22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಪವಿತ್ರ ವಾರ ಹಾಗೂ ಈಸ್ಟರ್ ಹಬ್ಬದ ಆಚರಣೆ

ಬೆಳ್ತಂಗಡಿ: ವಿಶ್ವದದ್ಯಾಂತ ಕ್ರೈಸ್ತರು ಆಚರಿಸುವ ತಪಸ್ಸು ಕಾಲದ 40 ದಿನಗಳಲ್ಲಿ ಕೊನೆಯ ದಿನವಾದ ಯೇಸುವಿನ ಪುನರುತ್ಥಾನದ ದಿನ ” ಈಸ್ಟರ್ ” ಹಬ್ಬವನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಯಿತು.

ಪವಿತ್ರ ಗರಿಗಳ ಭಾನುವಾರ : ಮಾ.29ರಂದು ಯೇಸು ಕ್ರಿಸ್ತರು ಜೆರುಸಲೇಮ್ ನಗರವನ್ನು ವಿಜಯೋತ್ಸವದೊಂದಿಗೆ ಪ್ರವೇಶಿಸದ ಸ್ಮರಣರ್ಥ ಆಚರಿಸಲಾಗುವ ” ಗರಿಗಳ ಭಾನುವಾರ ” ( Palm Sunday) ವನ್ನು ಆಚರಿಸಲಾಯಿತು. ಕ್ರೈಸ್ತ ಭಾಂದವರ ಅತ್ಯoತ ಪವಿತ್ರವಾದ ‘ ಪವಿತ್ರ ವಾರಕ್ಕೆ ‘ ಚಾಲನೆ ದೊರೆಯಿತು.

ಪವಿತ್ರ ಗುರುವಾರ : ಏ.3ರಂದು ಯೇಸು ಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು ತೊಳೆದು ವಿನಯತೆಯನ್ನು ಮೆರೆದ ನೆನಪಿಗಾಗಿ ಧರ್ಮಗುರುಗಳು 12 ಮಂದಿ ಪ್ರತಿನಿಧಿಗಳ ಪಾದಗಳನ್ನು ತೊಳೆದರು.

ಶುಭ ಶುಕ್ರವಾರ ( ಗುಡ್ ಫ್ರೈಡೆ ) : ಏ.3, ಕ್ರೈಸ್ತ ವಿಶ್ವಾಸಿಗಳ ಪಾಲಿನ ಅತ್ಯoತ ಪವಿತ್ರ ಹಾಗು ಶೋಕದ ದಿನವಾದ ” ಶುಭ ಶುಕ್ರವಾರ ” ವನ್ನು ಆಚರಿಸಲಾಯಿತು.
ಬೆಳಿಗ್ಗೆ ಮಕ್ಕಳಿಂದ ಶಿಲುಬೆಯ ಹಾದಿ ಹಾಗೂ ಸಂಜೆ ಶಿಲುಬೆಯ ಆರಾಧನೆ, ಪವಿತ್ರ ಪ್ರಸಾದ ಸ್ವೀಕಾರ ಹಾಗು ಕಷ್ಟಾನುಭವದ
ವಾಚನ ನಡೆಯಿತು.

Related posts

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ತರಬೇತಿ

Suddi Udaya

ಸೌತಡ್ಕ ಮಹಾಗಣಪತಿ ದೇವಸ್ಥಾನ: ವ್ಯವಸ್ಥಾಪನಾ ಸಮಿತಿಯ 9 ಸದಸ್ಯ ಸ್ಥಾನಕ್ಕೆ 28 ಮಂದಿ ಅರ್ಜಿ

Suddi Udaya

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿಗೆ ಶೇ.100 ಫಲಿತಾಂಶ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಇಪಿಎಸ್ ತರಬೇತಿ ಕಾರ್ಯಕ್ರಮ

Suddi Udaya

ಲಯನ್ಸ್ ಜಿಲ್ಲೆ 317ಡಿ ಕೃತಜ್ಞಾ ಪ್ರಶಸ್ತಿ ಪ್ರಧಾನ ಸಮಾರಂಭ: ವಸಂತ್ ಶೆಟ್ಟಿ ಶ್ರದ್ದಾರವರಿಗೆ ಅತ್ಯುತ್ತಮ ಪ್ರಾಂತೀಯ ಅಧ್ಯಕ್ಷ ಪ್ರಶಸ್ತಿ

Suddi Udaya
error: Content is protected !!