27.1 C
ಪುತ್ತೂರು, ಬೆಳ್ತಂಗಡಿ
July 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕರ್ನೋಡಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ಪ್ರಕರಣ: ವಾರೀಸುದಾರರ ಪತ್ತೆಗೆ ಮನವಿ

ಬೆಳ್ತಂಗಡಿ: ಮೇ 5ರಂದು ಲಾಯಿಲ ಗ್ರಾಮದ ಕರ್ನೋಡಿ ಆಕೆಶಿಯ ನೆಡುತೋಪಿನಲ್ಲಿ, ಸುಮಾರು 40-45 ವರ್ಷದ ಅಪರಿಚಿತ ಗಂಡಸು ಲುಂಗಿಯನ್ನು ಹಗ್ಗದಂತೆ ಮಾಡಿಕೊಂಡು, ಕಾಟು ಜಾತಿಯ ಮರದ ಕೊಂಬೆಗೆ ಮತ್ತು ಕುತ್ತಿಗೆಗೆ ಕಟ್ಟಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ವಾರೀಸುದಾರರು ಪತ್ತೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಮನವಿ ಮಾಡಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಠಾಣಾ ಯು.ಡಿ.ಆರ್ ನಂಬ್ರ: 24/2026 ಕಲಂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಮೃತರ ವಯಸ್ಸು ಸುಮಾರು 40-45 ವರ್ಷ, ಎತ್ತರ 5ಅಡಿ 5 ಇಂಚು, ಚಹರೆ ಸಾಧಾರಣ ಶರೀರ, ಬಲ ಕೈಯ ಕೋಲು ಕೈಯ ಮುಂಭಾಗದ ಒಳ ಭಾಗದಲ್ಲಿ ಹಸಿರು ಮಿಶ್ರಿತ ಕಪ್ಪು ಬಣ್ಣದಲ್ಲಿ “ಕೃಷ್ಣ” ದೇವರ ಹಚ್ಚೆ ಇದ್ದು, ಅದರ ಕೆಳಗೆ ಆಂಗ್ಲ ಭಾಷೆಯಲ್ಲಿ “B” ಅಕ್ಷರವನ್ನು ಬರೆಯಲಾಗಿದೆ.

ಮೃತ ಗಂಡಸಿನ ವಿಳಾಸ ಅಥವಾ ವಾರೀಸುದಾರರು ಪತ್ತೆಯಾದಲ್ಲಿ ದ.ಕ ಜಿಲ್ಲಾ ಕಂಟ್ರೋಲ್ ರೂಂ ಅಥವಾ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಸಂಪರ್ಕ ಸಂಖ್ಯೆ: ದ.ಕ ಜಿಲ್ಲಾ ಕಂಟ್ರೋಲ್ ರೂಂ : 9480805300 ಬೆಳ್ತಂಗಡಿ ಪೊಲೀಸ್ ಠಾಣೆ: 08256-232093., ಪೊಲೀಸ್ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ : 9480805370.

Related posts

ಮುಂಡಾಜೆ: ಕೊಡಂಗೆ ನಿವಾಸಿ ಕಿರಣ್ ಮರಾಠೆ ನಿಧನ

Suddi Udaya

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಆರ್ಥಿಕ ನೆರವು

Suddi Udaya

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಸಪ್ತಾಹ ಕಾರ್ಯಕ್ರಮ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ವ್ಯವಹಾರದಲ್ಲಿ ಸಾಧಿಸಿದ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ

Suddi Udaya

ಕಳಿಯ ಗ್ರಾಮ ಪಂಚಾಯತ್ ನ ಮಾಸಿಕ ಸಾಮಾನ್ಯ ಸಭೆ

Suddi Udaya

ಬೆಳ್ತಂಗಡಿ : ಎಸ್.ಐ.ಟಿ ತನಿಖೆ ಮುಂದುವರಿಯಲಿ ಅರ್ಜಿದಾರರಿಗೆ ಕಿರುಕುಳ ಬೇಡ ಹೈಕೋರ್ಟ್

Suddi Udaya
error: Content is protected !!