ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿ ಹಿರಿಯ ಧರ್ಮಗುರುಗಳಾಗಿದ್ದ ಡಿ.ಕೆ. ಅಹ್ಮದ್ ಕುಂಞಿ ಮುಸ್ಲಿಯಾರ್ (81ವ) ರವರು ನಿಧನರಾದರು.
ಇವರು ತಾಲೂಕಿನ ಮಾಚಾರು, ಮುಂಡಾಜೆ, ಉಜಿರೆ ಮತ್ತಿತರ ಕಡೆಯ ಮಸೀದಿಗಳಲ್ಲಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸಿದ್ದರು. ಬೀಟಿಗೆ ಹಯಾತುಲ್ ಇಸ್ಲಾಂ ಮದ್ರಸದ ಗೌರವಾಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿ ಯಾಗಿದ್ದ ಅವರು ಹಿರಿ ಕಿರಿಯರಲ್ಲಿ ಸಮಾನವಾಗಿ ಸ್ನೇಹದಿಂದ ಬೆರೆಯುತ್ತಿದ್ದರು.
ಮೃತರು ಎಂಟು ಮಂದಿ ಪುತ್ರಿಯರು, ಮೂವರು ಪುತ್ರರು ಹಾಗು ಬಂಧುವರ್ಗದವರನ್ನು ಅಗಲಿದ್ದಾರೆ.













