23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಡೆಕ್ಕಾವುದ ಸತ್ಯೋಲು ಭಕ್ತಿ ಸುಗಿಪು ವೀಡಿಯೋ-ಆಡಿಯೋ ಆಲ್ಬಮ್ ಸಾಂಗ್ ಬಿಡುಗಡೆ

ನಾವೂರು: ದೈವ ಕ್ಷೇತ್ರ ಬಡೆಕ್ಕಾವು ಗುತ್ತುವಿನಲ್ಲಿ ಬಡೆಕ್ಕಾವುದ ಸತ್ಯೋಲು ಭಕ್ತಿ ಸುಗಿಪು ವೀಡಿಯೋ ಮತ್ತು ಆಡಿಯೋ ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಎ.14ರಂದು ನಡೆಯಿತು.

ಆಲ್ಬಮ್ ಸಾಂಗ್ ಬಿಡುಗಡೆಗೊಳಿಸಿ ಮಾತನಾಡಿದ ಡಿ.ಸಿ.ಪಿ.ಡಾ.ಬಿ.ಶಂಕರ್ ಮಾತನಾಡಿ ಬಡೆಕ್ಕಾವಿನ ಭಕ್ತರ ರಕ್ಷಕ ತಾಯಿ ಅಪ್ಪೆ ಕಲ್ಲುರ್ಟಿ. ಧರ್ಮ, ಜಾತಿ, ಮತ, ಬೇದಗಳನ್ನು ತ್ಯಾಜಿಸಿ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೈವದ ಕಾರಣೀಕ ಶಕ್ತಿ ಸಂಚಯನ ಇರುವ ಈ ಸ್ಥಳದಲ್ಲಿ ದೈವದ ಅನುಗ್ರಹದಿಂದ ಸ್ವಯಂ ಪ್ರೇರಣೆಯಿಂದ ಭಕ್ತರು ನಮ್ಮ ಮನೆಯ ಕಾರ್ಯಕ್ರಮದ್ದಂತೆ ಇಲ್ಲಿ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ. ಕ್ಷೇತ್ರಕ್ಕೆ ಆಗಮಿಸುವವರು ವ್ಯಕ್ತಿಯಾಗದೆ ಭಕ್ತರಾಗಿ ಬರುತ್ತಿದ್ದಾರೆ. ಬಡೆಕ್ಕಾವುಗುತ್ತಿನ ಮನೆತನದವರು ಸೌಮ್ಯತೆ ಲವಲವಿಕೆಯಿಂದ ಆಗಮಿಸಿದ ಭಕ್ತರು ಬರಮಾಡಿಕೊಳ್ಳುವ ವ್ಯವಸ್ಥೆ ಹೃದಯ ಶ್ರೀಮಂತಿಕೆ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೊಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕಾಂಜಾನು ಮಾತನಾಡಿ ನಮ್ಮ ಆಚಾರ-ವಿಚಾರಗಳನ್ನು ಜೀವಂತವಾಗಿರಿಸಿಕೊAಡು ಊರಿನವರನ್ನೂ ಒಗ್ಗೂಡಿಸಿ ನಿರಂತರವಾಗಿ ಸೇವೆ ನಡೆಯುತ್ತ ಬರುತ್ತಿರುವುದು ಶ್ಲಾಘನೀಯ. ಜನರ ಬೆಂಬಲದೊಂದಿಗೆ ಶಿಸ್ತುಬದ್ಧ ಕಟ್ಟುಪಾಡು ಆಚರಣೆಗೆ ಬಡೆಕ್ಕಾವುಗುತ್ತು ಅನುಕರಣೀಯ ಎಂದರು.

ಕೊಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಪ್ಪ ಪೂಜಾರಿ, ರವಿರಾಜ್ ಜೈನ್ ಬಡೆಕ್ಕಾವುಗುತ್ತು, ಉಜಿರೆ ಮಂದಾರ ಕಲಾವಿದರ ತಂಡದ ಅಧ್ಯಕ್ಷ ಗುಣಾಪಲ್ ಎಮ್.ಎಸ್, ಗಣೇಶ್ ಪಿ.ಎಸ್ ಇಂಚರ ನಾವೂರು,ಬಡೆಕ್ಕಾವುಗುತ್ತು ಮುಖ್ಯಸ್ಥ ರಕ್ಷಿತ್ ಅಜಿಲ, ವಸಂತ ಪೂಜಾರಿ ಇಡ್ಯಾಲ, ಪ್ರದೀಪ್ ಬೆಂಗಳೂರು, ಶಿವಣ್ಣ ಗೌಡ, ಊರಿನ ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು, ವಿಲಯದವರು ಸಹಿತ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರದ ವತಿಯಿಂದ ಚಲನಚಿತ್ರದ ಬಾಲ ಕಲಾವಿದರಾದ ಲೈಟ್ ಹೌಸ್ ಖ್ಯಾತಿಯ ಅಚಲ್ ಜಿ.ಬಂಗೇರ, ಕಾಂತಾರ ಖ್ಯಾತಿಯ ಅಧ್ವಿಕ್ ಜಿ.ಬಂಗೇರ ಹಾಗೂ ಗಾಯಕಿ ಸಿಂಚನಾ ಲಾವುದಡಿ ಅವರನ್ನು ಸನ್ಮಾನಿಸಲಾಯಿತು. ರತ್ನಾಕರ್ ಬಿ.ನಾವೂರು ನನಸು ಪ್ರಸ್ತಾವಿಸಿ ಸ್ವಾಗತಿಸಿದರು. ರಾಜು ಕೆ.ಕಾರ್ಯಕ್ರಮ ನಿರೂಪಿಸಿದರು.

Related posts

ಪೆರಿಂಜೆ: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ ಪ್ರಾರಂಭ

Suddi Udaya

ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಹಾಗೂ ಕ್ರೀಡಾ ಶಿಬಿರ ಉದ್ಘಾಟನೆ

Suddi Udaya

ಬೆಳ್ತಂಗಡಿ ರಿಕ್ಷಾ ಚಾಲಕ ಮಾಲಕರ ಸಂಘದ 27 ನೇ ಕ್ಷೇಮ ನಿಧಿ ವಿತರಣೆ

Suddi Udaya

ಉಜಿರೆ ಶ್ರೀ ಧ.ಮಂ.ವಸತಿ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ.

Suddi Udaya

ಇಂದಬೆಟ್ಟು: ಶ್ರೀ ಅರ್ಧನಾರೀಶ್ವರ ದೇವಸ್ಥಾನ ದೇವನಾರಿ ವರ್ಷಾವಧಿ ಜಾತ್ರೆ ಮತ್ತು ಪ್ರತಿಷ್ಠಾ ಮಹೋತ್ಸವ ಪ್ರಾರಂಭ

Suddi Udaya

ಬೆಳ್ತಂಗಡಿಯಲ್ಲಿ ಸಾಯಿನಾಥ್ ಗೌಡ ರವರ ನೂತನ ವಕೀಲರ ಕಛೇರಿ ಉದ್ಘಾಟನೆ

Suddi Udaya
error: Content is protected !!