August 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಕಕ್ಕಿಂಜೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದ ಟ್ರಾಫಿಕ್ ಕಿರಿಕಿರಿ

ಬೆಳ್ತಂಗಡಿ: ಪಟ್ಟಣದಲ್ಲಿ ದಿನೇದಿನೇ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ವಾಹನ ಸವಾರರಿಗೆ ಪಾರ್ಕಿಂಗ್ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಕಕ್ಕಿಂಜೆ ಪೇಟೆಯಲ್ಲಿ ಅಂಗಡಿಗಳು ರಸ್ತೆ ತಪ್ಪಲಿನಲ್ಲಿದ್ದು ದಿನಕಳೆದ್ದಂತೆ ರಸ್ತೆ ಮಾತ್ರ ಕಿರಿದಾಗುತ್ತಿದೆ. ಅಂಗಡಿಗಳಿಗೆ ಲೈನ್ ಸೇಲ್ ಸಾಮಾಗ್ರಿ ಹಾಕುವ ವಾಹನಗಳು ರಸ್ತೆಯಲ್ಲೆ ನಿಂತರೆ ಇತ್ತ ಕೆಲವೊಂದು ಆಟೋ ರಿಕ್ಷಾಗಳು, ಇತರ ವಾಹನಗಳು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಪ್ರತಿದಿನ ಕಕ್ಕಿಂಜೆಯಲ್ಲಿ ಟ್ರಾಫಿಕ್ ಕಿರಿಕಿರಿ ಉಲ್ಭಣಿಸುತ್ತಿದೆ ಹೊರತು ಕೊನೆಗೊಳ್ಳುತ್ತಿಲ್ಲ.

ರಾ.ಹೆ.75ರಲ್ಲಿ ಹಾದುಹೋಗುವ ಕಕ್ಕಿಂಜೆ ಪೇಟೆ ಒಂದು ಬದಿಯಾದರೆ ಇನ್ನೊಂದೆಡೆ ನೆರಿಯ, ತೊಟತ್ತಾಡಿ ಗ್ರಾಮಗಳ ಬೆಸೆಯುವ ಪ್ರಮುಖ ಕೇಂದ್ರಿಕೃತ ಪೇಟೆ ಕಕ್ಕಿಂಜೆ. ಇಲ್ಲಿ ಒಂದು ಸಣ್ಣ ಮಾದರಿಯ ಸರ್ಕಲ್‌ವಿದ್ದು ಉಜಿರೆಯಿಂದ ಬರುವ ಈ ರಸ್ತೆಯಲ್ಲಿ ನೇರವಾಗಿ ಹೋದರೆ ಚಾರ್ಮಾಡಿ, ಕೊಟ್ಟಿಗೆರೆ ಊರನ್ನು ಬೆಸೆಯಲಾಗುತ್ತದೆ, ಬಲ ಬದಿಗೆ ತಿರುಗಿಕೊಂಡಲ್ಲಿ ನೆರಿಯ, ಪುದುವೆಟ್ಟು ಗ್ರಾಮಗಳನ್ನು ಸೇರುವ ಪ್ರಮುಖ ರಸ್ತೆ ಇದಾಗಿದೆ. ಆದರೆ ದಿನಕಳೆದ್ದಂತೆ ಪಟ್ಟಣದಲ್ಲಿ ಅಂಗಡಿ ಮುಗ್ಗಂಟ್ಟುಗಳು ಬೆಳೆದು ರಸ್ತೆ ಇಕ್ಕೆಲದಲ್ಲಿ ಬಂದು ತಲುಪಿದೆ. ವಾಹನಗಳು ಅಲ್ಲಲ್ಲಿ ನಿಲ್ಲುಸುತ್ತಿರುವುದರಿಂದ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಫುಟ್‌ ಪಾತ್ ಇಲ್ಲ, ಆಗಾಗಾ ಸಣ್ಣಪುಟ್ಟ ಅನಾಹುತಗಳು ಸಂಭವಿಸುವುದು ಇಲ್ಲಿ ಸಾಮಾನ್ಯವಾಗಿದೆ. ಅಪಘಾತ ಸಂಭವಿಸಿದ ಸಂದರ್ಭ ಆಂಬುಲೆನ್ಸ್ ವಾಹನ ಹೋಗುವುದೆ ಸಾವಲು. ಇನ್ನೇನು ಮಳೆಗಾಲ ಸಮೀಪಿಸುತ್ತಿದೆ. ಇದೇ ರೀತಿಯಾದಲ್ಲಿ ಟ್ರಾಫಿಕ್ ಕಿರಿಕಿರಿಗೆ ನಾಂದಿ ಹಾಡುವವರು ಯಾರು ಇಲ್ಲಿ?… ಪಶ್ಚಿಮ ಘಟ್ಟದ ತಪ್ಪಲಿನ ನಿವಾಸಿಗಳಿಗೆ ಪ್ರಮುಖ ಪೇಟೆ ಕಕ್ಕಿಂಜೆ, ಇತ್ತ ಚಾರ್ಮಾಡಿ ಗ್ರಾಮ ಪಂಚಾಯತ್, ದಿನಸಿ ಅಂಗಡಿಗಳು, ಬ್ಯಾಂಕ್, ಆಸ್ಪತ್ರೆಗಳು ಇರುವ ಕಕ್ಕಿಂಜೆಯಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕೆಂಬುವುದು ಸಾರ್ವಜನಿಕರು ಪೋಲಿಸರನ್ನು, ಸಂಬಂಧ ಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ,

Related posts

ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಸಂಭ್ರಮಾಚರಣೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

ಶರತ್ ಮಡಿವಾಳ ಸ್ಮಾರಕಕ್ಕೆ ಪುಷ್ಪ ನಮನ

Suddi Udaya

ಆದಿಗುರು ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳಿಂದ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಭೇಟಿ

Suddi Udaya

ಉಜಿರೆ ಬದುಕು‌ ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರಿಗೆ ಪ್ರತಿಷ್ಠಿತ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ

Suddi Udaya
error: Content is protected !!