May 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿಡಿಗಲ್ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮಹಾಸಭೆ: ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಷಾ ಆಯ್ಕೆ

ಬೆಳ್ತಂಗಡಿ: ನಿಡಿಗಲ್ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿಯ ಮಹಾಸಭೆಯು ಮೇ 8 ರಂದು ಗೌರವಾಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಮಸೀದಿಯ ಖತೀಬ್ ಮುಸ್ತಫಾ ಸಅದಿ, ಜಮಾಅತ್ ಅಧ್ಯಕ್ಷ ಮುಜೀಬ್ ಸಾಹೇಬ್ ಹಾಗೂ ಮುಅಲ್ಲಿಮ್ ನಾಸಿರ್ ಸಅದಿ ಪೆರ್ಡಾಡಿ ಸೇರಿದಂತೆ ಜಮಾತಿನ ಸರ್ವ ಸದಸ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ಸರ್ವಾನುಮತದಿಂದ ಮುಂದಿನ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಸ್ಮಾಯಿಲ್ ಷಾ, ಉಪಾಧ್ಯಕ್ಷರಾಗಿ ಬಿ.ಎನ್. ಹಮೀದ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎಂ. ರಫೀಕ್, ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಲಿ, ಕೋಶಾಧಿಕಾರಿಯಾಗಿ ಪಿ.ಎಚ್. ಹನೀಫ್ ಇವರು ಸರ್ವಾನುಮತದಿಂದ ಆಯ್ಕೆಯಾದರು.

ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಜೀಬ್ ಸಾಹೇಬ್, ಟಿ.ಎಚ್. ಹನೀಫ್ ಮುಸ್ಲಿಯಾರ್, ಪಿ.ಎಚ್. ಹಮೀದ್, ಅಬ್ದುಲ್ ರೆಹಮಾನ್, ಎನ್.ಎಚ್. ಹಂಝ ಮತ್ತು ಕೆ.ಪಿ. ಉಮರಬ್ಬ ಇವರುಗಳನ್ನು ಆರಿಸಲಾಯಿತು.

ಖತೀಬ್ ಮುಸ್ತಫಾ ಸಅದಿ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎನ್.ಎಂ. ರಫೀಕ್ ಕಳೆದ ಸಾಲಿನ ವರದಿ ವಾಚಿಸಿದರು. ಜಮಾಅತ್‌ಗೆ ಸಂಬಂಧಪಟ್ಟ ಇತರ ಪ್ರಮುಖ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಬಿ.ಎನ್. ಹಮೀದ್ ಸ್ವಾಗತಿಸಿದರು.

ಕಾಜೂರು ತಂಙಳ್ ರಿಗೆ ಬೀಳ್ಕೊಡುಗೆ;
ಮಸ್ಜಿದ್ ಗೌರವಾಧ್ಯಕ್ಷರಾಗಿದ್ದು ಈ ಬಾರಿ ಸಕುಟುಂಬಿಕರಾಗಿ ಪವಿತ್ರ ಹಜ್ ಯಾತ್ರೆಗೆ ತೆರಳಲಿರುವ ಗೌರವಾಧ್ಯಕ್ಷ ಸಯ್ಯಿದ್‌ ಕಾಜೂರು ತಂಙಳ್ ಅವರನ್ನು ಈ ವೇಳೆ ಸನ್ಮಾನಿಸಿ ಬೀಳ್ಕೊಡಲಾಯಿತು. ನಿರ್ಗಮನಾಧ್ಯಕ್ಷ ಮುಜೀಬ್ ಸಾಹೇಬ್ ಅವರ ಸೇವೆಯನ್ನೂ ಗೌರವಿಸಿ ಅಭಿನಂದಿಸಲಾಯಿತು.

Related posts

ನಿಟ್ಟಡೆ ಕುಂಭಶ್ರೀ ಆಂ.ಮಾ. ವಸತಿ ಶಾಲೆ ಮತ್ತು ಕಾಲೇಜಿನ ಸಂಸ್ಥಾಪಕ ಗಿರೀಶ್ ಕೆ ಹೆಚ್ ರವರು ಶಿಕ್ಷಣ ಸಿಂಧೂರ ಪ್ರಶಸ್ತಿಗೆ ಆಯ್ಕೆ

Suddi Udaya

ಬೆಳ್ತಂಗಡಿ: ಎಸ್‌ಡಿಪಿಐ ಕಾರ್ಯಕರ್ತರಿಂದ ಅಕ್ಬರ್ ಬೆಳ್ತಂಗಡಿ ಪರ ಮತಯಾಚನೆ

Suddi Udaya

ಧರ್ಮಸ್ಥಳದ ಬಿ. ಪ್ರಕಾಶ ದೇವಾಡಿಗರವರು ಸ್ಯಾಕ್ಸೋಪೋನ್ ಕಾರ್ಯಕ್ರಮ ನೀಡಲು ಮೂರನೇ ಬಾರಿಗೆ ಅಮೇರಿಕಕ್ಕೆ

Suddi Udaya

ಇಂದಬೆಟ್ಟು: ಭಾರಿ ಸಿಡಿಲು ಗಾಳಿ ಮಳೆಗೆ ವಾಸ್ತವ್ಯದ ಮನೆಯ ಮೇಲ್ಛಾವಣಿಗೆ ಮರ ಬಿದ್ದು ಹಾನಿ, ಪ್ರಾಣಾಪಾಯದಿಂದ ಪಾರು

Suddi Udaya

ಜ.12: ಮುಂಡಾಜೆಯಲ್ಲಿ ಸಾವಿರದ ಸಾಧಕರು ಮನೆಮನದ ಸಮ್ಮಾನ:

Suddi Udaya

ಅಭಿವೃದ್ಧಿ ಕಾಮಗಾರಿಗಳಿಗೆ ದ.ಕ. ಜಿಲ್ಲೆಯ 15 ಬ್ಲಾಕ್‌ಗಳ ಮರಳು ದಾಸ್ತಾನನ್ನು ಆ್ಯಪ್ ಮೂಲಕ ಪೂರೈಸಲು ಅವಕಾಶ: ಜಿಲ್ಲಾ ಮರಳು ಉಸ್ತುವಾರಿ ಸಮಿತಿ

Suddi Udaya
error: Content is protected !!