August 1, 2026
Uncategorized

ಮೇ 15: ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿದೈವಸ್ಥಾನದಲ್ಲಿ ಸಂಕ್ರಮಣ ಪೂಜೆ : ಉಚಿತ ಬರೆಯುವ ಪುಸ್ತಕ ವಿತರಣೆಯ ಅರ್ಜಿ ಫಾರ್ಮ್‌ಗಳ ವಿತರಣೆ

ಅಳದಂಗಡಿ: ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿದೈವಸ್ಥಾನದಲ್ಲಿ ಮೇ.15 ಶುಕ್ರವಾರ ನಡೆಯಲಿರುವ ಸಂಕ್ರಾಮಣ ಪೂಜೆಯ ದಿನದಂದು 2026ನೇ ಸಾಲಿಗೆ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆಯ ಅರ್ಜಿ ಫಾರಂಗಳನ್ನು ವಿತರಿಸಲಾಗುವುದು ಎಂದು ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ ಅವರು ತಿಳಿಸಿದ್ದಾರೆ.
ದೈವಸ್ಥಾನದ ಆದಾಯದಿಂದ ಬಡ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ಅಳದಂಗಡಿ ಅರಮನೆ ವ್ಯಾಪ್ತಿಯ ಹಾಗೂ ತಾಲೂಕು ಹೊರ ತಾಲೂಕಿನ ಮಕ್ಕಳಿಗೆ ಉಚಿತವಾಗಿ ಬರೆಯುವ ಪುಸ್ತಕವನ್ನು ನೀಡಲಾಗುತ್ತಿದೆ. ಅದರಂತೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಕಾರ್ಯಕ್ರಮವಿದ್ದು, ಇದರ ಅರ್ಜಿ ಫಾರಂಗಳನ್ನು ಮೇ 15ರಂದು ಶುಕ್ರವಾರ ದೈವಸ್ಥಾನದಲ್ಲಿ ನಡೆಯುವ ಸಂಕ್ರಮಣ ಪೂಜೆಯಂದು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

Related posts

ಧರ್ಮಸ್ಥಳ ವಲಯದ ಕಾಯರ್ತಡ್ಕ – ಕಳೆಂಜ ಎ ಒಕ್ಕೂಟದ ಸಭೆ: ಮಾಶಾಸನದ ಮಂಜೂರಾತಿ ಪತ್ರ ಹಸ್ತಾಂತರ

Suddi Udaya

ಚಾತುರ್ಮಾಸ್ಯ ವ್ರತಾಚರಣೆ, ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು

Suddi Udaya

ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ರಸ್ತೆಯ ಇಕ್ಕಲೆಗಳಲ್ಲಿ ಸ್ವಚ್ಛತಾ ಕಾರ್ಯ

Suddi Udaya

ಗುರುವಾಯನಕೆರೆ ನವಶಕ್ತಿಕ್ರೀಡಾಂಗಣದಲ್ಲಿ ಆದ್ದೂರಿಯಾಗಿ ನಡೆದ ಐತಿಹಾಸಿಕ ನಾಟಕ “ಛತ್ರಪತಿ ಶಿವಾಜಿ”

Suddi Udaya

ರೀಲ್ಸ್‌ ತಾರೆ ಇದೀಗ ಸೀರಿಯಲ್ ಬೆಡಗಿ: ನಾರಾವಿಯ ಕೃಷ್ಣಪ್ರಿಯಾ ಭಟ್ ನಂದಗೋಕುಲದಲ್ಲಿ ರಕ್ಷಾ

Suddi Udaya

ಆಷಾಡ ಪ್ರಯುಕ್ತ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ಸಂಸ್ಥೆಯಿಂದ ವಿಶೇಷ ಕೊಡುಗೆ: ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

Suddi Udaya
error: Content is protected !!