ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಡಿ. ಹರ್ಷೇಂದ್ರ ಕುಮಾರ್ ರವರು ಶಿಶಿಲ ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಮತ್ತು ಮುಂದಕ್ಕೂ ಕೂಡ ಶಿಶಿಲ ಕ್ಷೇತ್ರಕ್ಕೆ ಅಭಿವೃದ್ಧಿಯ ಬಗ್ಗೆ ಸಹಕಾರ ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುನೀಲ್ ಗೋಖಲೆ, ಸದಸ್ಯರಾದ ಕೆ. ಶ್ರೀಧರ್ ರಾವ್ ಕಳೆಂಜ, ನಾರಾಯಣ ಸುವರ್ಣ ಬೆಳಾಲು, ರಮೇಶ್ ಗೌಡ ಶಿಶಿಲ ಮತ್ತು ಅಭಿವೃದ್ಧಿ ಸಮಿತಿ ಸದಸ್ಯರಾದ ವಿಶ್ವನಾಥ ಪೂಜಾರಿ, ಮಾಧವ ಗೌಡ ಶಿಶಿಲ ಉಪಸ್ಥಿತರಿದ್ದರು.
ಶಿಶಿಲ ಜಾತ್ರೆಯು ದ.ಕ. ಜಿಲ್ಲೆಯ ಕಡೆಯ ಜಾತ್ರೆಯಾಗಿದ್ದು, ಈ ಸಂದಭ್ದಲ್ಲಿ ಪ್ರತಿನಿತ್ಯವೂ ಮಳೆಯಾಗುತ್ತದೆ. ಈ ಜಾತ್ರೆಯನ್ನು ತುಳುವಿನಲ್ಲಿ ಕುರೊಂತಾಯನೋ ಎಂದು ಕರೆಯುತ್ತಾರೆ.













