September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಣ್ಯ ಇಲಾಖೆಯ ಸಹಯೋಗದಲ್ಲಿ ರಸ್ತೆ ನಿರ್ಮಾಣ ಆಗಲಿ :ಮೋಹನ್ ಗೌಡ ಕಲ್ಮoಜ

ಬೆಳ್ತಂಗಡಿ: ಪಶ್ಚಿಮ ಘಟ್ಟ ತಪ್ಪಲಿನ ಕುದುರೆಮುಖ ಅಭಯ ಅರಣ್ಯ ಪ್ರದೇಶ ಒಳಪಟ್ಟ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ದಿಡುಪೆ ಎಳನೀರು ಸಂಸೆ ಕಳಸ ರಸ್ತೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಿರ್ಮಾಣ ಆಗಲಿ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು, ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರಕ್ಕೆ ಅಗ್ರಹಿಸಿದ್ದಾರೆ.

ನಮ್ಮ ಸಮಾಜ ಬಾಂಧವರೇ ಹೆಚ್ಚಾಗಿ ಇರುವ ಪ್ರದೇಶ ಇದು. ವಿದ್ಯಾರ್ಥಿಗಳಿಗೆ ಕೃಷಿಕರಿಗೆ ಉದ್ಯೋಗಿಗಳಿಗೆ ಬೆಳ್ತಂಗಡಿ ತಾಲೂಕು ಸಂಪರ್ಕ ಒಂದು ದೊಡ್ಡ ದುರಂತ ಸವಾಲಿನ ಸಂಗತಿ. ರಾಷ್ಟ್ರದ ಅನೇಕ ಅರಣ್ಯ ಪ್ರದೇಶಗಳ ಪ್ರಕೃತಿ ರಮಣೀಯ ಸ್ಥಳ ವೀಕ್ಷಣೆ ವಿಹಾರ ರಸ್ತೆ ವ್ಯಾಪ್ತಿಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸುಂಕ ವಸೂಲಿ ಟಿಕೆಟ್ ಇತ್ಯಾದಿಗಳು ಮೂಲಕ ಆದಾಯ ಮಾಡುತ್ತಿರುವ ಸಂದರ್ಭದಲ್ಲಿ ಈ ರಸ್ತೆಯ ನಿರ್ಮಾಣಕ್ಕೂ ಇದೇ ಮಾದರಿಯಲ್ಲಾದರೂ ನಮಗೆ ರಸ್ತೆ ನಿರ್ಮಾಣ ಮೂಲಕ ಚಿಕ್ಕಮಗಳೂರು ದಕ್ಷಿಣ ಕನ್ನಡ ಜನತೆಯ ಸಂಪರ್ಕ ಕೊಂಡಿಯಾಗಬೇಕು. ಈ ಮೂಲಕ ಹೊರನಾಡು,ಕಳಸ ,ಶೃಂಗೇರಿ , ಧರ್ಮಸ್ಥಳ ದೇವಸ್ಥಾನ ಗಳಿಗೆ ಆಗಮಿಸುವ ಭಕ್ತರ. ಪ್ರಯಾಣಕ್ಕೂ ಅತೀ ಸಮೀಪ ರಸ್ತೆ ಜೊತೆ ಈ ಭಾಗದ ಜನತೆಯ ಆದಾಯ ಕೂಡ ಹೆಚ್ಚಾಗಲಿದೆ. ಅದ್ಭುತ ಪ್ರಕೃತಿ ರಮಣೀಯ ನೇತ್ರಾವತಿ ಉಗಮ ಸ್ಥಾನ ಜೊತೆ ಅನೇಕ ಸೌಂದರ್ಯ ಜಲಪಾತಗಳು ಇಲ್ಲಿವೆ. ಸರಕಾರ ಮನಸ್ಸು ಮಾಡಿ ಪ್ರವಾಸಿಗರ ಮನ ಸೆಳೆದು ಆದಾಯ ಹೆಚ್ಚಿಸಲು ತಾಲೂಕಿನ ಗೌರವ ಪ್ರಸಿದ್ದಿ ಹೆಚ್ಚಿಸಲು.. ವಿದ್ಯಾರ್ಥಿಗಳ. ಭವಿಷ್ಯ ದೃಷ್ಟಿ ಯಿಂದ ಆದರೂ ಈ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ದೊಡ್ಡ ಮನಸ್ಸು ಮಾಡಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರಕ್ಕೆ ವಿನಂತಿ ಮಾಡಿದ್ದಾರೆ.

ನೂತನ ಜಿಲ್ಲಾ ಸಂಸದ ಬ್ರಿಜೇಶ್ ಚೌಟರು ತಾಲೂಕಿನಲ್ಲಿ ನೂತನ ರಸ್ತೆಗಳಿಗೆ ಸಿಆರ್ ಎಫ್ ನಿಧಿಯಿಂದ ಅನುದಾನ ತಂದಿದ್ದಾರೆ ತಕ್ಷಣವೇ ಈ ಪ್ರದೇಶಕ್ಕೆ ಭೇಟಿ ನೀಡಿ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ವ್ಯಾಪ್ತಿಯವರೆಗಾದರೂ ರಸ್ತೆ ನಿರ್ಮಾಣ ಮಾಡಬೇಕು ಎಂದು ಅಗ್ರಹಿಸಿದ್ದಾರೆ.

Related posts

ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ; ಸಾವಿರಾರು ಮಂದಿ ಭಾಗಿ

Suddi Udaya

ಕಣಿಯೂರು: ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ

Suddi Udaya

ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ರಕ್ಷಾಬಂಧನ ಆಚರಣೆ

Suddi Udaya

ದ್ವೇಷ ಭಾಷಣ ಆರೋಪ: ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಿರುದ್ಧದ ಎಫ್‌ಐ ಆರ್‌ಗೆ ಹೈಕೋರ್ಟ್ ತಡೆ

Suddi Udaya

ತಾಲೂಕು ಮಟ್ಟದ ಸ್ಪರ್ಧೆ: ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ಗೆ ಸಮಗ್ರ ಪ್ರಶಸ್ತಿ

Suddi Udaya

ಕನ್ಯಾಡಿ ll ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Suddi Udaya
error: Content is protected !!