29.3 C
ಪುತ್ತೂರು, ಬೆಳ್ತಂಗಡಿ
May 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ: ಬಹುಭಾಷೆ ಕವಿಗೋಷ್ಠಿಯಲ್ಲಿ 15 ಕವಿಗಳಿಂದ 7 ಭಾಷೆಯಲ್ಲಿ ಕವನ‌ ಮಂಡನೆ

ಬೆಳ್ತಂಗಡಿ: ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹು ಭಾಷಾ ಕವಿಗೋಷ್ಠಿ 2026 ಕಾರ್ಯಕ್ರಮದಲ್ಲಿ 15 ಕವಿಗಳಿಂದ 7 ಭಾಷೆಯಲ್ಲಿ ಕವನ‌ ಮಂಡನೆ ನಡೆಯಿತು.

ಬಹುಭಾಷಾ ಕವಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ(ಬ್ಯಾರಿ), ರೇಣುಕಾ ಸುಧೀರ್ (ಕನ್ನಡ), ವಿದ್ಯಾಶ್ರೀ ಅಡೂರು(ತುಳು), ಸರಸ್ವತಿ ರಾಜಗೋಪಾಲ(ಹವ್ಯಕ), ಸಂಧ್ಯಾ ಪಾಳಂದೆ(ಚಿತ್ಪಾವತಿ ಮರಾಠಿ), ಸತ್ಯಲತಾ ಸಿದ್ಧಮೂಲೆ(ಕನ್ನಡ), ಮಹಾಬಲ ಗೌಡ(ತುಳು), ವೆಂಕಟೇಶ್ವರೀ ಕೃಷ್ಣ ಭಟ್(ಕನ್ನಡ), ವಸಂತಿ ನಿಡ್ಲೆ (ತುಳು), ಅರುಣಾ ಅರಿಪ್ಪಡಿತ್ತಾಯ(ಶಿವಳ್ಳಿ), ವಿನುತಾ ರಜತ ಗೌಡ (ಅರೆಭಾಷೆ), ಶಂಕರ ತ್ಹಾಮನ್‌ಕರ್ ಮುಂಡಾಜೆ (ಚಿತ್ಪಾವನಿ ಮರಾಠಿ), ಶ್ಯಾಮಲಾ ರಾಮ ಪ್ರಸಾದ(ಹವ್ಯಕ), ವನಜಾ ಜೋಷಿ (ಚಿತ್ಪಾವನಿ ಮರಾಠಿ), ರವೀಂದ್ರ ಶೆಟ್ಟಿ ಬಳಂಜ (ಕನ್ನಡ), ಹರೀಶ್ ನೆರಿಯ(ಕನ್ನಡ), ರೊ.‌ಪ್ರಕಾಶ ಪ್ರಭು(ಕೊಂಕಣಿ) ಭಾಷೆಯಲ್ಲಿ ಕವನ ವಾಚಿಸಿದರು.

ಸಂಜೆ‌ ನಡೆದ ಸಮಾರೋಪ ಸಮಾರಂಭದಲ್ಲಿ ಡಿ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.‌ಎಂ.ಪಿ‌ ಶ್ರೀನಾಥ್, ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ‌ ಭಿಡೆ‌ ಉಪಸ್ಥಿತರಿದ್ದು ಶುಭ ಕೋರಿದರು. ಡಾ. ಎಂ ಎಂ ದಯಾಕರ್ ವಂದಿಸಿದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ.ವಿ. ಶ್ರೀನಿವಾಸ್ ನಿಯೋಜನೆ

Suddi Udaya

ಸಾಮಾಜಿಕ ಕ್ಷೇತ್ರದ ಧುರೀಣ ಈಶ್ವರ ಭಟ್ ಕಾಂತಾಜೆ ನಿಧನ

Suddi Udaya

ಬೈಕ್ ಗೆ ಅಡ್ಡ ಬಂದ ನಾಯಿ:ಪತ್ರಿಕೆ ವಿತರಕನಿಗೆ ಗಾಯ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಗೆ ಶೇ. 88.2 ಫಲಿತಾಂಶ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರಿಂದ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಮಟ್ಟದ ಜಿನ ಭಜನೆ ಸೀಸನ್ 7ರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪಟ್ಟೂರು ಹಾಲು ಉತ್ಪದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

Suddi Udaya
error: Content is protected !!