September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶಿಶಿಲದ ಕಪಿಲಾ ನದಿಯಲ್ಲಿ ನಡೆದ ಮತ್ಸ್ಯ ದುರಂತಕ್ಕೆ 30 ವರ್ಷ

ಶಿಶಿಲ : ಶಿಶಿಲದ ಕಪಿಲಾ ನದಿಯಲ್ಲಿ ದೇವರ ಮೀನೆಂದೆ ಶತಮಾನ ಕಾಲದಿಂದ ಪೂಜಿಸುತ್ತಿದ್ದಾರೆ. ಸಾವಿರಾರು ಭಕ್ತಾದಿಗಳು ಶಿಶಿಲಕ್ಕೆ ಆಗಮಿಸಿ ಕಪಿಲಾ ನದಿಯಲ್ಲಿರುವ ಮೀನುಗಳನ್ನು ಕಂಡು ಆಹಾರ ನೀಡಿ ಶಿಶಿಲೇಶ್ವರ ಸ್ವಾಮಿಯ ದರ್ಶನ ಮಾಡಿ ಪುನೀತರಾಗುತ್ತಾರೆ.

ಆದರೆ ಆ ಒಂದು ದಿನವನ್ನು ಶಿಶಿಲದ ಭಕ್ತರು ಇನ್ನೂ ನೆನಪಿಸುತ್ತಿದ್ದಾರೆ. ಅದು 25.5.96. ಇಂದಿಗೆ ಮೂವತ್ತು ವರ್ಷ ಸಂದಿದೆ.
ಇಲ್ಲಿರುವ ಮೀನುಗಳು ದೇವರ ಪ್ರತಿರೂಪ. ಇವುಗಳನ್ನು ಹಿಡಿಯುವಂತಿಲ್ಲ ಎಂದು ಬ್ರಿಟೀಷ್ ಸರಕಾರದಿಂದಲೆ ಕಾನೂನು ಬಂದಿತ್ತು. ಈಗಲೂ ಅದೆ ಕಾನೂನು ಮುಂದುವರಿದಿದೆ.
ಆದರೆ ಇದನ್ನೆಲ್ಲಾ ಸಹಿಸದ ದುಷ್ಕರ್ಮಿಗಳ ಅಂದು ಕಪಿಲಾ ನದಿಗೆ ವಿಷ ಇಕ್ಕಿ ಸಾವಿರಾರು ಮೀನುಗಳ ಮಾರಣ ಹೊಮವನ್ನೆ ನಡೆಸಿದ್ದರು. ಇದನ್ನು ಖಂಡಿಸಿ ಬ್ರಹತ್ ಭಾರೀ ಭಕ್ತರು ಬೀದಿಗಿಳಿದಿದ್ದರು.
ಸ್ವಾಮೀಜಿಗಳು, ಜನ ಪ್ರತಿನಿದಿಗಳು, ಅಧಿಕಾರಿಗಳ ದಂಡೆ ಶಿಶಿಲಕ್ಕೆ ಆಗಮಿಸಿತ್ತು. ವಿಧಾನಸಭೆಯಲ್ಲೂ ಈ ಕುರಿತು ಚರ್ಚೆಯೆ ನಡೆದಿತ್ತು.

ಊರಿಗೆ ಊರೆ ನೆರೆದು ಕಪಿಲಾ ನದಿಯಲ್ಲಿ ಮಡಿದ ಮತ್ಸ್ಯ ಸಂಕುಲಕ್ಕೆ ಕಂಬನಿ ಸುರಿದಿತ್ತು. ಮತ್ಸ್ಯ ಹಿತರಕ್ಷಣಾ ವೇದಿಕೆ ಯಿಂದ ಮತ್ಸ್ಯ ಸ್ಮಾರಕವೂ ನಿರ್ಮಾಣ ಆಗಿತ್ತು.. ಇದೆಲ್ಲವೂ ಘಟನೆ ನಡೆದಿದ್ದರೂ ಶಿಶಿಲದ ಭಕ್ತರು ಅದನ್ನು ಇನ್ನೂ ಮರೆತಿಲ್ಲ.
ಅಂತಹ ಘಟನೆ ಮುಂದೆ ನಡೆಯದಂತೆ ಜನ ಜಾಗ್ರತಿಯಾಗಿದ್ದಾರೆ. ಕಾವಲು ಸಮಿತಿ ರಚನೆಯಾಗಿದೆ. ಹಿಂದೂ ಸಂಘಟನೆಗಳು ಇನ್ನೂ ಹೆಚ್ಚು‌ಜಾಗ್ರತರಾಗಿದ್ದು ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಇದ್ದಾರೆ..
ಆದರೂ ಭಕ್ತ ಸಮೂಹ ಈ ದಿನವನ್ನು ಕರಾಳ ದಿನವಾಗಿ ಆಚರಿಸುತ್ತಿದ್ದಾರೆ. ಮಡಿದ ಮತ್ಸಸಂಕುಲದ ಸದ್ಗತಿಗಾಗಿ ಗ್ರಾಮದ ಭಕ್ತಸಮೂಹ ಈ ದಿನವನ್ನು ಪ್ರಾರ್ಥನಾ ದಿನವಾಗಿ ಮಾಡುತ್ತಿದ್ದಾರೆ ಎಂದು ಹಿಂದೂ ಧರ್ಮ ಪ್ರಸಾರ ಸಮಿತಿಯ ಪ್ರಮುಖರಾದ ಶಿಶಿಲ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ.

Related posts

ಉಜಿರೆ ಎಸ್‌ಡಿಎಮ್ ಆಂಗ್ಲಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ಮಟ್ಟದಲ್ಲಿ ಬಹುಮಾನ

Suddi Udaya

ನೀರಿನ ಯೂನಿಟ್ ಮಿತಿ ಹೆಚ್ಚಳಕ್ಕೆ ಎಸ್‌ಡಿಪಿಐ ವತಿಯಿಂದ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ

Suddi Udaya

ಲೋಕಸಭಾ ಮಹಾಚುನಾವಣೆ ಹಿನ್ನೆಲೆ: ಕಾಜೂರು ಮಖಾಂ ಶರೀಫ್ ಉರೂಸ್ ಮುಂದಕ್ಕೆ; ಮೇ. 3 – 12 ದಿನಾಂಕ ನಿಗದಿ

Suddi Udaya

ಕೊಕ್ಕಡ: ಕೊಲ್ಲಾಜೆಪಳಿಕೆ ನಿವಾಸಿ ನಾರಾಯಣ ನಿಧನ

Suddi Udaya

ನಾವೂರು ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ಕೇರಳದ ನಕ್ಸಲ್ ರೂಪೇಶ್ ನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Suddi Udaya
error: Content is protected !!