ಬೆಳ್ತಂಗಡಿ:ಮಂಗಳೂರಿನ ನಂತೂರು ಸಂದೇಶ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಆಮಂತ್ರಣ ವೇದಿಕೆಯ ಅಧ್ಯಕ್ಷೆ, ಸಾಹಿತಿ, ಕವಯತ್ರಿ ಶ್ರೀಮತಿ ವಿದ್ಯಾಶ್ರೀ ಅಡೂರ್ ಅವರು ರಚಿಸಿ ಹಾಡಿರುವ ಕವಿತೆಯೆoಬ ಕೇದಗೆ ಎಂಬ ಭಾವಗೀತೆಯ ಧ್ವನಿ ಮುದ್ರಣ ಬಿಡುಗಡೆಗೊಂಡಿತು.
ಖ್ಯಾತ ಹಾಸ್ಯ ಬರಹಗಾರ್ತಿಯಾದ ಭುವನೇಶ್ವರಿ ಹೆಗಡೆ,ಕಲಾಪೋಷಕರಾದ ಭುಜಬಲಿ ಧರ್ಮಸ್ಥಳ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಭಾವಗೀತೆ ಲೋಕಾರ್ಪಣೆಯನ್ನು ನೆರವೇರಿಸಿದರು.
ಈ ಭಾವಗೀತೆಯನ್ನು ವಿದ್ಯಾಶ್ರೀ ಅವರ ಎರಡನೇ ಕವನಸಂಕಲನ ಭಾವಬೇತಾಳದಿಂದ ಆರಿಸಿಕೊಳ್ಳಲಾಗಿದೆ.ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಮಂಗಳೂರು ಘಟಕದ ಪದಪ್ರಧಾನ ಸಮಾರಂಭದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರು ಆಮಂತ್ರಣದ ನಿಯೋಜಿತ ಅಧ್ಯಕ್ಷರಾದ ಲತೇಶ್ ಪುತ್ರನ್, ದ. ಕ ಜಿಲ್ಲಾಧ್ಯಕ್ಷರಾದ ವಿಂಧ್ಯಾ ರೈ ಕಡೆಶಿವಾಲಯ, ಆಮಂತ್ರಣದ ರೂವಾರಿಯಾದ ವಿಜಯ್ ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.











