ಶಿಶಿಲ: ವಿಪರೀತ ಮಳೆಯಿಂದಾಗಿ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನ ಬಳಿಯ ಕಿಂಡಿ ಅಣೆಕಟ್ಟುವಿನಲ್ಲಿ ಸಿಕ್ಕಿಹಾಕಿಕೊಂಡ ದೊಡ್ಡ ದೊಡ್ಡ ಗಾತ್ರದ ಮರದ ದಿಮ್ಮಿಗಳನ್ನು ಸ್ಥಳೀಯರ ಸಹಕಾರದಿಂದ ಆ.1 ರಂದು ಹಿಟಾಚಿ ಮೂಲಕ ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಟ್ಟರು.
ಶಿಶಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಪಂಚಾಯತ್ ಸಿಬ್ಬಂದಿಗಳಾದ ಸುಂದರ, ಮನೋಜ್ , ಸ್ಥಳೀಯರಾದ ರಮೇಶ್ ಬದಿಗುಡ್ಡೆ, ಕರುಣಾಕರ ಅಂಬೆಲ್ತಡ್ಕ, ಮನೋಜ್ ಅಡ್ಡಹಳ್ಳ, ಇವರ ಮುತುವರ್ಜಿಯಲ್ಲಿ ತೆರವು ಕಾರ್ಯ ನಡೆಯಿತು.













