ಬೆಳ್ತಂಗಡಿ: ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಕನ್ಯಾಡಿಯ ಕು|ಶೌರ್ಯ ಎಸ್ ವಿ ಅವರು ತನ್ನ ಅನುಭವ ಹಾಗೂ ಯುವ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಆಸಕ್ತಿಯಿಂದ ಬರೆದಿರುವ ಈ ಪುಸ್ತಕಕ್ಕೆ ಜಗದ್ಗುರು ಪೀಠ ಶೃಂಗೇರಿ ಶ್ರೀಗಳು, ಮಂತ್ರಾಲಯ ಶ್ರೀಗಳು,ಕನ್ಯಾಡಿ ಶ್ರೀಗಳು ಶುಭ ಸಂದೇಶಗಳನ್ನು ಕಳುಹಿಸಿ ಆಶೀರ್ವದಿಸಿದ್ದಾರೆ ಹಾಗೂ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಪ್ರೋತ್ಸಾಹದ ಬೆನ್ನುಡಿ ಇರುವ ಪ್ರೀತಿ ಏಕೆ ಭೂಮಿ ಮೇಲಿದೆ ಪುಸ್ತಕವನ್ನು ಬಹಳ ಪ್ರೀತಿಯಿಂದ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆ ಮಾಡಿದರು.

ಅತಿ ಚಿಕ್ಕ ವಯಸ್ಸಿನಲ್ಲಿ ಪುಸ್ತಕ ಬರೆಯುವ ಸಾಹಸ ಮಾಡಿದ ಕು ಶೌರ್ಯ ಎಸ್ ವಿ ಅವರ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೇಮಾವತಿ ವೀ. ಹೆಗ್ಗಡೆಯವರಿಗೆ ಬಿಡುಗಡೆ ಯ ಮೊದಲ ಪ್ರತಿಯನ್ನು ನೀಡಿ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ, ಸುದರ್ಶನ ಕನ್ಯಾಡಿ, ಉಪನ್ಯಾಸಕರಾದ ಮಾಧವ ಎಂಕೆ, ವಕೀಲರಾದ ಪೃಥ್ವಿಶ್ ಧರ್ಮಸ್ಥಳ, ಮಾತೃಮಂಡಳಿ ಅಧ್ಯಕ್ಷರಾದ ಮಮತಾ, ಕಾರ್ಯದರ್ಶಿ ಚಂದ್ರಾವತಿ, ಪುಸ್ತಕದ ಲೇಖಕಿ ಕು|ಶೌರ್ಯ,ಲೇಖಕಿಯವರ ತಾಯಿ ಕುಸುಮ ಉಪಸ್ಥಿತರಿದ್ದರು.

ನಂತರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ದೇವಳ ಪಾರುಪತ್ಯೆಗಾರರಾದ ಲಕ್ಷ್ಮೀನಾರಾಯಣ ರಾವ್,ಹಿರಿಯರಾದ ಆರ್ ಎನ್ ಪೂವಣಿ ಮತ್ತು ರಾಜೇಂದ್ರ ದಾಸ್ ಹಾಗೂ ಸುನಿಲ್ ಅವರಿಗೆ ಪುಸ್ತಕವನ್ನು ನೀಡಲಾಯಿತು.












