24 C
ಪುತ್ತೂರು, ಬೆಳ್ತಂಗಡಿ
July 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎ.19&20: ಬೆಳ್ತಂಗಡಿ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಕೊಡುಗೆ

ಬೆಳ್ತಂಗಡಿ: ನಗರದ ಮುಖ್ಯರಸ್ತೆ ಸಮೀಪದ ಗೋಕುಲ್ ಆರ್ಕೇಡ್‌ನಲ್ಲಿ ಕಾರ್ಯಚರಿಸುತ್ತಿರುವ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನಾಭರಣಗಳ ಮೇಲೆ ಎ.19 ಮತ್ತು 20ರಂದು ವಿಶೇಷ ಕೊಡುಗೆಗಳನ್ನು ನೀಡಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶೃಂಗಾರ್ ಜುವೆಲ್ಲರ್ಸ್ ನ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಂಬಿಕೆಗೆ ಇನ್ನೊಂದು ಹೆಸರು ಶೃಂಗಾರ್: ಬೆಳ್ತಂಗಡಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಚಿನ್ನಾಭರಣ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿರುವ ಶೃಂಗಾರ್ ಜುವೆಲ್ಲರ್ಸ್ ಗೆ ಬೆಳ್ತಂಗಡಿ ತಾಲೂಕು ಮಾತ್ರವಲ್ಲದೇ ನೆರೆಯ ತಾಲೂಕುಗಳಿಂದ ಗ್ರಾಹಕರು ಚಿನ್ನಾಭರಣ ಕೊಳ್ಳಲು ಆಗಮಿಸುತ್ತಿರುವುದು ಇವರ ಚಿನ್ನದ ಗುಣಮಟ್ಟ ಹಾಗೂ ನಗುಮೊಗದ ಉತ್ತಮ ಸೇವೆಗೆ ಸಾಕ್ಷಿಯಾಗಿದೆ.

ಆಕರ್ಷಕ ವಿನ್ಯಾಸ: ಹೊಸ ವಿನ್ಯಾಸದ ಮದುವೆ ಆಭರಣಗಳ ಅಪೂರ್ವ ಸಂಗ್ರಹ, ಆಕರ್ಷಕ ವಿನ್ಯಾಸದ ವಿನೂತನ ಚಿನ್ನಾಭರಣಗಳು, ಬೆಳ್ಳಿಯ ಆಭರಣಗಳು, ದೇವತಾ ಪೂಜಾ ಸಾಮಗ್ರಿಗಳು, ಮನಮೋಹಕ ಒಡವೆಗಳು, ಮಕ್ಕಳಿಗೆ ಬೆಳ್ಳಿಯ ಆಭರಣಗಳು, ಉಡುಗೊರೆ ನೀಡಲು ಬೇಕಾದ ಚಿನ್ನ ಲೇಪಿತವಾದ ದೇವರ ಫೋಟೋಗಳು ಮಳಿಗೆಯಲ್ಲಿ ಲಭ್ಯವಿದ್ದು ಅಕ್ಷಯ ತೃತೀಯದ ಸಂದರ್ಭದಲ್ಲಿ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಆಯೋಜಿಸಿರುವ ಈ ವಿಶೇಷ ಆಫ‌ರ್ ಸಂದರ್ಭದಲ್ಲಿ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ತಮ್ಮ ಮನಗೊಪ್ಪುವ ಅತ್ಯಾಕರ್ಷಕ ವಿನ್ಯಾಸದ ಚಿನ್ನಾಭರಣಗಳನ್ನು ಖರೀದಿಸಬಹುದಾಗಿದೆ.

ವಿಶೇಷ ಕೊಡುಗೆಗಳು: ಅಕ್ಷಯ ತೃತೀಯದ ಪ್ರಯುಕ್ತ ಚಿನ್ನಾಭರಣ ಪ್ರಿಯರಿಗೆ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಪ್ರತೀ 1 ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ 1 ಗ್ರಾಂ ಬೆಳ್ಳಿನಾಣ್ಯ ಉಚಿತವಾಗಿ ಪಡೆಯುವ ಅವಕಾಶವಿದೆ. ಎಲ್ಲಾ ಬೆಳ್ಳಿಯ ಆಭರಣ, ಪೂಜಾ ಸಾಮಾಗ್ರಿಗಳ ಖರೀದಿ ಮೇಲೆ 1 ಕೆಜಿಗೆ 5000 ರೂ. ರಿಯಾಯಿತಿ ಪಡೆಯಬಹುದಾಗಿದೆ. ಗ್ರಾಹಕರು ಯಾವುದೇ ತಮ್ಮ ಹಳೆಯ 916 ಹಾಲ್ ಮಾರ್ಕ್‌ ಚಿನ್ನಾಭರಣಗಳ ವಿನಿಮಯಕ್ಕೆ ಶೇ.100 ಬೆಲೆಯನ್ನು ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ.

Related posts

ಜಿಲ್ಲಾಮಟ್ಟದ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತೆ ಉಮಾ ಡಿ ಗೌಡರಿಗೆ ಬೆಳ್ತಂಗಡಿ ತಾಲೂಕು ಮುಖ್ಯ ಶಿಕ್ಷಕರ ಸಂಘದಿಂದ ಸನ್ಮಾನ

Suddi Udaya

ಚಿತ್ಪಾವನ ಬ್ರಾಹ್ಮಣರ ಬಳಗ ಉಜಿರೆ-ಬೆಳ್ತಂಗಡಿ ಇದರ 13ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಕಳೆಂಜ ನಂದಗೋಕುಲ ಗೋಶಾಲೆಗೆ ರೂ.10 ಸಾವಿರ ದೇಣಿಗೆ

Suddi Udaya

ಗುರುವಾಯನಕೆರೆ ವಿದ್ವತ್ ಕಾಲೇಜಿನಲ್ಲಿ ಕಿಚನಾಮಿಕ್ಸ್ ಸಡಗರ

Suddi Udaya

ಬೆಳ್ತಂಗಡಿ: ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ

Suddi Udaya

ಮೇ 14-22: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya

ಸುಂದರ ಮಲೆಕುಡಿಯ ಕೈ ಬೆರಳು ತುಂಡರಿಸಿ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟ: ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ: ಅಕ್ಬರ್ ಬೆಳ್ತಂಗಡಿ

Suddi Udaya
error: Content is protected !!