25.1 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬಳಂಜ ಶ್ರೀ ಪಂಚಲಿಂಗೇಶ್ವರ- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಸತ್ಸಂಗ”

ಬೆಳ್ತಂಗಡಿ: ಬಳಂಜ ಶ್ರೀ ಪಂಚಲಿಂಗೇಶ್ವರ -ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ದುಬೈಯಲ್ಲಿ ಸಾವಿರಾರು ಭಾರತೀಯರಿಗೆ ಉದ್ಯೋಗದಾತರಾಗಿದ್ದುಕೊಂಡು, ದುಬಾಯಿಯಂತಹ ಹೊರದೇಶದಲ್ಲಿ ತಮಿಳ್ ರೇಡಿಯೋವನ್ನು ಕಳೆದ ಒಂದು ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದು ತಮಿಳುನಾಡಿನ ಶಿವಕಾಶಿ, ಮದುರೈ ಮೀನಾಕ್ಷಿ ದೇವಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ಸಂಸ್ಥೆಗಳಿಗೆ ಪೋಷಕರಾಗಿರುವ ಡಾ.ಸೋನಾ ರಾಮ್ ಮತ್ತು ಶಕ್ತಿ ರಾಮ್ ರವರು ತಮ್ಮ ಭಕ್ತಾದಿಗಳ ತಂಡದೊಂದಿಗೆ ಬಳಂಜ ದೇವಸ್ಥಾನಕ್ಕೆ ಸೋಮವಾರ ಸುಮಾರು 50 ಜನರ ತಂಡದೊಂದಿಗೆ ಆಗಮಿಸಿ ಸತ್ಸಂಗ ನೆರವೇರಿಸಿದರು.

ಕ್ಷೇತ್ರದ ವತಿಯಿಂದ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್ದಡ್ಕ, ಪ್ರಮುಖರಾದ ಗುರುಪ್ರಸಾದ್ ಹೆಗ್ಡೆ, ಪ್ರಭಾಕರ ಹೆಗ್ಡೆ ಕೋಡಿ, ಚಂದ್ರಶೇಖರ ಪಿ.ಕೆ, ದಿನೇಶ್ ಪಿ.ಕೆ, ಜಗದೀಶ್ ರೈ, ವಿನು ಬಳಂಜ, ಸಂತೋಷ್ ಸಾಲಿಯಾನ್ ಕಾಪಿನಡ್ಕ, ಚಿತ್ತರಂಜನ್ ಹೆಗ್ಡೆ, ರತ್ನರಾಜ್ ಜೈನ್ ಪೇರಂದಬೈಲ್, ಗಣೇಶ್ ಬಿ ಬೊಂಟ್ರೊಟ್ಟು, ಸದಾನಂದ ಪೂಜಾರಿ ಬೊಂಟ್ರೊಟ್ಟು, ಮನೋಹರ್ ಬಳಂಜ, ಸುನಂದ ಕುಳೆಂಜಿರೋಡಿ ಗುತ್ತು, ಸತೀಶ್ ಶೆಟ್ಟಿ ಕುರೆಲ್ಯ, ಅರ್ಚಕರಾದ ಸುರೇಶ್ ಭಟ್, ಮಂಜುನಾಥ್ ಭಟ್, ವಿಕ್ರಮ್ ಭಟ್, ಮತ್ತು ಊರವರು ಸ್ವಾಗತಿಸಿದರು.

ಕ್ಷೇತ್ರದ ವತಿಯಿಂದ ಭಜನಾ ತಂಡವನ್ನು ಗೌರವಿಸಲಾಯಿತು. ಉದ್ಯಮಿ ಅಶ್ವಥ್ ಹೆಗ್ಡೆ ಇದರ ನೇತೃತ್ವ ವಹಿಸಿದ್ದರು.

Related posts

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಮಲವಂತಿಗೆ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಅಂಡಿಂಜೆ: ಗಾಂದೋಟ್ಯ ನಿವಾಸಿ ಲಲಿತ ನಿಧನ

Suddi Udaya

ಪ್ರತಿಷ್ಠಿತ ಗಾಂಧಿಗ್ರಾಮ ಪ್ರಶಸ್ತಿಗೆ ಕಾಶಿಪಟ್ಣ ಗ್ರಾಮ ಪಂಚಾಯತ್ ಆಯ್ಕೆ

Suddi Udaya

ಅಳದಂಗಡಿ ಹಿಂದೂ ಯುವ ಶಕ್ತಿ ಆಲಡ್ಕ ಕ್ಷೇತ್ರ, ರಾಜಕೀಯ ರಹಿತ ಸಾಮಾಜಿಕ ಸೇವಾ ಸಂಘಟನೆಯ ನೂತನ ಪ್ರದಾನ ಕಚೇರಿ ಉದ್ಘಾಟನೆ

Suddi Udaya

ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಕಳೆಂಜ ಬಿ ಕಾರ್ಯಕ್ಷೇತ್ರದ ಸ್ಪಂದನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಕೆ.ಪಿ.ಎಸ್ ಪುಂಜಾಲಕಟ್ಟೆ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!