23.9 C
ಪುತ್ತೂರು, ಬೆಳ್ತಂಗಡಿ
June 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀರಾಮ ಕ್ಷೇತ್ರ ಕನ್ಯಾಡಿಯ ಅಯೋಧ್ಯೆ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ನೇಮಕ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದನಗರ ಧರ್ಮಸ್ಥಳ, ಬೆಳ್ತಂಗಡಿ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರು, ಅಯೋಧ್ಯೆಯಲ್ಲಿ ಈಗಾಗಲೇ ಜಾಗವನ್ನು ಖರೀದಿ ಮಾಡಿ ಶಾಖಾ ಮಠದ ನಿರ್ಮಾಣದ ಕೈಕಂರ್ಯವನ್ನು ಪ್ರಾರಂಭಿಸಿದ್ದಾರೆ.

ಈ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರನ್ನು ನೇಮಕಗೊಳಿಸಲಾಗಿದೆ ಎಂದು ಕ‌ನ್ಯಾಡಿ ಶ್ರೀಗಳು ಘೋಷಣೆ ಮಾಡಿದರು.

ಮೂರು ಬಾರಿ ಸತತ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ, ಒಬ್ಬ ನಿಷ್ಕಳಂಕ, ನಿಷ್ಠಾವಂತ, ಆದರ್ಶ, ಸಜ್ಜನ ರಾಜಕಾರಣಿಯಾಗಿ ಜನಮನ್ನಣೆಯನ್ನು ಗಳಿಸಿರುತ್ತಾರೆ.ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ 5 ವರ್ಷಗಳ ಕಾಲ ಇಡೀ ರಾಜ್ಯದಲ್ಲಿ ನಿರಂತರ ಪ್ರವಾಸ ಮಾಡಿ ಸಂಘಟನೆಯ ಒಬ್ಬ ಉತ್ತಮ ನಾಯಕನೆಂಬ ಕೀರ್ತಿಗೆ ಪಾತ್ರರಾಗಿರುತ್ತಾರೆ. ತಾನೊಬ್ಬ ರಾಜಕಾರಣಿಗಿಂತ ಹೆಚ್ಚಾಗಿ ಸನಾತನ ಹಿಂದು ಧರ್ಮದ ರಕ್ಷಣೆಗಾಗಿ ಅದರ ಅಭ್ಯುದಯಕ್ಕಾಗಿ ಸುಮಾರು 150ಕ್ಕೂ ಮಿಕ್ಕಿ ಬ್ರಹ್ಮ ಕಲಶಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಇಡೀ ರಾಜ್ಯದ ಜನತೆಯ ಅಮೋಘ ಪ್ರೀತಿಗೆ ಭಾಜನರಾದ ಒಬ್ಬ ಶುದ್ಧ ಹಸ್ತದ ದೈವ ಭಕ್ತ. ಜನನಾಯಕರಾಗಿರುವ ನಳಿನ್ ಕುಮಾರ್ ರವರು ಶ್ರೀ ಮಠದ ಪರಮಾಪ್ತ ಶಿಷ್ಯರಾಗಿದ್ರೂ, ಈಗ ಅಯೋಧ್ಯೆಯಲ್ಲಾಗುವ ಶಾಖಾ ಮಠಕ್ಕೆ ರಾಷ್ಟ್ರ- ಅಂತರಾಷ್ಟ್ರ ಮಟ್ಟದಲ್ಲಿ ಶಿಷ್ಯರನ್ನು ಹೊಂದಿರುವ ಈ ಪರಮ ಪವಿತ್ರವಾದ ದೈವೀ ಸಾನಿಧ್ಯವನ್ನು ಹೊಂದಿರುವ ಸಂಸ್ಥೆಗೆ ನಳಿನ್ ಕುಮಾರ್ ಕಟೀಲ್ ರವರು ಸರ್ವಸಮರ್ಥರೆಂದು ಮನಗಂಡು ಈ ಶ್ರೇಷ್ಠಕಾರ್ಯಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿದರು.

ಈ ಸಂದರ್ಭದಲ್ಲಿ ಗುರುದೇವ ಮಠ ಟ್ರಸ್ಟ್, ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಟ್ರಸ್ಟ್, ಶ್ರೀ ರಾಮಕ್ಷೇತ್ರ ಅಭಿವೃದ್ಧಿ ಸಮಿತಿ ಪ್ರಮುಖರಾದ ಪೀತಾಂಬರ ಹೇರಾಜೆ ಬೆಳ್ತಂಗಡಿ,ನಾಗೇಶ್ ಗೌಡ ಕೊಕ್ಕಡ, ಜಯಂತ್ ಕೋಟ್ಯಾನ್ ಮರೋಡಿ,ಸಂಪತ್ ಬಿ ಸುವರ್ಣ ಬೆಳ್ತಂಗಡಿ, ರಾಜೇಶ್ ಪೈ ಉಜಿರೆ,ತಿಮ್ಮಪ್ಪ ಗೌಡ ಬೆಳಾಲು,ರವೀಂದ್ರ ಪೂಜಾರಿ ಆರ್ಲ ಕನ್ಯಾಡಿ,ಕೃಷ್ಣಪ್ಪ ಗುಡಿಗಾರ್,ವಿಕಾಸ್ ಪುತ್ತೂರು,ಶಿವಕಾಂತ್ ಗೌಡ,ರತ್ನಾಕರ ಬುಣ್ಣನ್ ಮರೋಡಿ,ರಾಜೇಶ್ ಪೂಜಾರಿ ವೇಣೂರು,ಸುನೀಲ್ ಕನ್ಯಾಡಿ,ಕೇಶವ ಬಂಗೇರ ಕಳಿಯ, ಹರೀಶ್ ಕನ್ಯಾಡಿ,ಯತೀಶ್ ಕನ್ಯಾಡಿ,ವಿನೋಭಾ ಕಾರಂತ್ ಉಜಿರೆ,ಪುರುಷೋತ್ತಮ ಪೂಜಾರಿ,ತುಕರಾಮ್ ಸಾಲಿಯಾನ್ ಉಪಸ್ಥಿತರಿದ್ದರು.

Related posts

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

Suddi Udaya

ಕಳೆಂಜ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

Suddi Udaya

ಕುಕ್ಕೇಡಿ: ಸುಡುಮದ್ದು ಸ್ಫೋಟ ಪ್ರಕರಣ: ಮತ್ತೋರ್ವ ಆರೋಪಿ ಬಂಧನ: ಬಂಧಿತ ಮೂವರಿಗೂ ಫೆ.17ರವರೆಗೆ ನ್ಯಾಯಾಂಗ ಬಂಧನ

Suddi Udaya

ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ, ಜಾತ್ರೋತ್ಸವದ ಪ್ರಯುಕ್ತ ಶ್ರಮದಾನ

Suddi Udaya

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ವತಿಯಿಂದ ಅಂತರ್ ಜಿಲ್ಲಾ ಪುರುಷರ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ

Suddi Udaya

ಕುತ್ಲೂರು ಸ.ಉ. ಪ್ರಾಥಮಿಕ ಶಾಲೆಗೆ ದಾನಿಗಳಿಂದ ಟೈ, ಬೆಲ್ಟ್, ಉಳಿತಾಯ ಖಾತಾ ಪುಸ್ತಕ ವಿತರಣೆ

Suddi Udaya
error: Content is protected !!