28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬಳಂಜ ಶ್ರೀ ಪಂಚಲಿಂಗೇಶ್ವರ- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಸತ್ಸಂಗ”

ಬೆಳ್ತಂಗಡಿ: ಬಳಂಜ ಶ್ರೀ ಪಂಚಲಿಂಗೇಶ್ವರ -ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ದುಬೈಯಲ್ಲಿ ಸಾವಿರಾರು ಭಾರತೀಯರಿಗೆ ಉದ್ಯೋಗದಾತರಾಗಿದ್ದುಕೊಂಡು, ದುಬಾಯಿಯಂತಹ ಹೊರದೇಶದಲ್ಲಿ ತಮಿಳ್ ರೇಡಿಯೋವನ್ನು ಕಳೆದ ಒಂದು ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದು ತಮಿಳುನಾಡಿನ ಶಿವಕಾಶಿ, ಮದುರೈ ಮೀನಾಕ್ಷಿ ದೇವಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ಸಂಸ್ಥೆಗಳಿಗೆ ಪೋಷಕರಾಗಿರುವ ಡಾ.ಸೋನಾ ರಾಮ್ ಮತ್ತು ಶಕ್ತಿ ರಾಮ್ ರವರು ತಮ್ಮ ಭಕ್ತಾದಿಗಳ ತಂಡದೊಂದಿಗೆ ಬಳಂಜ ದೇವಸ್ಥಾನಕ್ಕೆ ಸೋಮವಾರ ಸುಮಾರು 50 ಜನರ ತಂಡದೊಂದಿಗೆ ಆಗಮಿಸಿ ಸತ್ಸಂಗ ನೆರವೇರಿಸಿದರು.

ಕ್ಷೇತ್ರದ ವತಿಯಿಂದ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್ದಡ್ಕ, ಪ್ರಮುಖರಾದ ಗುರುಪ್ರಸಾದ್ ಹೆಗ್ಡೆ, ಪ್ರಭಾಕರ ಹೆಗ್ಡೆ ಕೋಡಿ, ಚಂದ್ರಶೇಖರ ಪಿ.ಕೆ, ದಿನೇಶ್ ಪಿ.ಕೆ, ಜಗದೀಶ್ ರೈ, ವಿನು ಬಳಂಜ, ಸಂತೋಷ್ ಸಾಲಿಯಾನ್ ಕಾಪಿನಡ್ಕ, ಚಿತ್ತರಂಜನ್ ಹೆಗ್ಡೆ, ರತ್ನರಾಜ್ ಜೈನ್ ಪೇರಂದಬೈಲ್, ಗಣೇಶ್ ಬಿ ಬೊಂಟ್ರೊಟ್ಟು, ಸದಾನಂದ ಪೂಜಾರಿ ಬೊಂಟ್ರೊಟ್ಟು, ಮನೋಹರ್ ಬಳಂಜ, ಸುನಂದ ಕುಳೆಂಜಿರೋಡಿ ಗುತ್ತು, ಸತೀಶ್ ಶೆಟ್ಟಿ ಕುರೆಲ್ಯ, ಅರ್ಚಕರಾದ ಸುರೇಶ್ ಭಟ್, ಮಂಜುನಾಥ್ ಭಟ್, ವಿಕ್ರಮ್ ಭಟ್, ಮತ್ತು ಊರವರು ಸ್ವಾಗತಿಸಿದರು.

ಕ್ಷೇತ್ರದ ವತಿಯಿಂದ ಭಜನಾ ತಂಡವನ್ನು ಗೌರವಿಸಲಾಯಿತು. ಉದ್ಯಮಿ ಅಶ್ವಥ್ ಹೆಗ್ಡೆ ಇದರ ನೇತೃತ್ವ ವಹಿಸಿದ್ದರು.

Related posts

ವೇಣೂರು: ಜಯಶೀಲಾ ಪೈ ನಿಧನ

Suddi Udaya

ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ: ಆಮಂತ್ರಣಪತ್ರ ಬಿಡುಗಡೆ

Suddi Udaya

ವಲಯ ಮಟ್ಟದ ಕೌಶಲ್ಯ ಸ್ಪರ್ಧೆ: ಆದರ್ಶ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಸೌತಡ್ಕದಲ್ಲಿ ಅನ್ಯ ಕೋಮಿನ ಜೋಡಿ ಪತ್ತೆ: ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿ ಮಾಂಡೋವಿ ಮೋಟಾರ್ಸ್ ಕಾರುಗಳ ಪ್ರದರ್ಶನ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವಾರ್ಷಿಕ ಮಹಾಸಭೆ: ಬೆಳ್ತಂಗಡಿ ವಲಯದ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ

Suddi Udaya
error: Content is protected !!