ಇಂದಬೆಟ್ಟು: ಇಲ್ಲಿಯ ದಿ ನಾರಾಯಣ ನಾಯ್ಕ್ ಅವರ ಮನೆಯಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಕಾಡುಪ್ರಾಣಿಯು ಹೊತ್ತೊಯ್ದಿ ಘಟನೆ ಮೇ 23ರಂದು ವರದಿಯಾಗಿದೆ.
ಕಳೆದ ವಾರ ಇಂದಬೆಟ್ಟು ಗ್ರಾಮದ ಕಜೆ ಪಿಲಪ್ಪಾಡಿ ಡೀಕಯ್ಯ ನಾಯ್ಕ್ ಅವರ ಮನೆಯಿಂದ ಟರ್ಕಿ ಕೋಳಿಗಳನ್ನು ಕೊಂಡು ಹೋದ ಬಗ್ಗೆ ವರದಿ ಪಡೆದ ಅರಣ್ಯ ಇಲಾಖೆ ಅದೇ ದಿನ ಬೋನ್ ಅಳವಡಿಕೆ ಮಾಡಲಾಗಿತ್ತು. ಆದರೆ ಒಂದು ವಾರದಿಂದ ಆ ಕಡೆಗೆ ಸುಳಿಯದ ಕಾಡುಪ್ರಾಣಿ ಮೇ.23ರಂದು ಹತ್ತಿರದ ಮನೆಯ ನಾಯಿಯನ್ನು ಕೊಂಡು ಹೋಗಿದೆ. ಅಲ್ಲದೆ ದಿ ಕೊರಗಪ್ಪ ನಾಯ್ಕ್ ಅವರ ಕೊಟ್ಟಿಗೆಗೆ ಸುತ್ತು ಬಂದಿದ್ದು ಭಾರಿ ದೊಡ್ಡ ಗಾತ್ರದ ಹೆಜ್ಜೆ ಗುರುತು ಪತ್ತೆಯಾಗಿದೆ.
ಗ್ರಾಮಸ್ಥರು ಇನ್ನಷ್ಟು ಭಯ ಭೀತರಾಗಿದ್ದು ರಾತ್ರಿ ಹೊತ್ತಲ್ಲಿ ಹುಲಿ ಕೂಗುವ ಶಬ್ದ ಕೇಳಿಬರುತ್ತಿತ್ತು ಎಂದು ಸ್ಥಳೀಯರು ಶಂಕಿಸಿದ್ದಾರೆ.











