ಬೆಳ್ತಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಳಿಯೂರು ಗ್ರಾಮದ ಕರ್ವೇಲು ಎಂಬಲ್ಲಿ 110ಕೆವಿ ನೆಟ್ಟಮುಡೂರುನಿಂದ ಕರಾಯ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಕಲ್ಪಿಸುವ ಗೋಪುರ(ಟವರ್)ವನ್ನು ಸುರಕ್ಷತೆಯ ದೃಷ್ಟಿಯಿಂದ ಸ್ಥಳಾಂತರಿಸುವ ಕಾಮಗಾರಿಯನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ತುರ್ತಾಗಿ
ಹಮ್ಮಿಕೊಂಡಿರುವುದರಿಂದ, ಕರಾಯ 110ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗುವುದರಿಂದ, ಕರಾಯ 110ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಕಾರಂದೂರು, ತೆಕ್ಕಾರು, ಮೂರುಗೋಳಿ, ಕುದ್ರಡ್ಕ, ಪಿಲಿಗೂಡು, ಮುಗೇರಡ್ಕ, ಬಂದಾರು, ಪದ್ಮುಂಜ, ಕಲ್ಲೇರಿ ಟೌನ್, ಅಂಡೆತಡ್ಕ, ಕಕ್ಕೆಪದವು, ಉಪ್ಪಿನಂಗಡಿ ಟೌನ್, ಪಾಂಡವರಕಲ್ಲು, ಕೆಮ್ಮಾರು ಫೀಡರಿನಲ್ಲಿ ಆ.1ರಂದು ಬೆಳಿಗ್ಗೆ ಗಂಟೆ:9:30ರಿಂದ ಸಂಜೆ ಗಂಟೆ:5:30ರ ತನಕ ವಿದ್ಯುತ್ ನಿಲುಗಡೆ ಆಗಲಿದೆ.












