September 6, 2026
Uncategorized

ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಈಸ್ಟರ್ ಹಬ್ಬ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಈಸ್ಟರ್ ಹಬ್ಬವು ವಿಜೃಂಭಣೆಯಿಂದ ಆಚರಿಸಲಾಯಿತು.

ಏ.5ರಂದು ಯೇಸು ಕ್ರಿಸ್ತನ ಪುನರುದ್ಧನಾದ ಹಬ್ಬವಾದ ಈಸ್ಟರ್ ಹಬ್ಬವು ಬೆಳ್ತಂಗಡಿ ಧರ್ಮಪ್ರಾಂತ್ಯದ ಎಲ್ಲ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಧರ್ಮಪ್ರಾಂತ್ಯದ ಕಥಿಡ್ರಲ್ ದೇವಾಲಯದಲ್ಲಿ ಜೇಮ್ಸ್ ಪತ್ತೇರಿಲ್ ರವರ ಕಾರ್ಮಿಕತ್ವದಲ್ಲಿ ಪೂಜಾ ವಿಧಾನಗಳನ್ನು ನಡೆಸಲಾಯಿತು. ಹಬ್ಬದ ಸಂದೇಶದಲ್ಲಿ
ಜೀವನ ಸಂಸ್ಕೃತಿ ಕಡೆ ಸಮಾಜ ತಿರುಗುವಂತೆ ಸಮಾಜದಲ್ಲಿ ಬದಲಾವಣೆಗೆ ಕರೆ ನೀಡುವ ಆಳವಾದ ಸಂದೇಶವನ್ನು ನೀಡಿದರು.
ಪುಣ್ಯ ಸ್ಮರಣಾರ್ಹರಾದ ಪೋಪ್ ಜಾನ್ ಪಾಲ್ ದ್ವಿತೀಯರಿಂದ ಪ್ರಸಿದ್ಧವಾದ ‘ಮರಣ ಸಂಸ್ಕೃತಿ’ಯ ಬೆಳವಣಿಗೆಯ ಬಗ್ಗೆ ಗಮನ ಹರಿಸಿದರು. ವೈಯಕ್ತಿಕ ಆನಂದ, ಉಪಯೋಗ ಮತ್ತು ತೀವ್ರ ವೈಯಕ್ತಿಕತೆಯನ್ನು ಮನುಷ್ಯನ ಗೌರವದ ಮೇಲೆ ಆದ್ಯತೆ ನೀಡುವ ಆಧುನಿಕ ಸಮಾಜ ‘ಮರಣ ಸಂಸ್ಕೃತಿ’ ಕಡೆ ತಳ್ಳುತ್ತಿದೆ ಎಂದು ಎಚ್ಚರಿಸಿದರು.

“ದೇವರು ಮತ್ತು ಸತ್ಯದ ಭಾವನೆ ಕಳೆದುಕೊಂಡಾಗ, ಮನುಷ್ಯ ಜೀವನದ ಮೌಲ್ಯ ವ್ಯಾಪಾರಕ್ಕೆ ಒಳಗಾಗುತ್ತದೆ” ಎಂದು ಬಿಷಪ್ ಈ ಸಾಮಾಜಿಕ ಸಂಕಷ್ಟಗಳ ಆಧ್ಯಾತ್ಮಿಕ ಮೂಲಗಳನ್ನು ಗುರುತಿಸಲು ಭಕ್ತರನ್ನು ಕರೆ ನೀಡಿದರು.

ಮರಣ ಸಂಸ್ಕೃತಿಯಿಂದ ದೂರವಾಗಿ, ಪ್ರೀತಿ, ಹಂಚಿಕೆ ಮತ್ತು ಸಹಾನುಭೂತಿಯಿಂದ ವ್ಯಾಪ್ತವಾದ ಸಮುದಾಯವನ್ನು ನಿರ್ಮಿಸೋಣ” ಎಂದರು.
ಧರ್ಮಪ್ರಾಂತ್ಯದ ವಿಕಾರ್ ಜನರಾಲ್ ವಂದನೀಯ ಫಾ ಮಾಣಿ, ವಂದನೀಯ ಫಾ ಕುರಿಯಾಕೋಸ್, ವಂದನೀಯ ಫಾ. ಥಾಮಸ್ ಮೊದಲಾದ ಧರ್ಮಗುರುಗಳು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಭಗಿನಿಯರು ವಿಶ್ವಾಸಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

Related posts

ಪದ್ಮುಂಜ ಶಾಲೆಯಲ್ಲಿ ಪರೀಕ್ಷೆಗೆ ಅವಕಾಶ ನೀಡಿಲ್ಲ ಎಂಬ ಆರೋಪ: ಪರೀಕ್ಷೆಗೆ ಹಾಜರಾದ ಇಬ್ಬರೂ ವಿದ್ಯಾರ್ಥಿಗಳು

Suddi Udaya

ದೇಯಿ ಬೈದ್ಯೆತಿ ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ನಡ ಸರಕಾರೀ ಪದವಿಪೂರ್ವ ಕಾಲೇಜಿಗೆ88.41ಶೇಕಡಾ ಫಲಿತಾಂಶ

Suddi Udaya

ನಿಡ್ಲೆ: ನಿವೃತ್ತ ಶಿಕ್ಷಕ ರಾಮಣ್ಣ ಪೂಜಾರಿ ನಿಧನ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ

Suddi Udaya

ಸುರ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya
error: Content is protected !!