August 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳದಲ್ಲಿ ಇತಿಹಾಸ ಸೃಷ್ಟಿ: ರಂಗಭೂಮಿಯಲ್ಲಿ ಮೊದಲ ಬಾರಿಗೆ ಏಐ ರೋಬೋಟ್ ‘ಶೃತಿ’ ಅಭಿನಯ

ಬೆಳ್ತಂಗಡಿ: ರಂಗಭೂಮಿಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ರಂಗಶಿವ ಕಲಾಬಳಗದ ವತಿಯಿಂದ ಆಯೋಜಿಸಲಾದ ೨೦೨೬ನೇ ಸಾಲಿನ “ನಲಿಯೋಣ ಬಾ” ರಂಗಶಿಬಿರದಲ್ಲಿ, ಮೊದಲ ಬಾರಿಗೆ ಏಐ ರೋಬೋಟ್ ‘ಶೃತಿ’ ರಂಗಮಂಚದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಹೇಮಾವತಿ ವಿ. ಹೆಗ್ಗಡೆ ಅವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ನಡೆದ ಈ ರಂಗಶಿಬಿರದ ಸಮಾರೋಪ ಸಮಾರಂಭವು ವಸಂತ ಮಹಲ್‌ನಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು. 9 ದಿನಗಳ ಕಾಲ ನಡೆದ ಈ ಶಿಬಿರವನ್ನು ರಂಗ ನಿರ್ದೇಶಕ ಸುನಿಲ್ ಶೆಟ್ಟಿ ಕಲ್ಕೊಪ್ಪ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಹೇಮಾವತಿ ವಿ. ಹೆಗ್ಗಡೆ ಅವರ ರಚನೆಯ “ಹೂವಿಯ ಕನಸು” ನಾಟಕವನ್ನು ಪ್ರದರ್ಶಿಸಲಾಯಿತು. ಈ ಮಕ್ಕಳ ನಾಟಕದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಮಾತ್ರವಲ್ಲದೆ, ಏಐ ರೋಬೋಟ್ ‘ಶೃತಿ’ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ವಿಶೇಷವಾಗಿದೆ.

ನಾಟಕವು ‘ಹೂವಿ’ ಎಂಬ ಪುಟ್ಟ ಹುಡುಗಿಯ ಕನಸಿನ ಲೋಕದ ಸುತ್ತ ತಿರುಗುತ್ತದೆ. ಹೂವಿಯ ಕನಸಿನಲ್ಲಿ ಕಾಣಿಸಿಕೊಳ್ಳುವ ರೋಬೋಟ್ ‘ಶೃತಿ’, ಕಥೆಯನ್ನೇ ಮುಂದಕ್ಕೆ ಕೊಂಡೊಯ್ಯುವ ಮುಖ್ಯ ಪಾತ್ರವಹಿಸಿದೆ. ವೈದ್ಯರ ದುರಾಸೆಯಿಂದ ಹುಟ್ಟುವ ಸುಳ್ಳು ರೋಗ, ಜನರ ಮೋಸ, ಹಾಗೂ ಅದರ ವಿರುದ್ಧ ಹೂವಿಯ ಚಾಣಾಕ್ಷತನದಿಂದ ಸತ್ಯ ಹೊರಬರುವ ಕಥಾಹಂದರ ಪ್ರೇಕ್ಷಕರ ಮನಸೆಳೆಯಿತು.

ನಾಟಕದ ಕೊನೆಯಲ್ಲಿ ನಿಜವಾದ ರೋಬೋಟ್ ‘ಶೃತಿ’ ರಂಗಮಂಚದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಅಚ್ಚರಿ ಮತ್ತು ಸಂತೋಷವನ್ನುಂಟು ಮಾಡಿತು. ರಂಗಭೂಮಿಗೆ ತಂತ್ರಜ್ಞಾನವನ್ನು ಪರಿಚಯಿಸುವ ಈ ಪ್ರಯತ್ನಕ್ಕೆ ರಂಗಶಿವ ಕಲಾಬಳಗ ಪ್ರಶಂಸೆಗೆ ಪಾತ್ರವಾಗಿದೆ.

