24 C
ಪುತ್ತೂರು, ಬೆಳ್ತಂಗಡಿ
June 8, 2026
Uncategorized

ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಈಸ್ಟರ್ ಹಬ್ಬ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಈಸ್ಟರ್ ಹಬ್ಬವು ವಿಜೃಂಭಣೆಯಿಂದ ಆಚರಿಸಲಾಯಿತು.

ಏ.5ರಂದು ಯೇಸು ಕ್ರಿಸ್ತನ ಪುನರುದ್ಧನಾದ ಹಬ್ಬವಾದ ಈಸ್ಟರ್ ಹಬ್ಬವು ಬೆಳ್ತಂಗಡಿ ಧರ್ಮಪ್ರಾಂತ್ಯದ ಎಲ್ಲ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಧರ್ಮಪ್ರಾಂತ್ಯದ ಕಥಿಡ್ರಲ್ ದೇವಾಲಯದಲ್ಲಿ ಜೇಮ್ಸ್ ಪತ್ತೇರಿಲ್ ರವರ ಕಾರ್ಮಿಕತ್ವದಲ್ಲಿ ಪೂಜಾ ವಿಧಾನಗಳನ್ನು ನಡೆಸಲಾಯಿತು. ಹಬ್ಬದ ಸಂದೇಶದಲ್ಲಿ
ಜೀವನ ಸಂಸ್ಕೃತಿ ಕಡೆ ಸಮಾಜ ತಿರುಗುವಂತೆ ಸಮಾಜದಲ್ಲಿ ಬದಲಾವಣೆಗೆ ಕರೆ ನೀಡುವ ಆಳವಾದ ಸಂದೇಶವನ್ನು ನೀಡಿದರು.
ಪುಣ್ಯ ಸ್ಮರಣಾರ್ಹರಾದ ಪೋಪ್ ಜಾನ್ ಪಾಲ್ ದ್ವಿತೀಯರಿಂದ ಪ್ರಸಿದ್ಧವಾದ ‘ಮರಣ ಸಂಸ್ಕೃತಿ’ಯ ಬೆಳವಣಿಗೆಯ ಬಗ್ಗೆ ಗಮನ ಹರಿಸಿದರು. ವೈಯಕ್ತಿಕ ಆನಂದ, ಉಪಯೋಗ ಮತ್ತು ತೀವ್ರ ವೈಯಕ್ತಿಕತೆಯನ್ನು ಮನುಷ್ಯನ ಗೌರವದ ಮೇಲೆ ಆದ್ಯತೆ ನೀಡುವ ಆಧುನಿಕ ಸಮಾಜ ‘ಮರಣ ಸಂಸ್ಕೃತಿ’ ಕಡೆ ತಳ್ಳುತ್ತಿದೆ ಎಂದು ಎಚ್ಚರಿಸಿದರು.

“ದೇವರು ಮತ್ತು ಸತ್ಯದ ಭಾವನೆ ಕಳೆದುಕೊಂಡಾಗ, ಮನುಷ್ಯ ಜೀವನದ ಮೌಲ್ಯ ವ್ಯಾಪಾರಕ್ಕೆ ಒಳಗಾಗುತ್ತದೆ” ಎಂದು ಬಿಷಪ್ ಈ ಸಾಮಾಜಿಕ ಸಂಕಷ್ಟಗಳ ಆಧ್ಯಾತ್ಮಿಕ ಮೂಲಗಳನ್ನು ಗುರುತಿಸಲು ಭಕ್ತರನ್ನು ಕರೆ ನೀಡಿದರು.

ಮರಣ ಸಂಸ್ಕೃತಿಯಿಂದ ದೂರವಾಗಿ, ಪ್ರೀತಿ, ಹಂಚಿಕೆ ಮತ್ತು ಸಹಾನುಭೂತಿಯಿಂದ ವ್ಯಾಪ್ತವಾದ ಸಮುದಾಯವನ್ನು ನಿರ್ಮಿಸೋಣ” ಎಂದರು.
ಧರ್ಮಪ್ರಾಂತ್ಯದ ವಿಕಾರ್ ಜನರಾಲ್ ವಂದನೀಯ ಫಾ ಮಾಣಿ, ವಂದನೀಯ ಫಾ ಕುರಿಯಾಕೋಸ್, ವಂದನೀಯ ಫಾ. ಥಾಮಸ್ ಮೊದಲಾದ ಧರ್ಮಗುರುಗಳು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಭಗಿನಿಯರು ವಿಶ್ವಾಸಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

Related posts

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ವತಿಯಿಂದ, ಉಜಿರೆ ಎಸ್‌.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಸಹಭಾಗಿತ್ವದಲ್ಲಿ ಉಚಿತ ಇಸಿಜಿ ತಪಾಸಣಾ ಶಿಬಿರ,194 ಮಂದಿಗೆ ತಪಾಸಣೆ

Suddi Udaya

ಅಂತರಾಷ್ಟ್ರೀಯ ಸೀನಿಯರ್ ಚೇಂಬರ್ ದಿನಾಚರಣೆ

Suddi Udaya

ಗುರುವಾಯನಕೆರೆಯಲ್ಲಿ ಶಾಸಕ ಹರೀಶ್ ಪೂಂಜಾ ರವರ ಬ್ರಹತ್ ಬ್ಯಾನರ್

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

Suddi Udaya

ಬಾರ್ಯ ಗ್ರಾಮ ಪಂಚಾಯತ್ ನಲ್ಲಿ ಅಣಬೆ ಕೃಷಿ ತರಬೇತಿ

Suddi Udaya

ಮಂಜುಶ್ರೀ ಮುದ್ರಣಾಲಯದ ಮೇಲ್ವಿಚಾರಕ ವಿಶ್ವನಾಥ ಶೆಟ್ಟಿಯವರಿಗೆ ಬೀಳ್ಕೊಡುಗೆ

Suddi Udaya
error: Content is protected !!