ಬೆಳ್ತಂಗಡಿ: ಮೇ 5ರಂದು ಲಾಯಿಲ ಗ್ರಾಮದ ಕರ್ನೋಡಿ ಆಕೆಶಿಯ ನೆಡುತೋಪಿನಲ್ಲಿ, ಸುಮಾರು 40-45 ವರ್ಷದ ಅಪರಿಚಿತ ಗಂಡಸು ಲುಂಗಿಯನ್ನು ಹಗ್ಗದಂತೆ ಮಾಡಿಕೊಂಡು, ಕಾಟು ಜಾತಿಯ ಮರದ ಕೊಂಬೆಗೆ ಮತ್ತು ಕುತ್ತಿಗೆಗೆ ಕಟ್ಟಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ವಾರೀಸುದಾರರು ಪತ್ತೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಮನವಿ ಮಾಡಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಠಾಣಾ ಯು.ಡಿ.ಆರ್ ನಂಬ್ರ: 24/2026 ಕಲಂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಮೃತರ ವಯಸ್ಸು ಸುಮಾರು 40-45 ವರ್ಷ, ಎತ್ತರ 5ಅಡಿ 5 ಇಂಚು, ಚಹರೆ ಸಾಧಾರಣ ಶರೀರ, ಬಲ ಕೈಯ ಕೋಲು ಕೈಯ ಮುಂಭಾಗದ ಒಳ ಭಾಗದಲ್ಲಿ ಹಸಿರು ಮಿಶ್ರಿತ ಕಪ್ಪು ಬಣ್ಣದಲ್ಲಿ “ಕೃಷ್ಣ” ದೇವರ ಹಚ್ಚೆ ಇದ್ದು, ಅದರ ಕೆಳಗೆ ಆಂಗ್ಲ ಭಾಷೆಯಲ್ಲಿ “B” ಅಕ್ಷರವನ್ನು ಬರೆಯಲಾಗಿದೆ.
ಮೃತ ಗಂಡಸಿನ ವಿಳಾಸ ಅಥವಾ ವಾರೀಸುದಾರರು ಪತ್ತೆಯಾದಲ್ಲಿ ದ.ಕ ಜಿಲ್ಲಾ ಕಂಟ್ರೋಲ್ ರೂಂ ಅಥವಾ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಸಂಪರ್ಕ ಸಂಖ್ಯೆ: ದ.ಕ ಜಿಲ್ಲಾ ಕಂಟ್ರೋಲ್ ರೂಂ : 9480805300 ಬೆಳ್ತಂಗಡಿ ಪೊಲೀಸ್ ಠಾಣೆ: 08256-232093., ಪೊಲೀಸ್ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ : 9480805370.












