July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಮಳೆಗಾಲದ ವಿಪತ್ತು ಎದುರಿಸಲು ತಂಡ ರಚನೆ

bಬೆಳ್ತಂಗಡಿ: ಮಳೆಗಾಲದಲ್ಲಿ ಸಂಭವಿಸುವ ವಿಪತ್ತುಗಳಿಂದ ವಿದ್ಯುತ್ ಕಡಿತದ ಸಮಸ್ಯೆ ಕಡಿಮೆ ಮಾಡಲು ಲೈನ್‌ ಮ್ಯಾನ್‌ಗಳ ಜೊತೆ ಸಿಬ್ಬಂದಿ ನೇಮಿಸಲಾಗಿದ್ದು, ಆಯಾ ವಿಭಾಗಕ್ಕೆ ಎಇಇ ಉಸ್ತುವಾರಿಯಲ್ಲಿ ಐವರ ತಂಡ ಕಾರ್ಯಾಚರಿಸಲಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾ‌ರ್ ಹೇಳಿದರು.

ಬಿಜೈಯ ಮೆಸ್ಕಾಂ ಕಚೇರಿಯಲ್ಲಿ ಎ.15ರಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಈ ತಂಡವನ್ನು ಈಗಾಗಲೇ ರಚಿಸಲಾಗಿದ್ದು, ಅವರಿಗೆ ಒಂದು ವಾಹನವನ್ನೂ ಒದಗಿಸಲಾಗಿದೆ. ಸೆಪ್ಟೆಂಬರ್‌ವರೆಗೆ ಅವರ ಕಾರ್ಯಾಚರಣೆ ನಡೆಯುತ್ತಿರುತ್ತವೆ. ಟ್ರಾನ್ಸ್ ಫಾರ್ಮರ್ ದುರಸ್ತಿ, ಮರ, ಗೆಲ್ಲುಗಳು ಬಿದ್ದು ತಂತಿ, ಕಂಬಗಳಿಗೆ ಹಾನಿಯಾದರೆ ತುರ್ತಾಗಿ ಸರಿಪಡಿಸುವುದು ತಂಡದ ಕೆಲಸವಾಗಿರುತ್ತದೆ. 63 ಸಬ್ ಡಿವಿಷನ್‌ ನ 245 ವಿಭಾಗಗಳಲ್ಲಿ ತಂಡ ರಚನೆಯಾಗಿದೆ. ತಿಂಗಳಿಗೆ 2 ಕೋಟಿ ರೂ. ಹೆಚ್ಚುವರಿ ಖರ್ಚು ಬರಲಿದೆ. ಆದರೆ ಜನರಿಗೆ ಸೇವೆ ಸಿಗಲಿದೆ ಎಂದರು.

ಲೈನ್‌ಮ್ಯಾನ್‌ಗಳ ನೇಮಕ: ಮೆಸ್ಕಾಂಗೆ ನೂತನವಾಗಿ 465 ಮಂದಿ ಲೈನ್ ಮನ್‌ಗಳ ನೇಮಕ ಮಾಡಲಾಗುತ್ತಿದೆ. 9,248 ಲೈನ್‌ಮ್ಯಾನ್‌ ಹುದ್ದೆಗಳ ಪೈಕಿ 5,283 ಹುದ್ದೆ ಭರ್ತಿಯಾಗಿದೆ. ಉಳಿದ 4145 ಮಂದಿಯನ್ನು ಇನ್ನು ನೇಮಕ ಮಾಡಬೇಕಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲೂ ಇ-ಚಾರ್ಜಿಂಗ್ ಸೆಂಟರ್ ಅಳವಡಿಸುವ ಬಗ್ಗೆ ಸರ್ವೇ ಕಾರ್ಯ ನಡೆಸಲಾಗುತ್ತಿದ್ದು, ಶೀಘ್ರವಾಗಿ ಕೆಲಸ ನಡೆಸಲಾಗುವುದು ಎಂದು ಹರೀಶ್ ಕುಮಾರ್ ಹೇಳಿದರು.

Related posts

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಶುಲ್ಕ ಪಾವತಿಸದೆ ಇದ್ದಲ್ಲಿ ನೀರಿನ ಜೋಡಣೆ ಕಟ್

Suddi Udaya

ದಯಾ ವಿಶೇಷ ಶಾಲೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಂಸ್ಮರಣಾರ್ಥ ಗೊರೂರು ಕಂಡ ಗಾಂಧಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ಮಡಂತ್ಯಾರುವಿನಲ್ಲಿ “ಲಸ್ಸಿ ಟೇಲ್ಸ್ ಕೆಫೆ” ಶುಭಾರಂಭ

Suddi Udaya

ಶಾಸಕ ಹರೀಶ್ ಪೂಂಜರಿಂದ ಪಿಲಿಚಾಮುಂಡಿಕಲ್ಲು-ಶಕ್ತಿನಗರ ರಸ್ತೆ ಡಾಮರೀಕರಣಕ್ಕೆ ಶಿಲಾನ್ಯಾಸ: ಬದ್ಧತೆಯ ಜನಪ್ರತಿನಿಧಿನಗಳಿಂದ ಅಭಿವೃದ್ಧಿ ಸಾಧ್ಯ: ಹರೀಶ್ ಪೂಂಜ

Suddi Udaya

ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಅಧ್ಯಯನ ಪ್ರವಾಸ

Suddi Udaya
error: Content is protected !!