ಬೆಳ್ತಂಗಡಿ: ಸಹಕಾರಿ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಗೌಡ ಜು.31ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.
ಸಹಕಾರಿ ಸಂಘಗಳಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು ಇವರು ಸೇವಾಧಿಯಲ್ಲಿ ಗುಮಾಸ್ತರಾಗಿ ಮತ್ತು ಮಿತ್ತಬಾಗಿಲು, ಕಡಿರುದ್ಯಾವರ, ಕಿಲ್ಲೂರು, ನಾವೂರು, ಕನ್ಯಾಡಿ ಶಾಖೆಗಳಲ್ಲಿ ಶಾಖಾ ವ್ಯವಸ್ಥಾಪಕರಾಗಿ, , ಮುಖ್ಯ ಕಚೇರಿ ಬಂಗಾಡಿಯಲ್ಲಿ 5 ವರ್ಷಗಳ ಕಾಲ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಚಂದ್ರಕಾಂತ್ ಗೌಡರವರು ಪ್ರಸುತ್ತ ಕಡಿರುದ್ಯಾವರದಲ್ಲಿ ವಾಸಿಸುತ್ತಿರುವ ಡೊಂಬ ಗೌಡ’ – ಲೋಕಮ್ಮ ದಂಪತಿಯ ಪುತ್ರರಾಗಿದ್ದು ಪತ್ನಿ ಸುಮನ ಹಾಗೂ ಇಬ್ಬರು ಪುತ್ರರಾದ ತುಷಾರ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ವಿಹಾರ್ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.













