34.3 C
ಪುತ್ತೂರು, ಬೆಳ್ತಂಗಡಿ
May 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶಿಶಿಲದ ಕಪಿಲಾ ನದಿಯಲ್ಲಿ ನಡೆದ ಮತ್ಸ್ಯ ದುರಂತಕ್ಕೆ 30 ವರ್ಷ

ಶಿಶಿಲ : ಶಿಶಿಲದ ಕಪಿಲಾ ನದಿಯಲ್ಲಿ ದೇವರ ಮೀನೆಂದೆ ಶತಮಾನ ಕಾಲದಿಂದ ಪೂಜಿಸುತ್ತಿದ್ದಾರೆ. ಸಾವಿರಾರು ಭಕ್ತಾದಿಗಳು ಶಿಶಿಲಕ್ಕೆ ಆಗಮಿಸಿ ಕಪಿಲಾ ನದಿಯಲ್ಲಿರುವ ಮೀನುಗಳನ್ನು ಕಂಡು ಆಹಾರ ನೀಡಿ ಶಿಶಿಲೇಶ್ವರ ಸ್ವಾಮಿಯ ದರ್ಶನ ಮಾಡಿ ಪುನೀತರಾಗುತ್ತಾರೆ.

ಆದರೆ ಆ ಒಂದು ದಿನವನ್ನು ಶಿಶಿಲದ ಭಕ್ತರು ಇನ್ನೂ ನೆನಪಿಸುತ್ತಿದ್ದಾರೆ. ಅದು 25.5.96. ಇಂದಿಗೆ ಮೂವತ್ತು ವರ್ಷ ಸಂದಿದೆ.
ಇಲ್ಲಿರುವ ಮೀನುಗಳು ದೇವರ ಪ್ರತಿರೂಪ. ಇವುಗಳನ್ನು ಹಿಡಿಯುವಂತಿಲ್ಲ ಎಂದು ಬ್ರಿಟೀಷ್ ಸರಕಾರದಿಂದಲೆ ಕಾನೂನು ಬಂದಿತ್ತು. ಈಗಲೂ ಅದೆ ಕಾನೂನು ಮುಂದುವರಿದಿದೆ.
ಆದರೆ ಇದನ್ನೆಲ್ಲಾ ಸಹಿಸದ ದುಷ್ಕರ್ಮಿಗಳ ಅಂದು ಕಪಿಲಾ ನದಿಗೆ ವಿಷ ಇಕ್ಕಿ ಸಾವಿರಾರು ಮೀನುಗಳ ಮಾರಣ ಹೊಮವನ್ನೆ ನಡೆಸಿದ್ದರು. ಇದನ್ನು ಖಂಡಿಸಿ ಬ್ರಹತ್ ಭಾರೀ ಭಕ್ತರು ಬೀದಿಗಿಳಿದಿದ್ದರು.
ಸ್ವಾಮೀಜಿಗಳು, ಜನ ಪ್ರತಿನಿದಿಗಳು, ಅಧಿಕಾರಿಗಳ ದಂಡೆ ಶಿಶಿಲಕ್ಕೆ ಆಗಮಿಸಿತ್ತು. ವಿಧಾನಸಭೆಯಲ್ಲೂ ಈ ಕುರಿತು ಚರ್ಚೆಯೆ ನಡೆದಿತ್ತು.

ಊರಿಗೆ ಊರೆ ನೆರೆದು ಕಪಿಲಾ ನದಿಯಲ್ಲಿ ಮಡಿದ ಮತ್ಸ್ಯ ಸಂಕುಲಕ್ಕೆ ಕಂಬನಿ ಸುರಿದಿತ್ತು. ಮತ್ಸ್ಯ ಹಿತರಕ್ಷಣಾ ವೇದಿಕೆ ಯಿಂದ ಮತ್ಸ್ಯ ಸ್ಮಾರಕವೂ ನಿರ್ಮಾಣ ಆಗಿತ್ತು.. ಇದೆಲ್ಲವೂ ಘಟನೆ ನಡೆದಿದ್ದರೂ ಶಿಶಿಲದ ಭಕ್ತರು ಅದನ್ನು ಇನ್ನೂ ಮರೆತಿಲ್ಲ.
ಅಂತಹ ಘಟನೆ ಮುಂದೆ ನಡೆಯದಂತೆ ಜನ ಜಾಗ್ರತಿಯಾಗಿದ್ದಾರೆ. ಕಾವಲು ಸಮಿತಿ ರಚನೆಯಾಗಿದೆ. ಹಿಂದೂ ಸಂಘಟನೆಗಳು ಇನ್ನೂ ಹೆಚ್ಚು‌ಜಾಗ್ರತರಾಗಿದ್ದು ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಇದ್ದಾರೆ..
ಆದರೂ ಭಕ್ತ ಸಮೂಹ ಈ ದಿನವನ್ನು ಕರಾಳ ದಿನವಾಗಿ ಆಚರಿಸುತ್ತಿದ್ದಾರೆ. ಮಡಿದ ಮತ್ಸಸಂಕುಲದ ಸದ್ಗತಿಗಾಗಿ ಗ್ರಾಮದ ಭಕ್ತಸಮೂಹ ಈ ದಿನವನ್ನು ಪ್ರಾರ್ಥನಾ ದಿನವಾಗಿ ಮಾಡುತ್ತಿದ್ದಾರೆ ಎಂದು ಹಿಂದೂ ಧರ್ಮ ಪ್ರಸಾರ ಸಮಿತಿಯ ಪ್ರಮುಖರಾದ ಶಿಶಿಲ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಮಳೆಲ್ ಓರ್ ನಾಲ್ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ, ಯುವ ಬಂಟರ ಹಾಗೂ ಮಹಿಳಾ ವಿಭಾಗದ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಗುರುವಾಯನಕೆರೆ: ಕರ್ತವ್ಯದ ವೇಳೆ ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ ರೂ.1ಕೋಟಿ ವಿಮಾ ಮೊತ್ತದ ಚೆಕ್ ವಿತರಣೆ

Suddi Udaya

ಉಜಿರೆ ಅನುಗ್ರಹದಲ್ಲಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya

ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ: ವಾಣಿ ಆಂ. ಮಾ. ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಅಲಂಕೃತಗೊಂಡ ಮಚ್ಚಿನ ಶಾಲೆ ಹಾಗೂ ಪುಂಜಾಲಕಟ್ಟೆ ಶಾಲೆಯ ಮತದಾನ ಕೇಂದ್ರದಲ್ಲಿ ಬಿರುಸಿನ ಮತದಾನ

Suddi Udaya
error: Content is protected !!