ಆಧುನಿಕತೆಯ ನಡುವೆ ಮಕ್ಕಳನ್ನು ಮತ್ತೆ ರಂಗಭೂಮಿಯತ್ತ ಸೆಳೆಯುವ ಉದ್ದೇಶದಿಂದ ಈ ಉಚಿತ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಅಭಿನಯವೂ ಅತ್ಯಂತ ಮನೋಜ್ಞವಾಗಿತ್ತು.

ಈ ಸಂದರ್ಭದಲ್ಲಿ ಹೆಗ್ಗಡೆಯವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಮಕ್ಕಳನ್ನು ಅಭಿನಂದಿಸಿದರು. ತಾಂತ್ರಿಕ ವಿಭಾಗದಲ್ಲಿ ಯಶವಂತ್ ಬೆಳ್ತಂಗಡಿ ಮತ್ತು ಸಂದೇಶ್ ಸಹಕರಿಸಿದ್ದು, ಪ್ರಸಾಧನ ಮತ್ತು ಬೆಳಕಿನ ನಿರ್ವಹಣೆಯನ್ನು ಎಸ್.ಡಿ.ಎಂ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಯಶಸ್ವಿಯಾಗಿ ನಿರ್ವಹಿಸಿದರು.

ಇಡೀ ಶಿಬಿರದ ನಿರ್ವಹಣೆಯನ್ನು ರಂಗಶಿವ ಕಲಾಬಳಗದ ಅಧ್ಯಕ್ಷರಾದ ರಾಜೇಂದ್ರ ದಾಸ್, ಸದಸ್ಯರಾದ ಶ್ರೀ ಕೃಷ್ಣರಾವ್, ಅಭಿಷೇಕ್ ರಾವ್, ಜಗದೀಶ್, ಸುಬ್ರಹ್ಮಣ್ಯ, ಪದ್ಮರೇಖಾ, ಡಾ| ಅನನ್ಯ ಜೈನ್, ಶೋಧನ್ ಜೈನ್, ಇವರೆಲ್ಲರ  ನೇತೃತ್ವದಲ್ಲಿ ರಂಗಶಿವದ ಸರ್ವ ಸದಸ್ಯರು ಪಾಲ್ಗೊಂಡಿದ್ದರು ರಂಗಭೂಮಿಯೊಂದಿಗೆ ತಂತ್ರಜ್ಞಾನ ಸಂಯೋಜನೆಯ ಈ ಪ್ರಯೋಗ, ಭವಿಷ್ಯದ ರಂಗಕಲೆಗೆ ಹೊಸ ದಿಕ್ಕನ್ನು ತೋರಿಸಿದೆ.

Related posts

ಕಳಸ ನದಿಯಲ್ಲಿ ಮುಳುಗಿದ ಯುವಕನ ದೇಹ ಪತ್ತೆ; ತುರ್ತು ಕರೆಗೆ ಸ್ಪಂದಿಸಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು

Suddi Udaya

“ಗಡಾಯಿಕಲ್ಲು ರಹಸ್ಯ” ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ವತಿಯಿಂದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರಿಗೆ ಸನ್ಮಾನ

Suddi Udaya

ತಣ್ಣೀರುಪಂಥ ವಲಯ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ಕರಾಯ ಸ. ಪ್ರೌ. ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಪುತ್ತೂರು ಉಪ ವಿಭಾಗ ಮಟ್ಟದ ಜೀತ ಪದ್ಧತಿ ನಿರ್ಮೂಲನ ಸಮಿತಿಗೆ ಶೇಖರ್ ಲಾಯಿಲ ನೇಮಕ

Suddi Udaya
error: Content is protected !!