September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೇರಳ ಹೊಟೇಲ್ ಮಾಲಕನ ಹತ್ಯೆ ಪ್ರಕರಣ: ಹೊಟೇಲ್ ಕೆಲಸಗಾರ ಬೆಳ್ತಂಗಡಿಯ ಯುವಕ ಬಂಧನ

ಬೆಳ್ತಂಗಡಿ: ತಾನು ಕೆಲಸ ಮಾಡುತ್ತಿದ್ದ ಕೇರಳದ ಹೊಟೇಲಿನ ಮಾಲಕನನ್ನೇ ಏ.6 ರಂದು ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಪೆರ್ದಾಡಿ ನಿವಾಸಿ ಉಮರಬ್ಬ ಎಂಬವರ ಪುತ್ರ ಇರ್ಷಾದ್ (32) ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಚಡಯಮಂಗಳ- ಕುರಿಯೋಡು ಸ್ವೈಸಿ ಎಂಬ ಹೆಸರಿನ ಹೊಟೇಲ್ ಉದ್ಯಮ ನಡೆಸುತ್ತಿದ್ದ ಮಾಲೀಕ ಶಕೀ‌ರ್ ಹುಸೈನ್ ಎಂಬವರನ್ನು ಇರ್ಷಾದ್ ಎಂಬಾತ ಕೊಲೆ ಮಾಡಿರುವ ಘಟನೆ ನಡೆದಿದೆ.

ಪ್ರಕರಣದ ವಿವರ: ಕುಝಿ ಮಂದಿ ಬಿರಿಯಾಣಿ ಪಾಕ ತಜ್ಞನಾಗಿದ್ದ ಬೆಳ್ತಂಗಡಿಯ ಇರ್ಷಾದ್ ತಾನು ಕೆಲಸ ಮಾಡುತ್ತಿದ್ದ ಹೋಟೇಲ್‌ಗೆ ಬರುತ್ತಿದ್ದ ಅಕ್ಕಿ ಮೂಟೆಯಲ್ಲಿರುವ 50,100,150 ರೂಪಾಯಿಗಳ ಕೂಪನ್ ಗಾಗಿ ನಡೆದ ಜಗಳದಿಂದ ಈ ಕೃತ್ಯವೆಸಗಿದ್ದಾನೆ. ಅಕ್ಕಿಮೂಟೆಯಲ್ಲಿ ಬರುತ್ತಿದ್ದ ಕೂಪನ್ ಒಟ್ಟು ಸೇರಿಸಿ ಮಾಲಕರಿಗೆ ಕೊಡಬೇಕೆಂದು ಹೊಟೇಲ್ ಮಾಲಕ ಕೇರಳದ ಆಕಲ್ ನಿವಾಸಿ ಶಕೀರ್ ಹುಸೈನ್ ನಿರ್ದೇಶನ ನೀಡಿದ್ದರು. ಅದಾಗ್ಯೂ ಇರ್ಷಾದ್ ಕೂಪನ್ ಗಳನ್ನು ತಾನೇ ಸಂಗ್ರಹಿಸಿಟ್ಟುಕೊಂಡಿದ್ದ. ಇದನ್ನು ಪ್ರಶ್ನಿಸುವ ಸಲುವಾಗಿ ಪತ್ನಿಯೊಂದಿಗೆ ಆತ ವಿಶ್ರಾಂತಿ ಪಡೆಯುತ್ತಿದ್ದ ವಸತಿ ಗೃಹದ ಎರಡನೇ ಮಹಡಿಗೆ ಹೋಗಿದ್ದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇರ್ಷಾದ್ ಚಾಕು ತೆಗೆದು ಮಾಲಕನ ಎದೆಗೆ ಬಲವಾಗಿ ಚುಚ್ಚಿದ್ದಾನೆ ಎನ್ನಲಾಗಿದೆ.

ಕೇರಳ ಹೊಟೇಲ್ ಮಾಲೀಕ ಶಕೀರ್ ಹುಸೈನ್ ನನ್ನು ಏ.6 ರಂದು ಕೊಲೆ ಮಾಡಿದ ಬಳಿಕ ಬಟ್ಟೆ ಬದಲಿಸಿ ಅದೇ ಹೊಟೇಲ್‌ನ ಸಿಬ್ಬಂದಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗುವಾಗ ಚಡಯಮಂಗಳ ಮತ್ತು ಮನ್ನಾಂದಲ ಪೊಲೀಸರು ಹಾಗೂ ಊರವರ ಸಹಕಾರದೊಂದಿದೆ ಕೆಎಸ್‌ಆರ್‌ಟಿಸಿ ಬಸ್ಸು ಹತ್ತಿ ಪ್ರಯಾಣಿಸುತ್ತಿದ್ದಾಗ ಇರ್ಷಾದ್ ನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಕೊಲ್ಲಂ ಜೈಲಿಗೆ ಕಳುಹಿಸಲಾಗಿದೆ.

Related posts

ಆ. 7 -16: ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

Suddi Udaya

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿಯ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಧರ್ಮಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ

Suddi Udaya

ಜಿಲ್ಲಾ ಮಟ್ಟದ ಕ್ರೀಡಾಕೂಟ: ಬಜಿರೆ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ವಿ.ಪ. ಸದಸ್ಯತ್ವದ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ ಪ್ರತಾಪ್ ಸಿಂಹ ನಾಯಕ್ ರವರಿಗೆ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ಸನ್ಮಾನ

Suddi Udaya

ಗೇರುಕಟ್ಟೆ :ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಪುರುಷೋತ್ತಮ ಜಿ

Suddi Udaya
error: Content is protected !!