September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶಿಶಿಲದ ಕಪಿಲಾ ನದಿಯಲ್ಲಿ ನಡೆದ ಮತ್ಸ್ಯ ದುರಂತಕ್ಕೆ 30 ವರ್ಷ

ಶಿಶಿಲ : ಶಿಶಿಲದ ಕಪಿಲಾ ನದಿಯಲ್ಲಿ ದೇವರ ಮೀನೆಂದೆ ಶತಮಾನ ಕಾಲದಿಂದ ಪೂಜಿಸುತ್ತಿದ್ದಾರೆ. ಸಾವಿರಾರು ಭಕ್ತಾದಿಗಳು ಶಿಶಿಲಕ್ಕೆ ಆಗಮಿಸಿ ಕಪಿಲಾ ನದಿಯಲ್ಲಿರುವ ಮೀನುಗಳನ್ನು ಕಂಡು ಆಹಾರ ನೀಡಿ ಶಿಶಿಲೇಶ್ವರ ಸ್ವಾಮಿಯ ದರ್ಶನ ಮಾಡಿ ಪುನೀತರಾಗುತ್ತಾರೆ.

ಆದರೆ ಆ ಒಂದು ದಿನವನ್ನು ಶಿಶಿಲದ ಭಕ್ತರು ಇನ್ನೂ ನೆನಪಿಸುತ್ತಿದ್ದಾರೆ. ಅದು 25.5.96. ಇಂದಿಗೆ ಮೂವತ್ತು ವರ್ಷ ಸಂದಿದೆ.
ಇಲ್ಲಿರುವ ಮೀನುಗಳು ದೇವರ ಪ್ರತಿರೂಪ. ಇವುಗಳನ್ನು ಹಿಡಿಯುವಂತಿಲ್ಲ ಎಂದು ಬ್ರಿಟೀಷ್ ಸರಕಾರದಿಂದಲೆ ಕಾನೂನು ಬಂದಿತ್ತು. ಈಗಲೂ ಅದೆ ಕಾನೂನು ಮುಂದುವರಿದಿದೆ.
ಆದರೆ ಇದನ್ನೆಲ್ಲಾ ಸಹಿಸದ ದುಷ್ಕರ್ಮಿಗಳ ಅಂದು ಕಪಿಲಾ ನದಿಗೆ ವಿಷ ಇಕ್ಕಿ ಸಾವಿರಾರು ಮೀನುಗಳ ಮಾರಣ ಹೊಮವನ್ನೆ ನಡೆಸಿದ್ದರು. ಇದನ್ನು ಖಂಡಿಸಿ ಬ್ರಹತ್ ಭಾರೀ ಭಕ್ತರು ಬೀದಿಗಿಳಿದಿದ್ದರು.
ಸ್ವಾಮೀಜಿಗಳು, ಜನ ಪ್ರತಿನಿದಿಗಳು, ಅಧಿಕಾರಿಗಳ ದಂಡೆ ಶಿಶಿಲಕ್ಕೆ ಆಗಮಿಸಿತ್ತು. ವಿಧಾನಸಭೆಯಲ್ಲೂ ಈ ಕುರಿತು ಚರ್ಚೆಯೆ ನಡೆದಿತ್ತು.

ಊರಿಗೆ ಊರೆ ನೆರೆದು ಕಪಿಲಾ ನದಿಯಲ್ಲಿ ಮಡಿದ ಮತ್ಸ್ಯ ಸಂಕುಲಕ್ಕೆ ಕಂಬನಿ ಸುರಿದಿತ್ತು. ಮತ್ಸ್ಯ ಹಿತರಕ್ಷಣಾ ವೇದಿಕೆ ಯಿಂದ ಮತ್ಸ್ಯ ಸ್ಮಾರಕವೂ ನಿರ್ಮಾಣ ಆಗಿತ್ತು.. ಇದೆಲ್ಲವೂ ಘಟನೆ ನಡೆದಿದ್ದರೂ ಶಿಶಿಲದ ಭಕ್ತರು ಅದನ್ನು ಇನ್ನೂ ಮರೆತಿಲ್ಲ.
ಅಂತಹ ಘಟನೆ ಮುಂದೆ ನಡೆಯದಂತೆ ಜನ ಜಾಗ್ರತಿಯಾಗಿದ್ದಾರೆ. ಕಾವಲು ಸಮಿತಿ ರಚನೆಯಾಗಿದೆ. ಹಿಂದೂ ಸಂಘಟನೆಗಳು ಇನ್ನೂ ಹೆಚ್ಚು‌ಜಾಗ್ರತರಾಗಿದ್ದು ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಇದ್ದಾರೆ..
ಆದರೂ ಭಕ್ತ ಸಮೂಹ ಈ ದಿನವನ್ನು ಕರಾಳ ದಿನವಾಗಿ ಆಚರಿಸುತ್ತಿದ್ದಾರೆ. ಮಡಿದ ಮತ್ಸಸಂಕುಲದ ಸದ್ಗತಿಗಾಗಿ ಗ್ರಾಮದ ಭಕ್ತಸಮೂಹ ಈ ದಿನವನ್ನು ಪ್ರಾರ್ಥನಾ ದಿನವಾಗಿ ಮಾಡುತ್ತಿದ್ದಾರೆ ಎಂದು ಹಿಂದೂ ಧರ್ಮ ಪ್ರಸಾರ ಸಮಿತಿಯ ಪ್ರಮುಖರಾದ ಶಿಶಿಲ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ.

Related posts

ಎಲ್.ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವದ ಸಂಭ್ರಮಾಚರಣೆ

Suddi Udaya

ಟುನಿಷಿಯ ಅಂತರಾಷ್ಟ್ರೀಯ ವಿಜ್ಞಾನ ಮೇಳ: ಆಪ್ತಚಂದ್ರಮತಿ ಮುಳಿಯರವರಿಗೆ ಗ್ಯಾಂಡ್ ಗೋಲ್ಡ್ ಮೆಡಲ್

Suddi Udaya

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳ ಬಂಧನ

Suddi Udaya

ಧರ್ಮಸ್ಥಳ: 22ನೇ ಯ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಗೆ ಆಹ್ವಾನ

Suddi Udaya

ಇಚ್ಚಿಲಂಪಾಡಿ ನಿವಾಸಿ ಜಯಂತ್ ಟಿ. ರವರ ಮೇಲೆ ಹಲ್ಲೆಗೆ ಯತ್ನ: ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!