ಶಿರ್ಲಾಲು: ಎಪ್ರಿಲ್ 28ರಿಂದ ಮೇ 01ರವರೆಗೆ ನಡೆಯಲಿರುವ ಶ್ರೀ ದೈವ ಕೊಡಮಣಿತ್ತಾಯ,ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತುಶ್ರೀ ಬ್ರಹ್ಮ ಬೈದರ್ಕಳ ಗರಡಿ ಪೊಸರಡ್ಕ ಇದರ ಬ್ರಹ್ಮಕುಂಭಾಭಿಷೇಕ ಆಮಂತ್ರಣ ಪತ್ರಿಕೆ ವಿತರಣೆಯು ಶಿರ್ಲಾಲು ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರದಲ್ಲಿ ನಡೆಯಿತು.
ಬ್ರಹ್ಮಕುಂಭಾಭಿಷೇಕ ಸಮಿತಿಯ ಕಾರ್ಯಧ್ಯಕ್ಷರಾದ ನಾರಾಯಣ ಪೂಜಾರಿ ಉಚ್ಚೂರು ಹಾಗೂ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಪಿ ಕೆ ಇವರು ಬ್ರಹ್ಮಕುಂಭಾಭಿಷೇಕದ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಶಿರ್ಲಾಲು ಗರಡಿಯ ಗೌರವಾಧ್ಯಕ್ಷರಾದ ರಮಾನಂದ ಗುಡ್ಡಾಜೆ,ಶಿರ್ಲಾಲು ಗರಡಿ ಆಡಳಿತ ಸಮಿತಿ ಸದಸ್ಯರಾದ ರಮೇಶ್ ಪೂಜಾರಿ ಮಜಲಪಲಿಕೆ,ನಂದಕುಮಾರ್,ದಿನೇಶ್ ಕರ್ದೊಟ್ಟು, ಜೊತೆ ಕಾರ್ಯದರ್ಶಿ ರಮೇಶ್ C A ಬ್ಯಾಂಕ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸೋಮನಾಥ ಬಂಗೇರ,ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು ಅಧ್ಯಕ್ಷರಾದ ಸದಾಶಿವ ಊರ, ಜಾತ್ರಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕರಂಬಾರು, ಶಿವಾನಂದ ಮಜಲಪಲಿಕೆ, ಕಾರ್ಯದರ್ಶಿ ಪ್ರದೀಪ್ ಪಿಜಕೊಡಂಗೆ, ಕೋಶಾಧಿಕಾರಿ ರಕ್ಷಿತ್ ಪಿಜಕೊಡಂಗೆ,ಹರೀಶ್ ನೇತ್ರಬೈಲು, ಅಳದಂಗಡಿ ಮೂರ್ತೆದಾರ ಬ್ಯಾಂಕ್ ಪಿಗ್ಮಿ ಸಂಗ್ರಾಹಕರಾದ ಅವಿನಾಶ್ ಕೋಟ್ಯಾನ್,ಯುವವಾಹಿನಿ ಸಂಚಲನಾ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಟ್ರಬೈಲು, ಅಧ್ಯಕ್ಷರಾದ ಯತೀಶ್ ಕರಂಬಾರು ಹಾಗೂ ಊರವರು ಉಪಸ್ಥಿತರಿದ್ದರು. ಆಡಳಿತ ಸಮಿತಿಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಮ್ ಕೆ ಪ್ರಸಾದ್ ಸ್ವಾಗತಿಸಿ,ದಿನೇಶ್ ಕರ್ದೊಟ್ಟು ಧನ್ಯವಾದವಿತ್ತರು.













