥಾನಕ್ಕೆ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಭೇಟಿ

Suddi Udaya

ಚಾತುರ್ಮಾಸ್ಯ ವ್ರತಾಚರಣೆ, ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು

Suddi Udaya

ಕೆಪಿಎಸ್ ಪುಂಜಾಲಕಟ್ಟೆ: ಆಟಿ ತಿಂಗೊಲ್ಡ್ ಜೋಕ್ಲೆ ಗೇನ

Suddi Udaya

ಓಡಿಲ್ನಾಳ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!