28.8 C
ಪುತ್ತೂರು, ಬೆಳ್ತಂಗಡಿ
August 23, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಧರ್ಮಸ್ಥಳ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಕು. ಶೌರ್ಯ ಎಸ್ ವಿ ಬರೆದಿರುವ ಚೊಚ್ಚಲ ಪುಸ್ತಕ ಪ್ರೀತಿ ಏಕೆ ಭೂಮಿ ಮೇಲಿದೆ ಬಿಡುಗಡೆ

ಬೆಳ್ತಂಗಡಿ: ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಕನ್ಯಾಡಿಯ ಕು|ಶೌರ್ಯ ಎಸ್ ವಿ ಅವರು ತನ್ನ ಅನುಭವ ಹಾಗೂ ಯುವ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಆಸಕ್ತಿಯಿಂದ ಬರೆದಿರುವ ಈ ಪುಸ್ತಕಕ್ಕೆ ಜಗದ್ಗುರು ಪೀಠ ಶೃಂಗೇರಿ ಶ್ರೀಗಳು, ಮಂತ್ರಾಲಯ ಶ್ರೀಗಳು,ಕನ್ಯಾಡಿ ಶ್ರೀಗಳು ಶುಭ ಸಂದೇಶಗಳನ್ನು ಕಳುಹಿಸಿ ಆಶೀರ್ವದಿಸಿದ್ದಾರೆ ಹಾಗೂ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಪ್ರೋತ್ಸಾಹದ ಬೆನ್ನುಡಿ ಇರುವ ಪ್ರೀತಿ ಏಕೆ ಭೂಮಿ ಮೇಲಿದೆ ಪುಸ್ತಕವನ್ನು ಬಹಳ ಪ್ರೀತಿಯಿಂದ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆ ಮಾಡಿದರು.

ಅತಿ ಚಿಕ್ಕ ವಯಸ್ಸಿನಲ್ಲಿ ಪುಸ್ತಕ ಬರೆಯುವ ಸಾಹಸ ಮಾಡಿದ ಕು ಶೌರ್ಯ ಎಸ್ ವಿ ಅವರ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೇಮಾವತಿ ವೀ. ಹೆಗ್ಗಡೆಯವರಿಗೆ ಬಿಡುಗಡೆ ಯ ಮೊದಲ ಪ್ರತಿಯನ್ನು ನೀಡಿ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ, ಸುದರ್ಶನ ಕನ್ಯಾಡಿ, ಉಪನ್ಯಾಸಕರಾದ ಮಾಧವ ಎಂಕೆ, ವಕೀಲರಾದ ಪೃಥ್ವಿಶ್ ಧರ್ಮಸ್ಥಳ, ಮಾತೃಮಂಡಳಿ ಅಧ್ಯಕ್ಷರಾದ ಮಮತಾ, ಕಾರ್ಯದರ್ಶಿ ಚಂದ್ರಾವತಿ, ಪುಸ್ತಕದ ಲೇಖಕಿ ಕು|ಶೌರ್ಯ,ಲೇಖಕಿಯವರ ತಾಯಿ ಕುಸುಮ ಉಪಸ್ಥಿತರಿದ್ದರು.

ನಂತರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ದೇವಳ ಪಾರುಪತ್ಯೆಗಾರರಾದ ಲಕ್ಷ್ಮೀನಾರಾಯಣ ರಾವ್,ಹಿರಿಯರಾದ ಆರ್ ಎನ್ ಪೂವಣಿ ಮತ್ತು ರಾಜೇಂದ್ರ ದಾಸ್ ಹಾಗೂ ಸುನಿಲ್ ಅವರಿಗೆ ಪುಸ್ತಕವನ್ನು ನೀಡಲಾಯಿತು.

Related posts

ತಾಲೂಕು ಒಕ್ಕಲಿಗ ಸಂಘದ ನೇತೃತ್ವದಲ್ಲಿ ಚಂದ್ರಶೇಖರ ಗೌಡ ಧರ್ಮದಕಲ, ಶ್ರೀಧರ ಗೌಡ ಮರಕಡ, ಜನಾರ್ಧನ ಗೌಡ ಕೇರಿಮಾರುರಿಗೆ ನುಡಿನಮನ

Suddi Udaya

ಭಾರಿ ಗಾಳಿ ಮಳೆ: ಉಜಿರೆ ಪೆರ್ಲ ನಿವಾಸಿ ಹೇಮಾವತಿರವರ ಮನೆಗೆ ತೆಂಗಿನ ಮರ ಬಿದ್ದು ಹಾನಿ: ಗ್ರಾ.ಪಂ. ನಿಂದ ನೆರವು

Suddi Udaya

ಉಜಿರೆ : ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಸಂಭ್ರಮಾಚರಣೆ ಪ್ರಯುಕ್ತ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯ: ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಸಾವು

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya

ಖೇಲೋ ಇಂಡಿಯಾ ವೇಟ್  ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ: ನಿಡ್ಲೆಯ ಪ್ರತ್ಯುಶ್ ರವರಿಗೆ ಕಂಚಿನ ಪದಕ

Suddi Udaya
error: Content is protected !!