23.7 C
ಪುತ್ತೂರು, ಬೆಳ್ತಂಗಡಿ
July 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶಿಶಿಲದ ಕಪಿಲಾ ನದಿಯಲ್ಲಿ ನಡೆದ ಮತ್ಸ್ಯ ದುರಂತಕ್ಕೆ 30 ವರ್ಷ

ಶಿಶಿಲ : ಶಿಶಿಲದ ಕಪಿಲಾ ನದಿಯಲ್ಲಿ ದೇವರ ಮೀನೆಂದೆ ಶತಮಾನ ಕಾಲದಿಂದ ಪೂಜಿಸುತ್ತಿದ್ದಾರೆ. ಸಾವಿರಾರು ಭಕ್ತಾದಿಗಳು ಶಿಶಿಲಕ್ಕೆ ಆಗಮಿಸಿ ಕಪಿಲಾ ನದಿಯಲ್ಲಿರುವ ಮೀನುಗಳನ್ನು ಕಂಡು ಆಹಾರ ನೀಡಿ ಶಿಶಿಲೇಶ್ವರ ಸ್ವಾಮಿಯ ದರ್ಶನ ಮಾಡಿ ಪುನೀತರಾಗುತ್ತಾರೆ.

ಆದರೆ ಆ ಒಂದು ದಿನವನ್ನು ಶಿಶಿಲದ ಭಕ್ತರು ಇನ್ನೂ ನೆನಪಿಸುತ್ತಿದ್ದಾರೆ. ಅದು 25.5.96. ಇಂದಿಗೆ ಮೂವತ್ತು ವರ್ಷ ಸಂದಿದೆ.
ಇಲ್ಲಿರುವ ಮೀನುಗಳು ದೇವರ ಪ್ರತಿರೂಪ. ಇವುಗಳನ್ನು ಹಿಡಿಯುವಂತಿಲ್ಲ ಎಂದು ಬ್ರಿಟೀಷ್ ಸರಕಾರದಿಂದಲೆ ಕಾನೂನು ಬಂದಿತ್ತು. ಈಗಲೂ ಅದೆ ಕಾನೂನು ಮುಂದುವರಿದಿದೆ.
ಆದರೆ ಇದನ್ನೆಲ್ಲಾ ಸಹಿಸದ ದುಷ್ಕರ್ಮಿಗಳ ಅಂದು ಕಪಿಲಾ ನದಿಗೆ ವಿಷ ಇಕ್ಕಿ ಸಾವಿರಾರು ಮೀನುಗಳ ಮಾರಣ ಹೊಮವನ್ನೆ ನಡೆಸಿದ್ದರು. ಇದನ್ನು ಖಂಡಿಸಿ ಬ್ರಹತ್ ಭಾರೀ ಭಕ್ತರು ಬೀದಿಗಿಳಿದಿದ್ದರು.
ಸ್ವಾಮೀಜಿಗಳು, ಜನ ಪ್ರತಿನಿದಿಗಳು, ಅಧಿಕಾರಿಗಳ ದಂಡೆ ಶಿಶಿಲಕ್ಕೆ ಆಗಮಿಸಿತ್ತು. ವಿಧಾನಸಭೆಯಲ್ಲೂ ಈ ಕುರಿತು ಚರ್ಚೆಯೆ ನಡೆದಿತ್ತು.

ಊರಿಗೆ ಊರೆ ನೆರೆದು ಕಪಿಲಾ ನದಿಯಲ್ಲಿ ಮಡಿದ ಮತ್ಸ್ಯ ಸಂಕುಲಕ್ಕೆ ಕಂಬನಿ ಸುರಿದಿತ್ತು. ಮತ್ಸ್ಯ ಹಿತರಕ್ಷಣಾ ವೇದಿಕೆ ಯಿಂದ ಮತ್ಸ್ಯ ಸ್ಮಾರಕವೂ ನಿರ್ಮಾಣ ಆಗಿತ್ತು.. ಇದೆಲ್ಲವೂ ಘಟನೆ ನಡೆದಿದ್ದರೂ ಶಿಶಿಲದ ಭಕ್ತರು ಅದನ್ನು ಇನ್ನೂ ಮರೆತಿಲ್ಲ.
ಅಂತಹ ಘಟನೆ ಮುಂದೆ ನಡೆಯದಂತೆ ಜನ ಜಾಗ್ರತಿಯಾಗಿದ್ದಾರೆ. ಕಾವಲು ಸಮಿತಿ ರಚನೆಯಾಗಿದೆ. ಹಿಂದೂ ಸಂಘಟನೆಗಳು ಇನ್ನೂ ಹೆಚ್ಚು‌ಜಾಗ್ರತರಾಗಿದ್ದು ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಇದ್ದಾರೆ..
ಆದರೂ ಭಕ್ತ ಸಮೂಹ ಈ ದಿನವನ್ನು ಕರಾಳ ದಿನವಾಗಿ ಆಚರಿಸುತ್ತಿದ್ದಾರೆ. ಮಡಿದ ಮತ್ಸಸಂಕುಲದ ಸದ್ಗತಿಗಾಗಿ ಗ್ರಾಮದ ಭಕ್ತಸಮೂಹ ಈ ದಿನವನ್ನು ಪ್ರಾರ್ಥನಾ ದಿನವಾಗಿ ಮಾಡುತ್ತಿದ್ದಾರೆ ಎಂದು ಹಿಂದೂ ಧರ್ಮ ಪ್ರಸಾರ ಸಮಿತಿಯ ಪ್ರಮುಖರಾದ ಶಿಶಿಲ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ.

Related posts

ರೆಖ್ಯ ಸರಕಾರಿ ಶಾಲೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೈತೋಟ ರಚನೆ

Suddi Udaya

ಗ್ರಾ.ಪಂ. ಮಟ್ಟದ ಸಂಜೀವಿನಿ ಮುಖ್ಯಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟದಿಂದ ಬೆಂಗಳೂರುನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ

Suddi Udaya

ಯಕ್ಷಗಾನದ ಮೇರು ಭಾಗವತ ದಿನೇಶ್ ಅಮ್ಮಣ್ಣಾಯ ನಿಧನ

Suddi Udaya

ಆಳ್ವಾಸ್ ‘ಪುನರ್ಜನ್ಮ’ ಕೇಂದ್ರದ 6ನೇ ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನಲ್ಲಿ ತೆನೆ ಹಬ್ಬ: ಬೆಳ್ತಂಗಡಿ ನಗರದಲ್ಲಿ ಸಂಭ್ರಮದ ಮೆರವಣಿಗೆ

Suddi Udaya

ಬೆಳಾಲು: ಮೈತ್ರಿ ಯುವಕ ಮಂಡಲ ವಾರ್ಷಿಕ ಮಹಾಸಭೆ ಮತ್ತು ಲೆಕ್ಕ ಪತ್ರ ಮಂಡನೆ

Suddi Udaya
error: Content is protected !!