
ಅಳದಂಗಡಿ: ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿದೈವಸ್ಥಾನದಲ್ಲಿ ಮೇ.15 ಶುಕ್ರವಾರ ನಡೆಯಲಿರುವ ಸಂಕ್ರಾಮಣ ಪೂಜೆಯ ದಿನದಂದು 2026ನೇ ಸಾಲಿಗೆ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆಯ ಅರ್ಜಿ ಫಾರಂಗಳನ್ನು ವಿತರಿಸಲಾಗುವುದು ಎಂದು ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ ಅವರು ತಿಳಿಸಿದ್ದಾರೆ.
ದೈವಸ್ಥಾನದ ಆದಾಯದಿಂದ ಬಡ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ಅಳದಂಗಡಿ ಅರಮನೆ ವ್ಯಾಪ್ತಿಯ ಹಾಗೂ ತಾಲೂಕು ಹೊರ ತಾಲೂಕಿನ ಮಕ್ಕಳಿಗೆ ಉಚಿತವಾಗಿ ಬರೆಯುವ ಪುಸ್ತಕವನ್ನು ನೀಡಲಾಗುತ್ತಿದೆ. ಅದರಂತೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಕಾರ್ಯಕ್ರಮವಿದ್ದು, ಇದರ ಅರ್ಜಿ ಫಾರಂಗಳನ್ನು ಮೇ 15ರಂದು ಶುಕ್ರವಾರ ದೈವಸ್ಥಾನದಲ್ಲಿ ನಡೆಯುವ ಸಂಕ್ರಮಣ ಪೂಜೆಯಂದು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.








