ಬೆಳ್ತಂಗಡಿ: ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹು ಭಾಷಾ ಕವಿಗೋಷ್ಠಿ 2026 ಕಾರ್ಯಕ್ರಮದಲ್ಲಿ 15 ಕವಿಗಳಿಂದ 7 ಭಾಷೆಯಲ್ಲಿ ಕವನ ಮಂಡನೆ ನಡೆಯಿತು.
ಬಹುಭಾಷಾ ಕವಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ(ಬ್ಯಾರಿ), ರೇಣುಕಾ ಸುಧೀರ್ (ಕನ್ನಡ), ವಿದ್ಯಾಶ್ರೀ ಅಡೂರು(ತುಳು), ಸರಸ್ವತಿ ರಾಜಗೋಪಾಲ(ಹವ್ಯಕ), ಸಂಧ್ಯಾ ಪಾಳಂದೆ(ಚಿತ್ಪಾವತಿ ಮರಾಠಿ), ಸತ್ಯಲತಾ ಸಿದ್ಧಮೂಲೆ(ಕನ್ನಡ), ಮಹಾಬಲ ಗೌಡ(ತುಳು), ವೆಂಕಟೇಶ್ವರೀ ಕೃಷ್ಣ ಭಟ್(ಕನ್ನಡ), ವಸಂತಿ ನಿಡ್ಲೆ (ತುಳು), ಅರುಣಾ ಅರಿಪ್ಪಡಿತ್ತಾಯ(ಶಿವಳ್ಳಿ), ವಿನುತಾ ರಜತ ಗೌಡ (ಅರೆಭಾಷೆ), ಶಂಕರ ತ್ಹಾಮನ್ಕರ್ ಮುಂಡಾಜೆ (ಚಿತ್ಪಾವನಿ ಮರಾಠಿ), ಶ್ಯಾಮಲಾ ರಾಮ ಪ್ರಸಾದ(ಹವ್ಯಕ), ವನಜಾ ಜೋಷಿ (ಚಿತ್ಪಾವನಿ ಮರಾಠಿ), ರವೀಂದ್ರ ಶೆಟ್ಟಿ ಬಳಂಜ (ಕನ್ನಡ), ಹರೀಶ್ ನೆರಿಯ(ಕನ್ನಡ), ರೊ.ಪ್ರಕಾಶ ಪ್ರಭು(ಕೊಂಕಣಿ) ಭಾಷೆಯಲ್ಲಿ ಕವನ ವಾಚಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಡಿ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್, ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ ಭಿಡೆ ಉಪಸ್ಥಿತರಿದ್ದು ಶುಭ ಕೋರಿದರು. ಡಾ. ಎಂ ಎಂ ದಯಾಕರ್ ವಂದಿಸಿದರು.












