ಧರ್ಮಸ್ಥಳ: ಇಲ್ಲಿಯ ನೇತ್ರಾವತಿ ದೊಂಡೋಲೆ ಕ್ರಾಸ್ ನಲ್ಲಿ ಭಟ್ರ ಹೋಟೆಲನ್ನು ಕೆಲಕಾಲ ನಡೆಸಿದ್ದ ಉದ್ಯಮಿ ಕೃಷ್ಣಮೂರ್ತಿ ರಾವ್ ಸಿ ಜಿ(73ವ)ರವರು ಅಲ್ಪಕಾಲದ ಅಸೌಖ್ಯದಿಂದ ಮೇ 6 ರಂದು ಕನ್ಯಾಡಿಯಲ್ಲಿ ನಿಧನರಾಗಿದ್ದಾರೆ.
ಮೂಲತ: ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದವರಾದ ಕೃಷ್ಣಮೂರ್ತಿಯವರು ಪತ್ನಿ, ಪುತ್ರಿಯರಾದ ಅಖಿಲಾ , ಅನುಷಾ ಹಾಗೂ ಸಹೋದರರನ್ನು ಅಗಲಿದ್ದಾರೆ. ಇವರ ಕಿರಿಯ ಸಹೋದರ ಕನ್ಯಾಡಿಯ ಪ್ರಭಾಕರ್ ರಾವ್ ಸಿ ಜಿಯವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಉಜಿರೆಯ ಹಿಂದೂ ರುದ್ರಭೂಮಿಯಲ್ಲಿ ಮಧ್ಯಾಹ್ನ 3ಗಂಟೆಗೆ ಅಂತಿಮ ವಿಧಿವಿಧಾನ ನೆರವೇರಲಿದೆ.













